ರಾಜ್ಯದ ಶಾಲಾ ಕಾಲೇಜುಗಳಲ್ಲಿ ಹಿಜಾಬ್ ಹಾಗೂ ಶಾಲ್ ವಿಚಾರ ರಾಜ್ಯವ್ಯಾಪಿಯಾಗಿ ಹರಡಲು ರಾಜ್ಯ ಸರಕಾರದ ವೈಫಲ್ಯವೇ ಕಾರಣ ಎಂದು ಮಾಜಿ ಸಚಿವ ಯು.ಟಿ ಖಾದರ್ ಹೇಳಿದ್ದಾರೆ.

ಬೆಂಗಳೂರಿನಲ್ಲಿ ಮಾಧ್ಯಮಗಳೊಂದಿಗೆ ಮಾತನಾಡಿದ ಮಾಜಿ ಸಚಿವ ಯು.ಟಿ ಖಾದರ್ ರಾಜ್ಯದಲ್ಲಿ ಮೊದಲಿನಿಂದಲೂ ಶಾಲಾ ಕಾಲೇಜುಗಳ ವಿದ್ಯಾರ್ಥಿನಿಯರು ಹಿಜಾಬ್ ಧರಿಸಿಕೊಂಡು ಬಂದಿದ್ದಾರೆ. ಈಗ ನಡುವೆ ಸರಕಾರ ಹೊಸ ಸಮವಸ್ತ್ರ ನೀತಿಯನ್ನು ತಂದು ರಾಜ್ಯದ ಬೇರೆ ಬೇರೆ ಕಾಲೇಜಗಳಲ್ಲಿ ಗದ್ದಲಕ್ಕೆ ಕಾರಣರಾಗಿದ್ದಾರೆ.

ಈ ಹಿಮದೆ ಇದ್ದ ಪದ್ಧತಿಯನ್ನೇ ಸರಕಾರ ಮುಂದೆವರೆಸಿಕೊಂಡು ಹೋಗಿದ್ದರೆ ಈ ರೀತಿಯ ಸಮಸ್ಯೆಗಳು ಬರುತ್ತಿರಲಿಲ್ಲ. ಇನ್ನು ರಾಜ್ಯ ಸರಕಾರ ಈ ನಿಟ್ಟಿನಲ್ಲಿ ತುಂಬಾ ಜವಾಬ್ದಾರಿಯುತವಾಗಿ ಚಿಂತನೆ ಮಾಡಬೇಕಿದೆ. ಈಗಾಗಲೇ ಹಿಜಾಬ್ ವಿಚಾರಕ್ಕೆ ಸಂಬಂದಿಸಿದಂತೆ ಪ್ರಕರಣ ನ್ಯಾಯಾಲಯದಲ್ಲಿ ನಡೆಯುತ್ತದೆ. ಹೀಗಿರುವಾಗ ರಾಜ್ಯ ಸರಕಾರ ಹೊಸ ಸಮವಸ್ತ್ರ ನೀತಿಯನ್ನು ಹೇಳುತ್ತಿದೆ. ಕೂಡಲೇ ಸರಕಾರ ಈ ಸಮವಸ್ತ್ರ ನೀತಿಯನ್ನು ಹಿಂದಕ್ಕೆ ಪಡೆಯಬೇಕು. ಈ ಹಿಂದೆ ಇದ್ದ ಹಳೆಯ ಪದ್ಧತಿಯನ್ನೇ ಮುಂದುವರೆಸಿಕೊಂಡು ಹೋಗಬೇಕು ಎಂದರು.
ಇನ್ನು ಸರಕಾರದ ಮೌನವೇ ಈ ಗಲಾಟೆಗೆ ಕಾರಣ. ಸರಕಾರ ಈ ವಿಚಾರ ಕುರಿತಂತೆ ಯಾಕೆ ಮೌನವಹಿಸಬೇಕು.
ಸರಕಾರದಲ್ಲಿ ಇಂಟಲಿಜನ್ಸ್ ಇದೆ. ಎಲ್ಲಿ ಏನಾಗುತ್ತಿದೆ ಎಂದು ತಿಳಿಯಬೇಕು. ಅದನ್ನು ನಿಯಣತ್ರಣ ಮಾಡುವುದು ಸರಕಾರದ ಆದ್ಯ ಕರ್ತವ್ಯವಾಗಿದೆ. ಶಿರವಸ್ತ್ರದಂಥಹ ಒಂದು ವಿಚಾರ ಇಂದು ಕಾಲೇಜ ಕ್ಯಾಂಪಸ್ ನಿಂದ ಹಿಡಿದು ರಾಜ್ಯದೆಲ್ಲೆಡೆ ಶಾಂತಿ ಸುವ್ಯವಸ್ಥೆಯನ್ನು ಹಾಳು ಮಾಡುತ್ತಿದೆ ಎಂದರೆ ಅದಕ್ಕೆ ಸರಕಾರದ ವೈಫಲ್ಯವೇ ಕಾರಣ. ಇನ್ನು ಶಿವಮೊಗ್ಗದಲ್ಲಿ ರಾಷ್ಟ್ರಧ್ವಜಕ್ಕೆ ಅವಮಾನ ಮಾಡಿದವರ ವಿರುದ್ಧ ಸರಕಾರ ಕ್ರಮ ಕೈಗೊಳ್ಳಲಿ. ಸರಕಾರದ ಬಗ್ಗೆ ಜನರಲ್ಲಿ ಭಯವಿದ್ದರೆ ಈ ರೀತಿ ಮಾಡಲು ಸಾಧ್ಯವಾಗುತ್ತಿರಲಿಲ್ಲ. ಇನ್ನು ಈ ವಿಚಾರ ಈಗಾಗಲೆ ನ್ಯಾಯಾಲಯದಲ್ಲಿದೆ. ಇನ್ನು ಕೋರ್ಟನಲ್ಲಿ ಇಂದೇ ತೀರ್ಮಾನವಾಗುತ್ತೆ ಎಂದು ಹೇಳಲಾಗುವುದಿಲ್ಲ. ಹಾಗಾಗಿ ಈ ವಿವಾದ ಬೇರೆ ಬೇರೆ ಕಾಲೇಜುಗಳಿಗೆ ಹಬ್ಬಿಸಲು ಯಾಕೆ ಬಿಡಬೇಕು. ಈ ಹಿಂದೆ ಇದ್ದ ಪದ್ಧತಿಯನ್ನು ಮುಂದುವರೆಸಬೇಕು ಎಂದರು.