ಬೈಕ್ ಮೇಲೆ ಹೋಗುತ್ತಿದ್ದ ಯುವಕನಿಗೆ ವಾಹನ ಹಾಯಿಸಿ ಹತ್ಯೆ ನಡೆಸಿರುವ ಘಟನೆ ವಿಜಯಪುರದ ರೇಡಿಯೋ ಕೇಂದ್ರದ ಬಳಿ ನಡೆದಿದೆ. ಮುಸ್ತಕಿಮ್ ಕೂಡಗಿ ಹತ್ಯೆಯಾಗಿರುವ ಯುವಕನಾಗಿದ್ದಾನೆ. ಗಾಂಧಿಚೌಕ್ ಪೊಲೀಸ ಠಾಣಾ ಪಿಎಸ್ಐ ಆರ್.ಬಿ. ಕೂಡಗಿ ಮಗನಾಗಿದ್ದು ಇನ್ನು ಮಹಾನಗರ ಪಾಲಿಕೆ ಮಾಜಿ ಸದಸ್ಯ ರೌಫ್ ಶೇಖ್ ಹಾಗೂ ಕುಟುಂಬ ಸ್ಥರು ಸೇರಿ ಹತ್ಯೆಗೈದಿರುವ ಆರೋಪ ಕೇಳಿಬಂದಿದೆ.

ಹತ್ಯೆಯಾಗಿರುವ ಯುವಕನ ಕುಟುಂಬಸ್ಥರಿಂದ ಆರೋಪ ಕೇಳಿ ಬಂದಿದೆ. ಘಟನಾ ಸ್ಥಳಕ್ಕೆ ಹಿರಿಯ ಪೊಲೀಸ ಅಧಿಕಾರಿಗಳು ಭೇಟಿ ನೀಡಿ ಪರಿಶೀಲನೆ ನಡೆಸುತ್ತಿದ್ದಾರೆ. ಗಾಂಧಿಚೌಕ್ ಪೊಲೀಸ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ.

ಈ ಹತ್ಯೆಯ ಹಿಂದೆ ಮಾಜಿ ನಗರಸಭಾ ಸದಸ್ಯ ರೌಫ್ ಶೇಖ್ ಇವರ ಹೆಸರನ್ನು ಮೃತ ಯುವಕನ ತಂದೆ ಮಾದ್ಯಮಗಳ ಮುಂದೆ ಆರೋಪಿಸಿದ್ದು ನನ್ನ ಮಗ ರೌಫ್ ಶೇಖ್ ನ ಮಗಳನ್ನು ೬ ತಿಂಗಳ ಹಿಂದೆ ಪ್ರೇಮವಿವಾಹವಾಗಿದ್ದ ಹೀಗಾಗಿ ಆತನನ್ನು ಇಂದು ಹತ್ಯೆ ಮಾಡಿದ್ದಾರೆ ಎಂದು ಆರೋಪಿಸಿದ್ದಾರೆ