Khanapur

ಮಾಡಿಗುಂಜಿ ವ್ಯಾಪ್ತಿಯಲ್ಲಿ ಚಿರತೆ ಪ್ರತ್ಯಕ್ಷ: ಸಾರ್ವಜನಿಕರಲ್ಲಿ ಆತಂಕ, ಅರಣ್ಯ ಇಲಾಖೆಗೆ ಮನವಿ

Share

ಖಾನಾಪುರ ತಾಲೂಕಿನ ಮಾಡಿಗುಂಜಿ ಪ್ರದೇಶದಲ್ಲಿ ಕಳೆದ ಹದಿನೈದು ದಿನಗಳಿಂದ ನಿರಂತರವಾಗಿ ಚಿರತೆ ಕಾಣಿಸಿಕೊಳ್ಳುತ್ತಿರುವುದು ಸಾರ್ವಜನಿಕರು ಹಾಗೂ ರೈತರ ನಿದ್ದೆಗೆಡಿಸಿದೆ. ಮುಂಜಾನೆ ವಾಯುವಿಹಾರಕ್ಕೆ ತೆರಳುವ ನಾಗರಿಕರು ಹಾಗೂ ಜಮೀನಿಗೆ ತೆರಳುವ ರೈತರ ಕಣ್ಣಿಗೆ ಚಿರತೆ ಪ್ರತ್ಯಕ್ಷವಾಗಿದ್ದು, ಈಗಾಗಲೇ ಗ್ರಾಮದ ನಾಯಿಗಳನ್ನು ಬೇಟೆಯಾಡಿದೆ. ತೆರೆದ ಕೊಟ್ಟಿಗೆಗಳಲ್ಲಿ ಜಾನುವಾರುಗಳನ್ನು ಕಟ್ಟುವುದರಿಂದ ಅವುಗಳ ಪ್ರಾಣಕ್ಕೂ ಅಪಾಯ ಎದುರಾಗಿದೆ. ಸಾರ್ವಜನಿಕರು ಅಥವಾ ಜಾನುವಾರುಗಳ ಮೇಲೆ ಯಾವುದೇ ಜೀವಹಾನಿ ಸಂಭವಿಸುವ ಮುನ್ನ ಅರಣ್ಯ ಇಲಾಖೆಯು ಚಿರತೆಯನ್ನು ಬೋನು ಹಾಕಿ ಸೆರೆಹಿಡಿಯಬೇಕೆಂದು ಮಾಡಿಗುಂಜಿ ಗ್ರಾಮಸ್ಥರು ಗುಂಜಿ ವಲಯ ಅರಣ್ಯಾಧಿಕಾರಿಗಳಿಗೆ ಮನವಿ ಸಲ್ಲಿಸಿದರು. ಈ ಸಂದರ್ಭದಲ್ಲಿ ಸಾಮಾಜಿಕ ಕಾರ್ಯಕರ್ತ ಪಂಕಜ್ ಕುಟ್ರೇ, ರಾವ್ ಜಿ ಬೀರ್ಜೆ ಸೇರಿದಂತೆ ಹಲವು ಪ್ರಮುಖರು ಉಪಸ್ಥಿತರಿದ್ದರು.

Tags:

error: Content is protected !!