Accident

ಬೈಕ್-ಟ್ರ್ಯಾಕ್ಟರ್ ಮಧ್ಯ ಅಪಘಾತ: ಖಾನಾಪುರ ಲೈಲಾ ಶುಗರ್ ಕಾರ್ಮಿಕ ದುರ್ಮರಣ

Share

ಖಾನಾಪೂರ ಸಮೀಪದ ಗೋವಾ ಕ್ರಾಸ್ ಬಳಿ ದ್ವಿಚಕ್ರ ವಾಹನ ಮತ್ತು ಟ್ರ್ಯಾಕ್ಟರ್ ಮಧ್ಯ ಅಪಘಾತ ಸಂಭವಿಸಿದ್ದು, ಬೈಕ್ ಸವಾರ ಸ್ಥಳದಲ್ಲಿಯೇ ಸಾವನ್ನಪ್ಪಿರುವ ಘಟನೆ ನಡೆದಿದೆ.

ದುರ್ಘಟನೆಯಲ್ಲಿ ನಂದಗಡ ಗ್ರಾಮದ ತೇಲಿ ಓಣಿಯ ಸಿದ್ರಾಮಪ್ಪ ಮಲ್ಲಪ್ಪ ಕೋಟಿ (48) ಸ್ಥಳದಲ್ಲೇ ಸಾವನ್ನಪ್ಪಿದ ವ್ಯಕ್ತಿ. ರಾತ್ರಿ ಎಂಟರ್ ಶಿಫ್ಟ್ ಗೆ ಸಿದ್ರಾಮಪ್ಪ ಮಲ್ಲಪ್ಪ ಕೋಟಿ ಲೈಲಾ ಶುಗರ್ ಫ್ಯಾಕ್ಟರಿಗೆ ನಂದಗಡದಿಂದ ಖಾನಾಪೂರ ಕಡೆಗೆ ಹೋಗುತ್ತಿದ್ದ ಸಂದರ್ಭದಲ್ಲಿ ಈ ಅಪಘಾತ ಸಂಭವಿಸಿದೆ. ಮಹಾಲಕ್ಷ್ಮಿ ಗ್ರುಪ್ ಸಂಚಾಲಿತ ಲೈಲಾ ಶುಗರ್ ಫ್ಯಾಕ್ಟರಿ ಕಾರ್ಮಿಕ. ಖಾನಾಪೂರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು ಹೆಚ್ಚಿನ ತನಿಖೆ ನಡೆಸುತ್ತಿದ್ದಾರೆ.

 

Tags:

error: Content is protected !!