ಬಾಬ್ರಿ ಮಸೀದಿ ರೀತಿ ರಾಹುಲ್ ಗಾಂಧಿ ಕುಟುಂಬ ಧ್ವಂಸ ಮಾಡ್ತೀವಿ ಎಂದು ಕೊಲೆ ಬೆದರಿಕೆ ಹಾಗೂ ಕೋಮು ಪ್ರಚೋದನೆ ಹೇಳಿಕೆ ನೀಡಿದ ಬಿಜೆಪಿ ಶಾಸಕ ಯಶ್ಪಾಲ್ ಸುವರ್ಣ ವಿರುದ್ಧ ಹುಬ್ಬಳ್ಳಿ ವಿದ್ಯಾನಗರ ಬ್ಲಾಕ್ ಕಾಂಗ್ರೆಸ್ ಸಮಿತಿ ವತಿಯಿಂದ ಉಪನಗರ ಠಾಣೆಯಲ್ಲಿ FIR ದಾಖಲಾಗಿದೆ.

ಮಾಧ್ಯಮಕ್ಕೆ ಮಾತನಾಡಿದ ಕಾಂಗ್ರೆಸ್ ಮುಖಂಡ ರಾಜತ್ ಉಳ್ಳಾಗಡ್ಡಿಮಠ ಅವರು ಕೋಮು ಗಲಭೆ ಮಾಡೋದು ಆರ್ಎಸ್ಎಸ್ನವರು, ಬಿಜೆಪಿಯವರು ಈ ರೀತಿ ಕೋಮುವಾದಿ ಹೇಳಿಕೆ ನೀಡ್ತಿದ್ರೆ ಕಣ್ಮುಚ್ಚಿ ಕುಳಿತಿದ್ದಾರಾ..? ಕೂಡಲೇ ಯಶ್ಪಾಲ್ ಸುವರ್ಣನನ್ನು ಅರೆಸ್ಟ್ ಮಾಡಬೇಕೆಂದು ಒತ್ತಾಯಿಸಿದರು.
