Vijaypura

ಮೂರನೇ ಪೀಠಕ್ಕೆ ನಿರಾಣಿ ಕುಟುಂಬ ಎಂಟ್ರಿ:ಟೀಕಿಸೋರಿಗೆ ಟಾಂಗ್ ನೀಡಿದ ನಿರಾಣಿ ಬ್ರದರ್ಸ್

Share

ಸದ್ಯ ರಾಜ್ಯದಲ್ಲಿ ಪಂಚಮಸಾಲಿ 3ನೇ ಪೀಠ ಅಸ್ತಿತ್ವಕ್ಕೆ ವಿಚಾರಕ್ಕೆ ಸಂಬಂಧಿಸಿದಂತೆ ತಯಾರಿ ಜೋರಾಗಿ ನಡೆಯುತ್ತಿದೆ. 3ನೇ ಪೀಠಕ್ಕು ನಿರಾಣಿ ಕುಟುಂಬದ ಅಧಿಕೃತ ಎಂಟ್ರಿಯಾಗಿರೋದು ಹಲವರ ಅಚ್ಚರಿಗೆ ಕಾರಣವಾಗಿದೆ‌. ಇಷ್ಟು ದಿನ ನಿರಾಣಿ ಕುಟುಂಬಕ್ಕೆ 3 ನೇ ಪೀಠ ಸಂಬಂಧವೇ ಇಲ್ಲಾ ಎನ್ನಲಾಗುತ್ತಿತ್ತು. ಆದ್ರೆ ಇದೀಗ ನಿರಾಣಿ ಕುಟುಂಬ ಎಂಟ್ರಿ ಎಲ್ಲರೂ ಹುಬ್ಬೇರಿಸುವಂತೆ ಮಾಡಿದೆ. ಇನ್ನೂ ವಿಜಯಪುರ ನಗರ ಶಾಸಕ ಯತ್ನಾಳ ಗೆ ಟಾಂಗ್ ನೀಡಿದೆ. ಈ ಕುರಿತು ಇಲ್ಲಿದೆ ಡಿಟೇಲ್ಸ್…

ರಾಜ್ಯದಲ್ಲಿ ಪಂಚಮಸಾಲಿ ಸಮಾಜದ 3ನೇ ಪೀಠಕ್ಕೆ ಸಂಬಂಧಿಸಿದ ಹಾಗೆ ಹಲವು ಗೊಂದಲಗಳು ಸೃಷ್ಟಿಯಾಗಿದ್ದವು. 3 ನೇ ಪೀಠದ ಕುರಿತು ವಿಜಯಪುರ ನಗರ ಶಾಸಕ ಬಸನಗೌಡ ಪಾಟೀಲ ಯತ್ನಾಳ ವಿರೋಧಿಸಿ ನಿರಾಣಿ ಪೀಠ ಅಂತಾನೇ ಟೀಕಿಸುತ್ತಿದ್ದಾರೆ‌‌. ಇದಕ್ಕೆ ಯಾವದಕ್ಕೆ ತಲೆಗೆಡಿಸಿಕೊಳ್ಳದೇ 3 ನೇ ಪೀಠಾರೋಹಣದ ಜವಾಬ್ದಾರಿಯನ್ನು ಸಚಿಚ ಮುರುಗೇಶ ನಿರಾಣಿ ಸಹೋದರ ಸಂಗಮೇಶ ನಿರಾಣಿ ತೆಗೆದುಕೊಂಡಿದ್ದಾರೆ. ಮೂರನೇ ಪೀಠ ನಿರಾಣಿ ಪೀಠ ಎಂದ ಆರೋಪಿಸಿದ್ದ ಶಾಸಕ ಬಸನಗೌಡ ಯತ್ನಾಳರಿಗೆ ಅಧಿಕೃತ ಎಂಟ್ರಿ ಮೂಲಕ ಯತ್ನಾಳಗೆ ನಿರಾಣಿ ಕುಟುಂಬಸ್ಥರು ಟಾಂಗ್‌ ನೀಡಿದ್ದಾರೆ‌. ಈಗ ಅಧಿಕೃತವಾಗಿಯೇ ಮೂರನೇ ಪೀಠಕ್ಕೆ ನಿರಾಣಿ ಕುಟುಂಬದ ಸಂಗಮೇಶ ನಿರಾಣಿ ವಿಜಯಪುರ ಜಿಲ್ಲೆ ಬಬಲೇಶ್ವರದಲ್ಲಿ ತಡರಾತ್ರಿ ವರೆಗು ಮೂರನೇ ಪೀಠದ ನಿಯೋಜಿತ ಪೀಠಾಧಿಕಾರಿ ಗುರುಪಾದೇಶ್ವರ ಶ್ರೀಗಳ ಮಠದಲದಲ್ಲಿ ಸಭೆ ನಡೆಸಿದರು. ಇದೇ ಸಂದರ್ಭದಲ್ಲಿ ಪೀಠಾರೋಹಣ ಕಾರ್ಯಕ್ರಮದ ಪೋಸ್ಟರ್ ಬಿಡುಗಡೆ ಮಾಡಲಾಯಿತು.

ಇನ್ನೂ ಹರಿಹರ ಪಂಚಮಸಾಲಿ ಪೀಠದ ವಚನಾನಂದ ಶ್ರೀ ಹಾಗೂ ಸಂಗಮೇಶ ನಿರಾಣಿಯವರು ದಿನಾಂಕ. 13ರಂದು ನಡೆಯಲಿರುವ ಪಂಚಮಸಾಲಿ 3ನೇ ಪೀಠದ ಪೀಠಾರೋಹಣ ಕಾರ್ಯಕ್ರಮಕ್ಕೆ ಆಹ್ವಾನವಿತ್ತರು. 3ನೇ ಪೀಠಕ್ಕೆ ಪೀಠಾಧಿಕಾರಿಗಳಾಗಿ ಪೀಠಾರೋಹಣ ಮಾಡಲಿರುವ ಬಬಲೇಶ್ವರ ಮಠದ ಗುರು ಪಾದೇಶ್ವರ ಸ್ವಾಮೀಜಿಗಳಿಗೆ ಸನ್ಮಾನಿಸಿದರು. ಜಮಖಂಡಿಯಲ್ಲಿ ನಡೆಯಲಿರುವ ಬೃಹತ್ ಪೀಠಾರೋಹಣ ಕಾರ್ಯಕ್ರಮದಲ್ಲಿ 1 ಲಕ್ಷಕ್ಕು ಅಧಿಕ ಜನರು ಸೇರುವ ನಿರೀಕ್ಷೆ ಇದೆ ಎಂದು ಸಂಗಮೇಶ ನಿರಾಣಿ ಹೇಳಿದರು. ಶಾಸಕ ಯತ್ನಾಳರ ಕುರಿತು ಪ್ರತಿಕ್ರಿಯಿಸಿ ಹಗುರವಾದ ಮಾತುಗಳಾಡುವ ಹಗುರ ವ್ಯಕ್ತಿಗಳನ್ನು ಕಡೆಗಣಿಸಬೇಕು ಎನ್ನೋ ಮೂಲಕ ಯತ್ನಾಳರನ್ನು ಸೈಡಲೈನ್ ಮಾಡಿದರು.

ಇನ್ನೂ ಸಭೆಯಲ್ಲಿ ಭಾಗವಹಿಸಿದ್ದ ವಚನಾನಂದ ಶ್ರೀಗಳು ತಮ್ಮ ವಿರುದ್ಧ ಶಾಸಕ ಯತ್ನಾಳ್ ವಾಗ್ದಾಳಿ ವಿಚಾರಕ್ಕೆ ಪ್ರತಿಕ್ರಿಯಿಸಿ ನಮ್ಮ ವ್ಯಕ್ತಿತ್ವದ ಬಗ್ಗೆ ಮಾತನಾಡುವ ಹಗುರ ವ್ಯಕ್ತಿಗಳ ಮಾತುಗಳನ್ನು ಹಗುರವಾಗಿ ಕೈಬಿಡಬೇಕು ಎಂದರು. ಬಜೆಟ್ ಮುನ್ನವೇ ಪಂಚಮಸಾಲಿ ಸಮಾಜಕ್ಕೆ ೨ಎ ಮೀಸಲಾತಿ ಘೋಷಣೆಗೆ ಕೂಡಲಸಂಗಮ ಶ್ರೀ ಡೆಡ್ಲೈನ್ ವಿಚಾರಕ್ಕೆ ಪ್ರತಿಕ್ರಿಯಿಸಿ ಕೂಡಲಸಂಗಮ ಶ್ರೀ ಡೆಡ್ಲೈನ್ ಗೆ ವಚನಾನಂದ ಶ್ರೀ ಟಾಂಗ್ ನೀಡಿ ನಾವು ಲೈಫ್ಲೈನ್ ಕೊಡುವ ಸ್ವಾಮೀಜಿಗಳು, ಸಾಂವಿಧಾನಿಕ, ಕಾನೂನಾತ್ಮಕ ವಿಧಾನ ಯಾವುದು ಇದೆ, ಅದನ್ನು ಅನುಸರಿಸೋ ಸ್ವಾಮಿಗಳು ನಾವು, ಎಲ್ಲರೂ ಒಪ್ಪಿಕೊಳ್ಳುವ,ಅಪ್ಪಿಕೊಳ್ಳುವಂತಹ ನಿರ್ಧಾರ ತೆಗೆದುಕೊಳ್ಳುವಂತಹ ವಿಚಾರಕ್ಕೆ ನಿಂತಿರೋ ಸ್ವಾಮಿಗಳು ನಾವು ಎಂದ ವಚನಾನಂದ ಶ್ರೀಗಳು ಟಾಂಗ್ ನೀಡಿದರು.ಪಂಚಮಸಾಲಿ ಸಮಾಜಕ್ಕೆ ೨ಎ ಮೀಸಲಾತಿ ವಿಚಾರದಲ್ಲಿ ಬಹಳಷ್ಟು ಕಾರ್ಯ ನಡೀತಿವೆ, ಕೇಂದ್ರ ಹಿಂದುಳಿದ ಆಯೋಗಕ್ಕೂ ಅರ್ಜಿ ಸಲ್ಲಿಸಿದ್ದೇವೆ. ರಾಜ್ಯ ಹಿಂದುಳಿದ ಆಯೋಗಕ್ಕೆ ನಾವು 900ಪುಟಗಳ ದಾಖಲಾತಿ ಕೊಟ್ಟಿದ್ದೇವೆ..‌ಈಗ ಎಲ್ಲಾ ಕಾರಣಕ್ಕೆ ಎಲ್ಲಾ ತಾಲೂಕು, ಜಿಲ್ಲೆಯಲ್ಲಿ ಸಮೀಕ್ಷೆ ಮಾಡ್ತಿದ್ದಾರೆ.. ಕೇಂದ್ರದಲ್ಲಿ ಲಿಂಗಾಯತರಿಗೆ ಓಬಿಸಿ ಸಿಗಬೇಕಂತಿದೆ, ಮೂರುದಿನಗಳ ಹಿಂದೆ ರಾಜ್ಯಪಾಲರಿಗೆ ಭೇಟಿ ಆಗಿದ್ದೇವೆ, ಅವರೊಂದಿಗೆ ಒಂದುವರೆ ಗಂಟೆ ಮೀಸಲಾತಿ ಬಗ್ಗೆ ಚರ್ಚೆಸಿದ್ದೇವೆ, ಮರುದಿನ ಸಿಎಂ ಜೊತೆಗೆ ಚರ್ಚೆ ಮಾಡಿದ್ದೇವೆ.. ಹೊರಗಡೆ ಹೋರಾಟದ ಅವಶ್ಯವಿತ್ತು ಎಂದರು.ನಾಳೆ ಸರ್ಕಾರ ಮೀಸಲಾತಿ ಘೋಷಣೆ ಮಾಡಿದ್ರೆ, ಯಾರೊಬ್ಬರು ರಿಟ್ ಹಾಕಿ, ರಿಜೆಕ್ಟ್ ಯಾದ್ರೆ ಆಗ ಸ್ವಾಮೀಜಿಗಳನ್ನು ಜನ ಕೇಳ್ತಾರೆ ಎಂದು ಹೇಳಿದರು.

ಒಟ್ನಲ್ಲಿ 3 ನೇ ಪೀಠದ ಪಿಠಾರೋಹಣಕ್ಕೆ ಭರ್ಜರಿ ತಯಾರಿಗಳು ನಡೆಯುತ್ತಿವೆ. ಫೆ.13 ಕ್ಕೆ ಪಿಠಾರೋಹಣ ನಡೆಯಲಿದ್ದು ಅಲ್ಲಿಯವರೆಗೆ ಮತ್ತ್ಯಾವ ಬೆಳವಣಿಗೆಗಳು ನಡೆಯುತ್ತವೆಯೋ ಕಾದು ನೋಡಬೇಕಿದೆ.

Tags:

error: Content is protected !!