ಖಾನಾಪೂರ ತಾಲೂಕಿನ ವಡ್ಡೆಬೈಲ್ ಗ್ರಾಮದಲ್ಲಿ ರಾಮ ನವಮಿ ನಿಮಿತ್ಯ ಹರಿಭಕ್ತಿ ಪಾರಾಯಣವನ್ನು ಮಹಾಲಕ್ಷ್ಮೀ ಗ್ರುಪ್ ಸಂಸ್ಥಾಪಕ ಅಧ್ಯಕ್ಷ ಶಾಸಕ ವಿಠ್ಠಲ ಹಲಗೇಕರ ಅವರು ಉದ್ಘಾಟಿಸಿ ಧಾರ್ಮಿಕ ಕಾರ್ಯಕ್ರಮಗಳು ಸಮಾಜದಲ್ಲಿ ನೆಮ್ಮದಿಯ ಜೀವನ ಸಾಗಿಸಲು ಸಹಕಾರಿಯಾಗಿದೆ ಧಾರ್ಮಿಕ ವಿಧಿ ವಿಧಾನಗಳನ್ನು ಅನುಸರಿಸುವುದು ನಮ್ಮ ಕರ್ತವ್ಯ ಯುವ ಪೀಳಿಗೆಗೆ ಧಾರ್ಮಿಕತೆ ನೀಡುವುದು ನಮ್ಮ ಧರ್ಮವಾಗಿದೆ ಎಂದರು.ಈ ಸಂದರ್ಭದಲ್ಲಿ ಪಾರಾಯಣ ಮಂಡಳಿಯಿಂದ ಶಾಸಕ ವಿಠ್ಠಲ ಹಲಗೇಕರ ಅವರ ಸತ್ಕರಿಸಲಾಯಿತು.
