ಕಳೆದ ಭಾನುವಾರ ಸುರಿದ ಗಾಳಿ ಸಹಿತ ಮಳೆಗೆ ಧಾರವಾಡದಲ್ಲಿ ಮರವೊಂದು ರಸ್ತೆಗೆ ಅಡ್ಡಲಾಗಿ ಉರುಳಿಬಿದಿದ್ದು, ಸಂಚಾರ ಅಸ್ವಸ್ಥ್ ಉಂಟಾಗಿ ಪಾಲಿಕೆ ಅಧಿಕಾರಿಗಳ ವಿರುದ್ಧ ಸ್ಥಳೀಯ ಜನ ಸೇರಿ ವಾಹನ ಸವಾರರು ಅಧಿಕಾರಿಗಳಿಗೆ ಹಿಡಿ ಶಾಪ ಹಾಕುತ್ತಿದ್ದಾರೆ.

ನಗರದ ರಾಣಿ ಚೆನ್ನಮ್ಮ ನಗರದ ಮುಖ್ಯ ರಸ್ತೆಯಲ್ಲಿ ಮಳೆಗಾಳಿ ಮರ ಧರೆಗೆ ಉರುಳಿದ್ದು, ಸ್ಥಳೀಯ ಜನ ಪರದಾಡುವ ಸ್ಥಿತಿ ನಿರ್ಮಾನವಾಗಿದೆ. ಕಳೆದ ಭಾನುವಾರ ಸಂಜೆ ಈ ಘಟನೆ ನಡೆದಿದ್ದರು ಕೂಡಾ ಪಾಲಿಕೆ ಅಧಿಕಾರಿಗಳು ಸ್ಥಳಕ್ಕೆ ಬಾರದೇ ಹಾಗೂ ಮರ ತೆರವು ಮಾಡದೇ ಇರು ಅಧಿಕಾರಿಗಳ ನಿರ್ಲಕ್ಷ ನಡೆಗೆ ಜನ ಹಿಡಿಶಾಪ ಹಾಕುತ್ತಿದ್ದಾರೆ. ಜತೆಗೆ ಮರ ಬಿದ್ದ ಸಂದರ್ಭದಲ್ಲಿ ವಾಹನ ಸಂಚಾರ ಕಡಿಮೆ ಪ್ರಮಾಣದಲ್ಲಿ ಇದಿದ್ದರಿಂದ ಅನಾಹುತವೊಂದು ತಪ್ಪಿದೆ. ಕಾರ್ ಮೇಲೆ ಮರ ಬಿದಿದ್ದು, ಕಾರಗೆ ಹಾನಿಯಾಗಿದೆ. ಪ್ರಾಣ ಹಾನಿಯ ಕುರಿತು ಯಾವುದೇ ವರದಿಯಾಗಿಲ್ಲ.

