Gokak

ಸಿದ್ದರಾಮಯ್ಯ, ಬಿಎಸ್‌ವೈ ಹಾದಿಯಲ್ಲೇ ನಾನೂ ಸಿಎಂ ಆಗ್ತೀನಿ: ಗೋಕಾಕನಲ್ಲಿ ಯತ್ನಾಳ್ ಮತ್ತೊಂದು ‘ಬಾಂಬ್’!

Share

ಪಕ್ಷದಿಂದ ಉಚ್ಚಾಟನೆಯಾಗಿದ್ದ ಸಿದ್ದರಾಮಯ್ಯ ಹಾಗೂ ಯಡಿಯೂರಪ್ಪ ರಾಜ್ಯದ ಮುಖ್ಯಮಂತ್ರಿಯಾಗಿದರು. ನಾನು ಮುಂದೆ ಮುಖ್ಯಮಂತ್ರಿ ಆಗುತ್ತೇನೆ ಎಂದು ಶಾಸಕ ಬಸನಗೌಡ ಪಾಟೀಲ್ ಯತ್ನಾಳ ಘೋಷಣೆ ‌ಮಾಡಿದರು.

ಗೋಕಾಕ ತಾಲೂಕಿನ ಬೀರನಗಡ್ಡಿ ಗ್ರಾಮದಲ್ಲಿ ಶ್ರೀ ಜಗಜ್ಯೋತಿ ವಿಶ್ವಗುರು ಬಸವೇಶ್ವರ ಅಶ್ವಾರೂಢ ಕಂಚಿನ ಪುತ್ಥಳಿಯ ಅನಾವರಣ ಕಾರ್ಯಕ್ರಮದಲ್ಲಿ ಮಾತನಾಡಿದರು. ಸದನದಲ್ಲಿಯೇ ಮುಖ್ಯಮಂತ್ರಿ ಸಿದ್ದರಾಮಯ್ಯ ನನಗೆ ನೀನು ಪಕ್ಷದಿಂದ ಉಚ್ಚಾಟನೆ ಆಗಿದ್ದಿಯಾ ಎಂದಾಗ ನಾನು ಹೇಳಿದೆ. ನೀವು ಜೆಡಿಎಸ್ ನಿಂದ ಉಚ್ಚಾಟನೆಗೊಂಡು ಮುಖ್ಯಮಂತ್ರಿ ಆಗಿದ್ದು ಎಂದರು.
ರಾಜ್ಯಾದ್ಯಂತ ನಾನು ಪ್ರವಾಸ ಮಾಡಿ ಜನರ ಅಭಿಪ್ರಾಯ ‌ಸಂಗ್ರಹ ಮಾಡಿ ಜೆಸಿಬಿ ಅಂದರೆ ಜೆಸಿಬಿ, ಇಲ್ಲಾಂದ್ರೆ ಕಮಲ ಎಂದು ಮತ್ತೊಂದ ಬಾಂಬ್ ಸಿಡಿಸಿದರು.

Tags:

error: Content is protected !!