:ಜೋಡಟ್ಟಿಯ ರೇವಣಸಿದ್ದೇಶ್ವರ ವಿವಿಧ ಉದ್ದೇಶಗಳ ಸಹಕಾರಿ ಸಂಘದ ಸದಸ್ಯರಾದ ರೈತ ಬೀರಪ್ಪ ನಾಗರಾಳಿ ಅವರು ಅಕಾಲಿಕ ಮರಣ ಹೊಂದಿರುವುದರಿಂದ ಅವರ ಕುಟುಂಬಕ್ಕೆ ಸಹಕಾರ ಸಂಸ್ಥೆಯ ವತಿಯಿಂದ ಸಂಸ್ಥೆಯ ಅಧ್ಯಕ್ಷರಾದ ಬಸವರಾಜ ಮಹಾದೇವ ಮಂಟೂರೆ ಹಾಗೂ ಶಂಕರ ನೆರ್ಲಿ 50 ಸಾವಿರ ರೂಪಾಯಿ ಚೆಕ್ ವಿತರಿಸಿದರು.

ಬಳಿಕ ಮಾಧ್ಯಮಗಳ ಜೊತೆಗೆ ಮಾತನಾಡಿ ಸಂಸ್ಥೆಯ ಸಂಸ್ಥಾಪಕ ಮಹಾದೇವ ಮಂಟೂರೆ ಹಾಗೂ ನಾಗರಮುನ್ನೂಳಿ ಸಂಸ್ಥೆಯ ಅಧ್ಯಕ್ಷರಾದ ಶಂಕರ ನೇರ್ಲಿ ಮಾತನಾಡಿ ನಾಗರಮುನ್ನೂಳಿ ಶಾಖೆಯಲ್ಲಿ ಬೀರಪ್ಪ ನಾಗರಾಳೆಯವರು ನಮ್ಮ ಸಂಸ್ಥೆಯಿಂದ 1 ಲಕ್ಷ ರೂಪಾಯಿ ಸಾಲವನ್ನು ಪಡೆದುಕೊಂಡಿದ್ದರು.ಆದರೆ ಅವರು ಅಕಾಲಿಕವಾಗಿ ನಿಧನರಾಗಿದ್ದರು.ಈ ಹಿನ್ನೆಲೆಯಲ್ಲಿ ಅವರಿಗೆ ನಮ್ಮ ಸಂಸ್ಥೆಯಿಂದ ಅವರ ಕುಟುಂಬಕ್ಕೆ ಸಹಾಯ ಅರ್ಥವಾಗಿ 50 ಸಾವಿರ ರೂಪಾಯಿ ಸಹಾಯಧನ ನೀಡುತ್ತಿದೇವೆ ಎಂದರು.

ಈ ಸಂದರ್ಭದಲ್ಲಿ ಉಪಾಧ್ಯಕ್ಷರಾದ ಜಕ್ಕಪ್ಪ ಅಂದಾನಿ, ಲಕ್ಷ್ಮಣ ಕಾಳನ್ನವರ, ಪವಾಡಿ ಬೆಳಕೂಡೆ, ಬ್ರಹ್ಮಾನಂದ ಹಿರೇಕುರುಬರ, ಗುರುಪಾದ ಪೂಜಾರಿ, ವ್ಯವಸ್ಥಾಪಕ ಮಾಳಪ್ಪ ನಾಗರಾಳೆ, ವೀರಪ್ಪ ದಾನನ್ನವರ ಹಾಗೂ ನಾಗರಾಳೆ ಕುಟುಂಬಸ್ಥರು ಮತ್ತು ಸಹಕಾರಿ ಸಂಸ್ಥೆಯ ನಿರ್ದೇಶಕರು ಹಾಜರಿದ್ದರು.
