ವಿಜಯಪುರ ಜಿಲ್ಲೆಯ ದೇವರಹಿಪ್ಪರಗಿ ತಾಲೂಕಿನ ಕಲಕೇರಿ ಸಮೀಪದ ಕೆರುಟಗಿ ಗ್ರಾಮದ 39 ವರ್ಷದ ಸಾಹೇಬಗೌಡ ಶಿವಣ್ಣ ಹಚಡದ ನೇಣು ಹಾಕಿಕೊಂಡು ಸಾವಿಗೆಶರಣಾದ ಘಟನೆ ನಡೆದಿದೆ. ಕೊರವಾರ ಕೆನರಾ ಬ್ಯಾಂಕ್ ೨ಲಕ್ಷ, ತಿಳಗೂಳ ಸೊಸೈಟಿ ೫೦ ಸಾವಿರ, ಹಾಗೂ ಖಾಸಗಿಯಾಗಿ ೫ ಲಕ್ಷ ಸಾಲ ಮಾಡಿಕೊಂಡಿದ್ದ ಎನ್ನಲಾಗಿದೆ. ಕಲಕೇರಿ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ.
