ಅಥಣಿ ಕ್ಷೇತ್ರದ ಜನತೆ ಮೂರು ಅವಧಿಗೆ ಆಯ್ಕೆಯಾಗಿ ಬರುವಷ್ಟು ಮತವನ್ನು ಕೊಟ್ಟು ನನ್ನ ಮೇಲೆ ವಿಶ್ವಾಸವಿಟ್ಟು ಗೆಲ್ಲಿಸಿದ್ದಾರೆ ಹಾಗಾಗಿ ಕ್ಷೇತ್ರದ ಜನತೆಯ ವಿಶ್ವಾದಂತೆ ನಾನು ಕೆಲಸ ಮಾಡುವೆ ಎಂದು ಅಥಣಿ ಶಾಸಕ ಲಕ್ಷ್ಮಣ ಸವದಿ ಅವರು ಹೇಳಿದರು.
ಅವರು ಕರ್ನಾಟಕ ನಗರ ನೀರು ಸರಬರಾಜು ಮತ್ತು ಒಳಚರಂಡಿ ಮಂಡಳಿ ಹಾಗೂ ಪೌರಾಡಳಿತ ನಿರ್ದೇಶನಾಲಯ ಇವರ ಸಂಯುಕ್ತ ಆಶ್ರಯದಲ್ಲಿ ಅಮೃತ 2.0 ಅಡಿಯಲ್ಲಿ ಅಥಣಿ ಪಟ್ಟಣದ 24*7 ನೀರು ಸರಬರಾಜು ಯೋಜನೆಯ ಭೂಮಿಪೂಜೆ ಸಮಾರಂಭವನ್ನು ನೆರವೇರಿಸಿ ಮಾತನಾಡಿ ನಾನು ಪೂಜ್ಯ ಸಿದ್ದೇಶ್ವರ ಸ್ವಾಮಿಗಳ ಪರಮಭಕ್ತ ನಾನು ಮಂತ್ರಿ ಸ್ಥಾನದ ಆಕಾಂಕ್ಷಿಯಲ್ಲ, ಯಾರ ಹತ್ತಿರವೂ ನಾನು ಹೋಗಲ್ಲ ನನಗೆ ಕ್ಷೇತ್ರದ ಜನತೆಯ ಆಶೀರ್ವಾದ ಇದ್ದರೆ ಸಾಕು ಎಂದರು.
ಕಾಮಗಾರಿ ಕುರಿತು ಮಾತನಾಡಿ ಕೃಷ್ಣಾ ನದಿಯಿಂದ ಹುಲಗಬಾಳಿ ಗ್ರಾಮದ ಹತ್ತಿರ ಒಂದು ಜಾಕ್ವೆಲ್ ಮೂಲಕ ನೀರನ್ನು ಪಟ್ಟಣಕ್ಕೆ ತಂದು ಕೊಡಲಾಗುವುದು, ಸುಮಾರು 185 ಕಿ.ಮೀ ಪೈಪ್ ಲೈನ್ ಮಾಡಿ, ಆಧುನಿಕ ಯಂತ್ರೋಪಕರಣಗಳ ಮೂಲಕ ಶುದ್ದೀಕರಣ ಮಾಡಿ ನಳದ ಮೂಲಕ ಪ್ರತಿಯೊಂದು ಮನೆಗೆ ನೀರು ಕೊಡುವ ಯೋಜನೆ ಪಟ್ಟಣದಿಂದ ಎರಡು ಕಿ.ಮೀ ವರೆಗೆ ಎಲ್ಲರಿಗೂ ಸುಮಾರು 25 ವರ್ಷಗಳ ಕಾಲ ಕೊಡುವುದಾಗಿದೆ, ಈ ಯೋಜನೆಗೆ ಕೇಂದ್ರದಿಂದ 50% , ರಾಜ್ಯ ಸರಕಾರದಿಂದ 40% ಹಾಗೂ ಸ್ಥಳೀಯ ಪುರಸಭೆಯಿಂದ 10% ಅನುದಾನ ಬಂದಿದೆ ಎಂದರು.
ಅನಂತರ ಪುರಸಭೆ ಮುಖ್ಯಾಧಿಕಾರಿ ಅಶೋಕ ಗುಡಿಮನಿ ಅವರು ಮಾತನಾಡಿ ಅಥಣಿ ಪಟ್ಟಣದ 177 ವರ್ಷಗಳ ಇತಿಹಾಸದಲ್ಲಿ ಅತೀ ದೊಡ್ಡ ಮೊತ್ತದ ಅಭಿವೃದ್ದಿ ಕಾಮಗಾರಿ, ಅಥಣಿ ಪಟ್ಟಣದ ನಮ್ಮ ಮುಂದಿನ ಹತ್ತಾರು ತಲೆಮಾರುಗಳ ಸಾರ್ವಜನಿಕರಿಗೆ ಅನುಕೂಲವಾಗುವ ಉದ್ದೇಶವನ್ನು ಗಮನದಲ್ಲಿ ಇಟ್ಟುಕೊಂಡು ಮಾನ್ಯ ಶಾಸಕರು ಜಾರಿ ಮಾಡಿದ್ದಾರೆ ಎಂದರು.
ಅನಂತರ ಹಿರಿಯ ವೈದ್ಯ ಮಲ್ಲಿಕಾರ್ಜುನಹಂಜಿ ಅವರು ಮಾತನಾಡಿದರು. ಈ ವೇಳೆ ಮುಖಂಡ ಶಿವಕುಮಾರ ಸವದಿ ಅಭಿಯಂತರ ಆರ್ ಕೆ ಉಮೇಶ, ಡಾ ಅವಿನಾಶ ನಾಯಿಕ, ಕಲ್ಲೇಶ ಮಡ್ಡಿ, ಸಂತೋಷ ಸಾವಡಕರ, ರಾಜು ಗುಡೋಡಗಿ, ದತ್ತಾ ವಾಸ್ಟರ್, ವಿದ್ಯಾ ಐಹೊಳೆ, ವಿದ್ಯಾ ಹಳ್ಳದಮಳ, ರಮೇಶ ಪವಾರ, ಬಸು ಹಳ್ಳದಮಳ, ಅಸಿಫ ತಾಂಬೋಳಿ, ಸುಶೀ ಪತ್ತಾರ, ಶಿವಾನಂದ ದಿವಾನಮಳ, ಮೃಣಾಲಿನಿ ದೇಶಪಾಂಡೆ, ಶ್ರೀಶೈಲ ಹಳ್ಳದಮಳ, ದಿಲೀಪ ಲೋಣಾರೆ ಸೇರಿದಂತೆ ಅನೇಕರು ಹಾಜರಿದ್ದರು.