ಚಿಕ್ಕೋಡಿ:ಏಪ್ರಿಲ್ 22 ರಂದು ಕಾಶ್ಮೀರದ ಪಹಲ್ಗಾಮ್ ಪ್ರವಾಸಿ ತಾಣದಲ್ಲಿ ಭಯೋತ್ಪಾದಕ ದಾಳಿ ಖಂಡಿಸಿ ನಿಪ್ಪಾಣಿಯಲ್ಲಿ ಮುಸ್ಲಿಂ ಸಮಾಜದಿಂದ ಪ್ರತಿಭಟನೆ ನಡೆಯಿತು.

ಈ ದಾಳಿಯಲ್ಲಿ 26 ಕ್ಕೂ ಹೆಚ್ಚು ಅಮಾಯಕ ಜನರು ಅನಗತ್ಯವಾಗಿ ಪ್ರಾಣ ಕಳೆದುಕೊಂಡರು.ನಮ್ಮ ದೇಶದಲ್ಲಿ ಅವ್ಯವಸ್ಥೆಯನ್ನು ಹರಡಿಸುವ ಮೂಲಕ ದೇಶವನ್ನು ಅಸ್ಥಿರಗೊಳಿಸಲು ಭಯೋತ್ಪಾದಕರು ಪದೇ ಪದೇ ಪ್ರಯತ್ನಿಸುತ್ತಿದ್ದಾರೆ. ದೇಶದ ಪ್ರತಿಯೊಬ್ಬ ನಾಗರಿಕನು ಈ ಅಮಾನವೀಯ ಮತ್ತು ಹತ್ಯೆಯ ಘಟನೆಯನ್ನು ಬಲವಾಗಿ ವಿರೋಧಿಸುತ್ತಿದ್ದಾರೆ.

ಈ ಭಯೋತ್ಪಾದಕರ ದಾಳಿಯ ವಿರುದ್ಧ ನಿಪ್ಪಾಣಿಯ ಮುಸ್ಲಿಂ ಸಮಾಜದ ಜನರು ಸೇರಿ ಪಹಲ್ಗಾಮ್ನಲ್ಲಿ ಮಡಿದ ಪ್ರವಾಸಿಗರ ಆತ್ಮಕ್ಕೆ ಶಾಂತಿ ಸಿಗಲಿ ಎಂದು ನೆಹರೂ ಚೌಕ್ ನಲ್ಲಿ ಜಾಮಾ ಮಸೀದಿಯ ಮುಂದೆ ಇಡೀ ಮುಸ್ಲಿಂ ಸಮುದಾಯದಿಂದ ಸಂತಾಪ ಸಭೆ ನಡೆಸಿದರು.ಭಯೋತ್ಪಾದಕರಿಗೆ ತಕ್ಕ ಶಿಕ್ಷೆ ಆಗಬೇಕೆಂದು ಆಗ್ರಹಿಸಿದರು.
ಈ ಸಂದರ್ಭದಲ್ಲಿ ಕರಿ ಅಲ್ತಾಫ್, ಹಾಜಿ ಗನಿ ಪಟೇಲ್, ಇಲ್ಯಾಸ್ ಪಟ್ವೆಗರ್, ಭಕ್ತಿಯಾರ ಕೊಲ್ಹಾಪುರೆ, ಜಾವೇದ್ ನಾಯಕ, ಶೇರ್ಗುಲ್ಖಾನ್ ಪಠಾಣ, ಫಜಲ್ ಪಠಾಣ, ಜಾಕಿರ್ ಖಾದ್ರಿ, ಅಸ್ಲಾಂ ಶಿಕಲಾಗಾರ, ಮಕ್ಸೂದ ಮೋಮಿನ, ಕೈಸ್ ಖಾಜಿ, ನಜೀರ ಕೊಚಾರ್ಗಿ ಸೇರಿದಂತೆ ಮುಸ್ಲಿಂ ಸಮಾಜದ ಬಾಂಧವರು ಹೆಚ್ಚಿನ ಸಂಖ್ಯೆಯಲ್ಲಿ ಉಪಸ್ಥಿತರಿದ್ದರು.