Hukkeri

ಹುಕ್ಕೇರಿ : ಸಂಕೇಶ್ವರ ಹಿರಣ್ಯಕೇಶಿ ಸಹಕಾರಿ ಸಕ್ಕರೆ ಕಾರ್ಖಾನೆಗೆ ಬೀಗ.

Share

ಹುಕ್ಕೇರಿ ತಾಲೂಕಿನ ಸಂಕೇಶ್ವರ ಹಿರಣ್ಯಕೇಶಿ ಸಕ್ಕರೆ ಕಾರ್ಖಾನೆ ಮಾಲಿನ್ಯ ನಿಯಂತ್ರಣ ಮಂಡಳಿ ನಿಯಮಗಳನ್ನು ಉಲ್ಲಂಘಿಸ ಹಿನ್ನಲೆಯಲ್ಲಿ ಜಿಲ್ಲಾಡಳಿತ ಕಾರ್ಖಾನೆಗೆ ಬೀಗ ಜಡಿದ ಘಟನೆ ಜರುಗಿದೆ.

ಪರಿಸರದ ನಿಯಮಗಳನ್ನು ಪಾಲಿಸದೇ ಇರುವದರಿಂದ
ಕರ್ನಾಟಕ್ ರಾಜ್ಯ ಮಾಲಿನ್ಯ ನಿಯಂತ್ರಣ ಮಂಡಳಿ ಬೆಂಗಳೂರು ರವರ ಆದೇಶ ಅನುಸಾರ ಬೆಳಗಾವಿ ಜಿಲ್ಲಾಧಿಕಾರಿ ಯವರ ಆದೇಶದಂತೆ ಕಾರ್ಖಾನೆಯ ಮ್ಯಾನೇಜಿಂಗ್ ಡೈರೆಕ್ಟರ್ ಮಾಧವ್ ಸ್ವಾಮಿ ಇವರ ಸಮ್ಮುಖದಲ್ಲಿ ಹುಕ್ಕೇರಿ ತಹಸಿಲ್ದಾರ್ ಬಲರಾಮ ಕಟ್ಟಿಮನಿ ರವರ ನೇತೃತ್ವದಲ್ಲಿ ಪರಿಸರ ನಿಯಂತ್ರಣ ಅಧಿಕಾರಿಗಳಾದ ಕೆ.ಎಸ್ ಪೂರ್ಣಿಮಾ , ಹನುಮಂತಪ್ಪ ಎಚ್.

ಹೆಸ್ಕಾಂ ಇಂಜನಿಯರ ಪ್ರವೀಣ್ ಕುಮಾರ್ ಚಿಕಡೆ , ಹುಕ್ಕೇರಿ ಪೋಲಿಸ್ ಇನ್ಸ್ಪೆಕ್ಟರ್ ಶಿವಶಂಕರ್ ಗಣಾಚಾರಿ , ಸಂಕೇಶ್ವರ ಪುರಸಭೆ ಮುಖ್ಯಾಧಿಕಾರಿ ಪ್ರಕಾಶ್ ಮಠದ, ಘಟಪ್ರಭಾ ನೀರಾವರಿ ಅಧಿಕಾರಿ ಎನ. ವಿ ಮೂಡಲಗಿ ಇತರ ಅಧಿಕಾರಿಗಳ ಸಮ್ಮುಖದಲ್ಲಿ ಹಿರಣ್ಯಕೇಶಿ ಸಹಕಾರಿ ಸಕ್ಕರೆ ಕಾರ್ಖಾನೆಯಲ್ಲಿನ ಸಕ್ಕರೆ ಉತ್ಪಾದನೆ ಘಟಕ, ಕೋಜನ್ (ಸಹ ವಿದ್ಯುತ್ತು), ಡಿಸ್ಟಲರಿ ಉತ್ಪಾದನಾ ಘಟಕಗಳ
ಕಂಟ್ರೋಲ್ ಪ್ಯಾನೆಲ್ ಗಳನ್ನು ಸೀಜ್ ಮಾಡಿದರು.


ರಾಜು ಬಾಗಲಕೋಟ
ಇನ್ ನ್ಯೂಜ ಹುಕ್ಕೇರಿ.

Tags:

error: Content is protected !!