ಕಾಗವಾಡ ತಾಲೂಕಿನ ಜುಗುಳ ಗ್ರಾಮದ ಹಿರಿಯ ಸಮಾಜಸೇವಕ ಬಾಬುಗೌಡ ರಾಮಗೌಡ ಪಾಟೀಲ್ (69) ಅವರು ಬುಧವಾರ ನಿಧನರಾದರು.

ಮೃತರು ಸ್ಥಳೀಯ ಪಿಕೆಪಿಎಸ್ ಸಂಸ್ಥೆ, ಕರ್ನಾಟಕ ಶಿಕ್ಷಣ ಸಂಸ್ಥೆ, ಜನತಾ ಅರ್ಬನ್ ಕೋ ಬ್ಯಾಂಕ್ ನಿರ್ದೇಶಕರಾಗಿ ಸೇವೆ ಸಲ್ಲಿಸುತ್ತಿದ್ದರು. ಮೃತರು ಪತ್ನಿ, ಮೂರು ಪುತ್ರಿಯರು, ಓರ್ವ ಪುತ್ರ ಸೇರಿದಂತೆ ಅಪಾರ ಬಂಧುಬಳಗವನ್ನು ಅಗಲಿದ್ದಾರೆ.
