ಕುಡಚಿ: ರಾಯಬಾಗ ತಾಲೂಕಿನ ಕುಡಚಿ ಸಮೀಪದ ಪರಮಾನಂದವಾಡಿ ಗ್ರಾಮದ ನೀರು ಶುದ್ದೀಕರಣ ಘಟಕದ ಬಳಿ ನೂತನ ಗ್ರಾಮ ಪಂಚಾಯತಿ ಕಟ್ಟಡಕ್ಕೆ ಪಾಯಾ ತುಂಬುವ ಕಾರ್ಯಕ್ಕೆ ಚಾಲನೆ ನೀಡಿದರು. ಕೇಂದ್ರ ಸರ್ಕಾರದ ಉದ್ಯೋಗ ಖಾತರಿ ಯೋಜನೆ ಅಡಿಯಲ್ಲಿ 20 ಲಕ್ಷರೂಪಾಯಿ ಹಾಗೂ ಎಸ್ಕೋ ಅನುದಾನದಡಿಯಲ್ಲಿ 19 ಲಕ್ಷ 35 ಸಾವಿರ ಸೇರಿದಂತೆ ಒಟ್ಟು 39 ಲಕ್ಷ 35 ಸಾವಿರ ರೂಪಾಯಿ ವೆಚ್ಚದಲ್ಲಿ ನೂತನ ಕಟ್ಟಡ ನಿರ್ಮಾಣಗೊಳ್ಳಲಿದೆ.
ನೂತನ ಕಟ್ಟಡದ ಪಾಯಾ ಪೂಜೆಯನ್ನು ನೆರವೇರಿಸುವ ಮೂಲಕ ಕುಡಚಿ ಮತಕ್ಷೇತ್ರದ ಶಾಸಕ ಮಹೇಂದ್ರ ತಮ್ಮಣ್ಣವರ ಚಾಲನೆ ನೀಡಿದರು. ಅವರ ಜೊತೆ ತಾಲೂಕಾ ಪಂಚಾಯತ್ ಕಾರ್ಯನಿರ್ವಾಹಕ ಅಧಿಕಾರಿ ಸುರೇಶ್ ಕದ್ದು, ಪಿಡಿಒ ಉಮೇಶ ಪೋಳ, ಗ್ರಾಮ ಪಂಚಾಯತಿ ಅಧ್ಯಕ್ಷರು ಉಪಾಧ್ಯಕ್ಷರುಸದಸ್ಯರು ಭಾಗಿಯಾಗಿದ್ದರು.
ಈ ಸಂದರ್ಭದಲ್ಲಿ ಗ್ರಾಮಪಂಚಾಯತಿ ಅಧ್ಯಕ್ಷ ದಶರಥ ಕುರಣೆ, ಉಪಾಧ್ಯಕ್ಷ ಸೈದಾಬಿ ಸೈಯ್ಯದ, ಹಿರಿಯ ಧುರೀಣರಾದ ತಾಲುಕಾ ಪಂಚಾಯತಿ ಮಾಜಿ ಸದಸ್ಯ ಸಾತಪ್ಪಾ ಅಂಬಿ, ನಿಂಗಪ್ಪಾ ಮರಗ್ಗನ್ನವರ್, ಗ್ರಾಮ ಪಂಚಾಯತಿ ಸದಸ್ಯರಾದ ಪದ್ಮಣಾ ಮಿರ್ಜೆ ,ದೀಲಿಪ್ ಗಂಡೋಸಿ, ಸಲೀಮ ಮುಲ್ಲಾ, ಮಹಾವೀರ ಚಂಡಕೆ, ಬಾದಶಾ ಡಾಂಗೆ, ಫಾಕೀಜಾ ಜಮಾದರ, ಗುತ್ತಿಗೆದಾರ ಶ್ರೀಧರ ಶೇಲಾರ ಇತರರು ಉಪಸ್ಥಿತರಿದ್ದರು