ವಿಜಯಪುರ ಜಿಲ್ಲೆಯಲ್ಲಿ ತಾರಕಕ್ಕೇರಿದ ಹಿಜಾಬ್ ಮತ್ತು ಕೇಸರಿ ಶಾಲು ವಿವಾದ ಮುಗಿಯುವ ಲಕ್ಷಣಗಳು ಕಂಡುಬರುತ್ತಿಲ್ಲಾ. ವಿಜಯಪುರ ನಗರದ ಸರ್ಕಾರಿ ಪದವಿಪೂರ್ವ ಮತ್ತು ಪದವಿ ಮಹಾವಿದ್ಯಾಲಯದಲ್ಲಿ ಗೊಂದಲ ಉಂಟಾಗಿತ್ತು.

ಹಿಜಾಬ್ ಧರಿಸಿಯೇ ತರಗತಿಗಳಿಗೆ ಹಾಜರಾದ ವಿದ್ಯಾರ್ಥಿನಿಯರಿಗೆ ಸರ್ಕಾರದ ವಸ್ತ್ರ ನೀತಿ ಸಂಹಿತೆ ಪಾಲಿಸಬೇಕೆಂದು ಕಾಲೇಜಿನ ಪ್ರಾಂಶುಪಾಲರು ಹಾಗೂ ಉಪನ್ಯಾಸಕರು ಮನವಿ ಮಾಡಿದರು. ಇದನ್ನು ಧಿಕ್ಕರಿಸಿದ ವಿದ್ಯಾರ್ಥಿನಿಯರು ತರಗತಿ ಯೊಳಗೆ ಹಿಜಾಬ್ ತೆಗೆದು ಹಾಜರಾಗಬೇಕೆಂದು ಸೂಚನೆ ನೀಡಿದ್ದರು ಕೇಳಿದ ವಿದ್ಯಾರ್ಥಿನಿಯರು, ಹುಜಾಬ್ ಧರಿಸಿಯೇ ತರಗತಿಗಳಲ್ಲಿ ಕುಳಿತರು. ಇತರೆ ವಿದ್ಯಾರ್ಥಿನಿಯರ ಜೊತೆಗೆ ಹಿಜಾಬ್ ಧರಿಸಿಯೇ ತರಗತಿಗಳಲ್ಲಿ ಕುಳಿತ ವಿದ್ಯಾರ್ಥಿನಿಯರು, ಹಿಜಾಬ್ ತೆಗೆಯಲ್ಲಾ ಎಂದು ವಿದ್ಯಾರ್ಥಿನಿ ಯರು ಪಟ್ಟು ಹಿಡಿದರು.

ವಿಷಯ ತಿಳಿದ ಡಿಡಿಪಿಯು ಸೇರಿದಂತೆ, ತಹಶಿಲ್ದಾರ ಸಿದ್ರಾಯ ಭೋಸಗಿ ಕಾಲೇಜಿಗೆ ಭೇಟಿ ನೀಡಿದರು. ಹಿಜಾಬ್ ಸಹಿತ ತರಗತಿಗಳಿಗೆ ಬಿಡಬೇಕೆಂದು ಪಟ್ಟು ಹಿಡಿದಿದ್ದ ವಿದ್ಯಾರ್ಥಿನಿಯರು ಅವಕಾಶ ನೀಡದ ಕಾರಣ ತರಗತಿಗಳನ್ನು ಬಹಿಷ್ಕರಿಸಿ ಪ್ರತಿಭಟನೆ ನಡೆಸುತ್ತಿದ್ದರು. ಬಳಿಕ ವಿದ್ಯಾರ್ಥಿನಿಯರ ಮನವೋಲಿಕೆ ಮಾಡುತ್ತಿರೋ ನ್ಯಾಯವಾದಿ
ಸಮದ್ ಸುತಾರ್ ಎಂಬ ನ್ಯಾಯವಾದಿಯಿಂದ ವಿದ್ಯಾರ್ಥಿನಿಯರ ಮನವೋಲಿಕೆಗೆ ಯತ್ನ ನಡೆದು ಸರ್ಕಾರದ ನಿಯಮದಂತೆ ತರಗತಿವರೆಗೆ ಮಾತ್ರ ಹಿಜಾಬ್ ಧರಿಸಿ ತರಗತಿ ಗಳಲ್ಲಿ ಹಿಜಾಬ್ ತೆರೆಯಬೇಕೆಂದು ವಿದ್ಯಾರ್ಥಿನಿಯರಿಗೆ ತಿಳವಳಿಕೆಯನ್ನು ನ್ಯಾಯವಾದಿ ಸಮದ್ ಸುತಾರ್ ನೀಡಿದರು.
ಡಿಡಿಪಿಯು ಎನ್ ಕೆ ಬಗಲಿ ಹಾಗೂ ವಿಜಯಪುರ ತಹಶಿಲ್ದಾರ ಸಿದ್ದರಾಯ ಬೋಸಗಿ ಹಾಗೂ ಪೊಲೀಸ್ ಅಧಿಕಾರಿಗಳಿಂದಲೂ ವಿದ್ಯಾರ್ಥಿನಿಯರ ಮನವೋಲಿಕೆಗೆ ಕಸರತ್ತು ನಡೆಯಿತು. ವಿದ್ಯಾರ್ಥಿನಿಯರ ಪ್ರತಿಭಟನೆ ವಿಷಯ ತಿಳಿದ ಪೋಷಕರು ಕಾಲೇಜು ಎದುರು ಬಂದು ನಮ್ಮ ಮಕ್ಕಳನ್ನ ಕಾಲೇಜಿನಿಂದ ಹೊರಗೆ ಯಾಕೆ ಹಾಕಿದ್ರಿ ಎಂದು ಗಲಾಟೆ ಮಾಡಿದರು.
ಕಾಲೇಜು ಒಳಗೆ ಪೋಷಕರು ಬರದಂತೆ ತಡೆದ ಪೊಲೀಸರು, ಗೇಟ್ ಹೊರಗೆ ಪ್ರತಿಭಟನೆ ನಡೆಸಿದರು. ಆಗ ಜೊತೆಗೂಡಿದ ವಿದ್ಯಾರ್ಥಿನಿಯರು ಕೂಡಾ ಪೋಷಕರ ಜೊತೆಗೂಡಿ ವಿ ವಾಂಟ್ ಜಸ್ಟೀಸ್, ನಮ್ಗೆ ನ್ಯಾಯ ಬೇಕು ಎಂದು ವಿದ್ಯಾರ್ಥಿಗಳು ಹಾಗೂ ಪೋಷಕರು ಘೋಷಣೆ ಕೂಗಿದರು. ಪ್ರತಿಭಟನೆಯ ಬಳಿಕ ವಿದ್ಯಾರ್ಥಿನಿಯರು ಹಾಗೂ ಪೋಷಕರು ವಾಪಸ್ ಮನೆಗೆ ತೆರಳಿದರು. ತರಗತಿಗಳಿಗೆ ಹಾಜರಾಗದ ವಾಪಸ್ ಮನೆಗೆ ತೆರಳಿದ ನೂರಕ್ಕೂ ಅಧಿಕ ವಿದ್ಯಾರ್ಥಿನಿಯರು ವಾಪಸು ತೆರಳಿದರು. ಸ್ಥಳದಲ್ಲಿಯೇ ಬೀಡುಬಿಟ್ಟ ಪೊಲೀಸರು ಹಾಗೂ ಇತರೆ ಅಧಿಕಾರಿಗಳು, ಯಾವುದೇ ಅಹಿತಕರ ಘಟನೆ ನಡೆಯದಂತೆ ಖಾಕಿ ಪಡೆ ಕ್ರಮ ಕೈಗೊಂಡಿತು.