Belagavi

ಜೋಳಿಗೆ ಹಾಕಿ ಅವರು ಕೊಟ್ಟಿದ್ದನ್ನು ಮುಟ್ಟಿಸುತ್ತೇನೆ: ನಿರಾಣಿಗೆ ಕೂಡಲಸಂಗಮ ಸ್ವಾಮೀಜಿ ಬಹಿರಂಗ ಸವಾಲು..!

Share

ಸಚಿವ ಮುರುಗೇಶ್ ನಿರಾಣಿ ಬಹಿರಂಗ ಕ್ಷಮಾಪಣೆ ಕೇಳಬೇಕು. ಇಲ್ಲವಾದರೇ ಅವರು ಏನೇನು ಕೊಟ್ಟಿದ್ದಾರೆ ಅನ್ನೋದನ್ನು ಹೇಳಲಿ, ಜೋಳಿಗೆ ಹಾಕಿ ಅವರು ಕೊಟ್ಟಿದ್ದನ್ನ ಅವರಿಗೆ ಮುಟ್ಟಿಸುತ್ತೇನೆ ಎಂದು ಕೂಡಲಸಂಗಮದ ಬಸವಜಯ ಮೃತ್ಯುಂಜಯ ಸ್ವಾಮೀಜಿ ನಿರಾಣಿಗೆ ಸವಾಲು ಹಾಕಿದ್ದಾರೆ.

ಬೆಳಗಾವಿಯ ಗಾಂಧಿ ಭವನದಲ್ಲಿ ಪಂಚಮಸಾಲಿ ರಾಜ್ಯ ಕಾರ್ಯಕಾರಿಣಿ ಸಭೆಯನ್ನು ಕರೆಯಲಾಗಿತ್ತು. ಸಭೆ ಬಳಿಕ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಬಸವಜಯ ಮೃತ್ಯುಂಜಯ ಸ್ವಾಮೀಜಿ ರಾಜ್ಯದಿಂದ 2ಎ ಮೀಸಲಾತಿ ಹಾಗೂ ಕೇಂದ್ರದಿಂದ ಒಬಿಸಿ ಮೀಸಲಾತಿ ನೀಡಬೇಕೆಂದು ವರ್ಷದಿಂದ ಹೋರಾಟ ನಡೆಸುತ್ತಿದ್ದೇವೆ.

https://fb.watch/aWa6j0mA-5/

ಇಂದು ರಾಜ್ಯ ಕಾರ್ಯಕಾರಿಣಿ ಸಭೆಯಲ್ಲಿ ಮೂರು ನಿರ್ಣಯ ಕೈಗೊಳ್ಳಲಾಗಿದೆ ಬರುವ ಬಜೆಟ್ ಒಳಗಾಗಿ ಮುಖ್ಯಮಂತ್ರಿಗಳು ಮೀಸಲಾತಿ ಘೋಷಿಸಬೇಕು, ಪಂಚಮಸಾಲಿ ಸಮಾಜವನ್ನು ಒಡೆಯಲು ಯತ್ನಿಸುತ್ತಿರುವ ಕುತಂತ್ರಿಗಳ ವಿರುದ್ಧ ಖಂಡನಾ ನಿರ್ಣಯ ಕೈಗೊಳ್ಳಲಾಗಿದ್ದು, ಸಮಾಜ ಭಾಂದವರು ಅವರನ್ನು ಸಂಪೂರ್ಣವಾಗಿ ಕಡೆಗಣಿಸಬೇಕು ಹಾಗೂ ಸಚಿವ ಮುರಗೇಶ ನಿರಾಣಿಯವರಿಗೆ ಸಂಬಂಧಿಸಿದ ಪೇಜ್‍ನಲ್ಲಿ ಕೂಡಲ ಸಂಗಮ ಮಠಕ್ಕೆ ಕೊಟ್ಟ ದೇಣಿಗೆ ಪ್ರಕಟಿಸಲಾಗಿದೆ. ಇದು ನಮಗೆ ನೋವುಂಟು ಮಾಡಿದೆ. ಹೀಗಾಗಿ ಈ ಎಲ್ಲ ದೇಣಿಗೆಯನ್ನು ವಾಪಸ್ ಕೊಡಲು ನಿರ್ಧರಿಸಿದ್ದೇವೆ ಎಂದರು.

ನಾನು ಭಕ್ತರ ಋಣದಲ್ಲಿ ಇರಲು ಇಷ್ಟಪಡುತ್ತೇನೆ ಹೊರತು, ಯಾರದೋ ಋಣದಲ್ಲಿ ಇರಲು ಇಷ್ಟ ಪಡುವುದಿಲ್ಲ. ನನ್ನನ್ನು ಸಾಕಿ ಬೆಳೆಸಿದವರು ನನ್ನ ಸಮಾಜ ಭಾಂದವರು. ಸಚಿವ ನಿರಾಣಿ ಹೆಸರಲ್ಲಿ ಪೆÇೀಸ್ಟ್ ಹಾಕುತ್ತಿದ್ದಾರೆ. ಇದುಅವರ ಹೆಸರಲ್ಲಿ ಬೇರೆಯವರು ಪೆÇೀಸ್ಟ್ ಹಾಕುತ್ತಿದ್ದರೆ ನಿರಾಣಿ ಸ್ಪಷ್ಟನೆ ಕೊಡಬೇಕು. ಇಲ್ಲದಿದ್ರೆ ಬಹಿರಂಗ ಕ್ಷಮಾಪಣೆ ಕೇಳಬೇಕು. ಇಲ್ಲವಾದರೇ ಅವರು ಏನೇನು ಕೊಟ್ಟಿದ್ದಾರೆ ಅನ್ನೋದನ್ನು ಹೇಳಲಿ, ಜೋಳಿಗೆ ಹಾಕಿ ಅವರು ಕೊಟ್ಟಿದ್ದನ್ನ ಅವರಿಗೆ ಮುಟ್ಟಿಸುತ್ತೇನೆ ಎಂದು ಸ್ವಾಮೀಜಿ ಸವಾಲು ಹಾಕಿದರು.

 

 

Tags:

error: Content is protected !!