Belagavi

ಮುಳುಗಿದ ಸೇತುವೆ ದಾಟಲು ಹೋದ 10 ಜನರಲ್ಲಿ ಓರ್ವ ನಾಪತ್ತೆ

Share

 

ಧಾರಾಕಾರ ಮಳೆಯಿಂದಾಗಿ ಸೇತುವೆ ಮುಳುಗಡೆಯಾಗಿದೆ. ಜಲಾವೃತ ಸೇತುವೆಯನ್ನು ಪಾರು ಮಾಡಲು ಹೋಗಿ ಓರ್ವ ವ್ಯಕ್ತಿ ನೀರಿನಲ್ಲಿ ನಾಪತ್ತೆಯಾಗಿದ್ದು. ಒಂಬತ್ತು ಜನರನ್ನ ರಕ್ಷಿಸಿದ ಘಟನೆ ಮೂಡಲಗಿ ತಾಲ್ಲೂಕಿನ ಅವರಾದಿ ಗ್ರಾಮದಲ್ಲಿ ನಡೆದಿದೆ.

ಧಾರಾಕಾರ ಮಳೆಗೆ ಬೆಳಗಾವಿ ಜಿಲ್ಲೆಯ ಮೂಡಲಗಿ ತಾಲ್ಲೂಕಿನ ಅವರಾದಿ ಗ್ರಾಮದ ಘಟಪ್ರಭಾ ನದಿ ಸೇತುವೆ ಮುಳುಗಡೆಯಾಗಿದೆ. ಟ್ರ್ಯಾಕ್ಟರ್ ಮೂಲಕ ಸೇತುವೆ ದಾಟುತ್ತಿದ್ದ ಹತ್ತು ಜನ ಕಾರ್ಮಿಕರ ಪೈಕಿ ಒಂಬತ್ತು ಜನ ನದಿಯ ದಡ ಸೇರಿ ಬದುಕಿದ್ದು, ಓರ್ವ ಕಾರ್ಮಿಕ ನಾಪತ್ತೆಯಾಗಿದ್ದಾನೆ. ಈ ಕಾರ್ಮಿಕರು ಕೊಲಕತ್ತಾ ಮೂಲದವರಾಗಿದ್ದು ಹುಬ್ಬಳ್ಳಿಯ ಕಂಪನಿಯಲ್ಲಿ ಕೆಲಸ ಮಾಡುತ್ತಾರೆ.ಅವರಾಧಿಯಲ್ಲಿ ಹೈ- ಪವರ್ ಲೈನ್ ಎಳೆಯುವ ಕೆಲಸ ನಡೆಯುತ್ತಿದ್ದ ವೇಳೆ ಈ ಅವಘಡ ಸಂಭವಿಸಿದೆ.

Tags:

error: Content is protected !!