Belagavi

ಬೆಳಗಾವಿಯಲ್ಲಿ ವಿಶ್ವ ಕ್ಯಾನ್ಸ್‍ರ್ ನಿಯಂತ್ರಣ ಕಾರ್ಯಕ್ರಮ: ಆರೈಕೆ ಅಂತರವನ್ನ ಕಡೆಮೆಗೊಳಿಸಿ ಧ್ಯೇಯ ವಾಕ್ಯ ಬಿಡುಗಡೆ

Share

4 ಫೆಬ್ರುವರಿ 2022ರಂದು ಜಿಲ್ಲಾ ಆಡಳಿತ ಜಿಲ್ಲಾ ಪಂಚಾಯಿತಿ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಕಲ್ಯಾಣ ಇಲಾಖೆ ಅಸಾಂಕ್ರಾಮಿಕ ರೋಗಗಳ ಘಟಕ ಬೆಳಗಾವಿ ವತಿಯಿಂದ ನಗರ ಪ್ರಾಥಮಿಕ ಆರೋಗ್ಯ ಕೇಂದ್ರ ತಾಯಿ ಮಕ್ಕಳ ಆರೋಗ್ಯ ಕೇಂದ್ರ ವಂಟಮುರಿ ಬೆಳಗಾವಿಯಲ್ಲಿ ವಿಶ್ವ ಕ್ಯಾನ್ಸರ್ ಜಾಗೃತಿ ದಿನ ಆಚರಿಸಲಾಯಿತು ಸಭೆಯ ಉದ್ಘಾಟನೆಯನ್ನು ಡಾ ಶಶಿಕಾಂತ್ ಮುನ್ಯಾಳ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಅಧಿಕಾರಿಗಳು

ಬೆಳಗಾವಿ ಉದ್ಘಾಟಿಸಿ ಮಾತನಾಡಿ ಪ್ರಾರಂಭದ ಹಂತದಲ್ಲಿ ಕ್ಯಾನ್ಸರ್ ರೋಗವನ್ನು ಪತ್ತೆಹಚ್ಚಿ. ಚಿಕಿತ್ಸೆ ಪಡೆದರೆ ಗುಣಪಡಿಸಬಹುದು ಮತ್ತು ಈ ವರ್ಷದ ಘೋಷಣೆ ಆರೈಕೆಯ ಅಂತರವನ್ನು ಕಡಿಮೆ ಮಾಡಿ ಅಂತ ತಿಳಿಸಿದರು ಜಿಲ್ಲೆಯಲ್ಲಿ ದಿನಾಂಕ 4ರಿಂದ 10 ರವರೆಗೆ ಜಾಗೃತಿ ಜಾಥಾ ಮತ್ತು ತಪಾಸಣಾ ಶಿಬಿರಗಳನ್ನು ಆಯೋಜನೆ ಮಾಡಿದ್ದು ಸಾರ್ವಜನಿಕರು ಸದುಪಯೋಗವನ್ನು ಪಡೆದುಕೊಳ್ಳಬೇಕು ಜಿಲ್ಲೆಯ ಎಲ್ಲ ಪ್ರಾಥಮಿಕ ಆರೋಗ್ಯ ಕೇಂದ್ರಗಳು ಸಮುದಾಯ ಆರೋಗ್ಯ ಕೇಂದ್ರಗಳು ಸಾರ್ವಜನಿಕ ಆಸ್ಪತ್ರೆಗಳಲ್ಲಿ ತಪಾಸಣಾ ಶಿಬಿರವನ್ನು ಆಯೋಜನೆ ಮಾಡಲಾಗಿದೆ ಸಾರ್ವಜನಿಕರು ಸದುಪಯೋಗವನ್ನು ಪಡೆದುಕೊಳ್ಳಬೇಕು ಎಂದು ತಿಳಿಸಿದರು ಡಾ ಶಿವಾನಂದ ಮಾಸ್ತಿಹೊಳಿ ತಾಲೂಕ ಆರೋಗ್ಯಧಿಕಾರಿ ಅವರು ಮಾತನಾಡಿ ಆಹಾರ-ವಿಹಾರ ವಿಚಾರ ಇವುಗಳನ್ನು ಆಧುನಿಕ ಜೀವನಶೈಲಿಯಲ್ಲಿ ತಪ್ಪದೇ ಸರಿಯಾಗಿ ಪಾಲಿಸಬೇಕು ಎಂದು ತಿಳಿಸಿದರು ಕಾರ್ಯಕ್ರಮದಲ್ಲಿ ಪ್ರಸ್ತಾವಿಕವಾಗಿ ಡಾ ಬಾಲಕೃಷ್ಣ ತುಕ್ಕಾರ್ ಜಿಲ್ಲಾ ಸರ್ವೇಕ್ಷಣಾ ಅಧಿಕಾರಿಗಳು ಜಿಲ್ಲಾ ಅಸಾಂಕ್ರಾಮಿಕ ರೋಗಗಳ ಘಟಕ ಅವರು ಮಾತನಾಡಿ ಮುಖ್ಯವಾಗಿ ಗರ್ಭಕಂಠದ,ಸ್ತನ ಹಾಗು ಬಾಯಿ ಕ್ಯಾನ್ಸರ್ ಗಳ ತಪಾಸಣೆಯನ್ನು ಮಾಡಲಾಗುತ್ತಿದೆ ಇದರ ಉಪಯೋಗ ಪಡೆಯಬೇಕೆಂದು ತಿಳಿಸಿದರು. ಅಧ್ಯಕ್ಷತೆಯನ್ನು ವಹಿಸಿದ ಶ್ರೀ ರಾಜಶೇಖರ ಡೋನಿ ನಗರ ಸೇವಕರು ಮಹಾನಗರ ಪಾಲಿಕೆ ಬೆಳಗಾವಿ ಮಾತನಾಡಿ ಇಂದಿನ ಯುವ ಪೀಳಿಗೆ ದುಶ್ಚಟಗಳಿಂದ ದೂರ ಇರಬೇಕೆಂದು ತಿಳಿಸಿದರು.

ಮುಖ್ಯ ಅತಿಥಿಗಳಾಗಿ ಆಗಮಿಸಿದ ಶ್ರೀಮಹಾದೇವ ರಾಠೋಡ್ ನಗರ ಸೇವಕರು ಮಹಾನಗರ ಪಾಲಿಕೆ ಬೆಳಗಾವಿ ಅವರು ಮಾತನಾಡಿ ದೇಶದ ಅಭಿವೃದ್ಧಿಗೆ ಯುವಪಡೆ ಬೇಕಾಗುತ್ತದೆ ಒಂದು ವೇಳೆ ದುಶ್ಚಟಗಳಿಗೆ ಬಲಿಯಾದರೆ ಕ್ಯಾನ್ಸರ್ ನಂತಹ ರೋಗಗಳು ಆವರಿಸಿಕೊಂಡು ಬದಲು ಮನೆತನ ಪರಿಸ್ಥಿತಿ ನಂತರ ಸಮಾಜದ ನಾಶದಿಂದ ಆರ್ಥಿಕ ಸಾಮಾಜಿಕ ಅಭಿವೃದ್ಧಿಯ ಒಂದು ವ್ಯವಸ್ಥೆ ಹಾಳಾಗುತ್ತದೆ ಎಂದು ತಿಳಿಸಿದರು ಕಾರ್ಯಕ್ರಮದಲ್ಲಿ ಇಂಡಿಯನ್ ಡೆಂಟಲ್ ಅಸೋಶಿಯೇಶನ್ ಡಾ ನೇತ್ರಾ, ಡಾ ಬಿಂದು, ಡಾ ರಾಜಶೇಖರ್ ಯರಝರ್ವಿ ಶಸ್ತ್ರಚಿಕಿತ್ಸಕರು, ಡಾ ಸಂಜಯ ದೊಡ್ಡಮನಿ, ಡಾ ಜಯಾನಂದ, ಡಾ ಅನುಶ್ರೀ, ಶಿವಾಜಿ ಜಿಲ್ಲಾ ಆರೋಗ್ಯ ಶಿಕ್ಷಣಾಧಿಕಾರಿ ಹಾಗೂ ಆರೋಗ್ಯ ಇಲಾಖೆ ಅಧಿಕಾರಿ ಮತ್ತು ಸಿಬ್ಬಂದಿ ಅವರು ಉಪಸ್ಥಿತರಿದ್ದರು ಡಾ ಆಸ್ಮಾ ಸಂಗೊಳ್ಳಿ ಹಾಗೂ ನಾಗನೂರ ಸಮುದಾಯ ಆರೋಗ್ಯ ಕೇಂದ್ರದ ಅಸಾಂಕ್ರಾಮಿಕ ರೋಗಗಳ ಘಟಕ ಮತ್ತು ಸ್ತ್ರೀರೋಗ ತಜ್ಞರು ದಂತವೈದ್ಯರು ಶಿಬಿರದಲ್ಲಿ ಪಾಲ್ಗೊಂಡು ತಪಾಸಣೆ ನಡೆಸಿದರು ಕಾರ್ಯಕ್ರಮವನ್ನು ಡಾ ಜಯಾನಂದ ಸ್ವಾಗತಿಸಿದರು ಬಸವರಾಜ ಆರೋಗ್ಯ ಶಿಕ್ಷಣಾಧಿಕಾರಿಗಳು ನಿರೂಪಿಸಿದರು.ಶ್ರೀ ಜಗದೀಶ್ ಪಾಟೀಲ ವಂದಿಸಿದರು

Tags:

error: Content is protected !!