ವಿಜಯಪುರದಲ್ಲಿ ಭೂ ನಕಲಿ ಹಾವಳಿ ಹಾಗೂ ಅಕ್ರಮ ಆಸ್ತಿಯನ್ನು ಸರ್ಕಾರ ಸಿಐಡಿ ತನಿಖೆ ನಡೆಸುವಂತೆ ನಗರದಲ್ಲಿ ಮಾಜಿ ಸಚಿವ ಅಪ್ಪಾಸಾಹೇಬ ಪಟ್ಟಣಶೆಟ್ಟಿ ಆಗ್ರಹಿಸಿದರು.

ನಕಲಿ ದಾಖಲಾತಿ ಸೃಷ್ಟಿಸಿ ಕೋಟ್ಯಂತರ ರೂಪಾಯಿ ಆಸ್ತಿ ಅವ್ಯವಹಾರ ಆಗಿದೆ. ಅನ್ಯ ಊರುಗಳಿಗೆ ಹೋಗಿ ನೆಲೆಸಿದವರನ್ನು ಗುರುತಿಸಿ ಅವರ ಹೆಸರಲ್ಲಿ ನಕಲಿ ದಾಖಲೆ ಸೃಷ್ಟಿಸಿ ಆಸ್ತಿ ಮಾರಾಟ ಮಾಡಲಾಗುತ್ತಿದೆ ಎಂದು ಆರೋಪಿಸಿದರು. ಇನ್ನು ಇದರ ಹಿಂದೆ ಕೆಲವು ರಾಜಕೀಯ ಹಿತಾಸಕ್ತಿಗಳು ಸಹ ಇವೆ. ಹೀಗಾಗಿ ರಾಜ್ಯದಲ್ಲಿಯೇ ಇದೊಂದು ದೊಡ್ಡ ಜಾಲ ಇದ್ದು ಸಿಒಡಿ ತನಿಖೆ ಮಾಡಲು ಮತ್ತೊಮ್ಮೆ ಮುಖ್ಯಮಂತ್ರಿ ಗಳಿಗೆ ಮನವಿ ಮಾಡುವೆ ಎಂದರು. ಅಲ್ಲದೇ ವಿಜಯಪುರ ನಗರ ಶಾಸಕ ಬಸನಗೌಡ ಪಾಟೀಲ ಯತ್ನಾಳ ಭೋಗಸ ಹಿಂದುತ್ವದಾರಿ ಎಂದು ಸ್ವಪಕ್ಷೀಯ ಮಾಜಿ ಸಚಿವ ಅಪ್ಪಾಸಾಹೇಬ್ ಪಟ್ಟಣಶೆಟ್ಟಿ ಹೇಳಿದರು. ಶಾಸಕ ಯತ್ನಾಳ ಭೋಗಸ ರಾಜಕಾರಣಿಯಾಗಿದ್ದಾರೆ ಎಂದು ವಾಗ್ದಾಳಿ ಮಾಡಿದರು. ಇನ್ನು ನನ್ನನ್ನು ದಯವಿಟ್ಟು ಕೆಣಕಬೇಡಿ ಎಂದು ಶಾಸಕ ಯತ್ನಾಳಗೆ ಎಚ್ಚರಿಕೆ ನೀಡಿದರು. ಅಲ್ಲದೇ, ಮುಖ್ಯವಾಹಿನಿಗೆ ಬಂದು ಮಾತನಾಡುವುದನ್ನು ಯತ್ನಾಳ ರೂಢಿಸಿಕೊಳ್ಳಬೇಕು. ಅದನ್ನು ಬಿಟ್ಟು ಕಾಲೋನಿಯಲ್ಲಿ ಮಾತನಾಡುವುದನ್ನು ಬಿಡಬೇಕು ಎಂದು ಲೇವಡಿ ಮಾಡಿದರು. ಇನ್ನ ರಾಜಕಾರಣದಲ್ಲಿ ಯತ್ನಾಳ ಜೂನಿಯರ್ ಆಗಿದ್ದು, ಸಚಿವ ನಿರಾಣಿಯೇ ಸೀನಿಯರ್ ಎಂದು ಸಚಿವ ನಿರಾಣಿ ಪರವಾಗಿ ಪಟ್ಟಣಶೆಟ್ಟಿ ಬ್ಯಾಟಿಂಗ್ ಬೀಸಿದರು.