ಖಾನಾಪೂರ ತಾಲೂಕಿನ ಬಿದರಭಾವಿ ಗ್ರಾಮದ ಯುವ ಉದ್ಯಮಿ,ತನ್ನ ಕಿರಿಯ ವಯಸ್ಸಿನಲ್ಲೇ ರಾಜಕೀಯ ವಲಯದಲ್ಲಿ ತನ್ನದೇ ಆದ ಛಾಪು ಮೂಡಿಸಿ ಖಾನಾಪೂರದ ಲೈಲಾ ಶುಗರ್ಸ್ ದ ಮಹಾಲಕ್ಷ್ಮೀ ಶುಗರ್ಸ್ ಕಾರ್ಖಾನೆಯ ವ್ಯವಸ್ಥಾಪಕ ನಿರ್ದೇಶಕರಾಗಿ ತಾಲೂಕಿನ ರೈತರಲ್ಲಿ ಉತ್ಸಾಹ ತುಂಬುವ ಕೆಲಸ ಮಾಡಿ ಸಾವಿರಾರು ಟನ್ ಕಬ್ಬು ನುರಿಸುವ ಮೂಲಕ ಕಾರ್ಖಾನೆಗೆ ಜೀವ ತುಂಬುವ ಕೆಲಸ ಮಾಡಿ ತಾಲೂಕಿನಲ್ಲಿ ಬಿಜೆಪಿ ಪಕ್ಷದ ನಿಷ್ಠಾವಂತ ಕಾರ್ಯಕರ್ತನಾಗಿ ಸಾವಿರಾರು ಕಾರ್ಯಕರ್ತರನ್ನು ತನ್ನ ಸಂಘಟನಾತ್ಮಕ ಚತುರತೆಯಿಂದ ಎಸೆದ ಸದಾನಂದ ಪಾಟೀಲರನ್ನು ಬಿಜೆಪಿಯ ಹಿರಿಯ ಮುಖಂಡರು ಗುರುತಿಸಿ ಬಿಜೆಪಿ ಬೆಳಗಾವಿ ಗ್ರಾಮಾಂತರ ಜಿಲ್ಲೆಯ ರೈತ ಮೋರ್ಚಾ ಜಿಲ್ಲಾ ಉಪಾಧ್ಯಕ್ಷರಾಗಿ ನೇಮಕ ಮಾಡಲಾಗಿದೆ ಇದರಿಂದ ಅವರಿಗೆ ಎಲ್ಲರಿಂದಲೂ ಅಭಿನಂದನೆಗಳು ಸಲ್ಲಿಕೆಯಾಗುತ್ತಿವೆ.

