Belagavi

ಖಾಸಗಿ ಎಪಿಎಂಸಿ ಅಕ್ರಮ ಆಗಿದ್ದರೆ ಇವರ್ಯಾಕೆ ಸುಮ್ಮನಿದ್ದಾರೆ: ಹೆಬ್ಬಾಳ್ಕರ್-ಸತೀಶ್‍ಗೆ ಸಂಜಯ್ ಪಾಟೀಲ್ ಪ್ರಶ್ನೆ..?

Share

ನಮ್ಮ ಶಾಸಕರು ಸಿಎಂ ಬೊಮ್ಮಾಯಿಯವರ ಹತ್ತಿರ ಹೋಗಿ ರಸ್ತೆ ಅಭಿವೃದ್ಧಿಗೆ ಅನುದಾನ ತರುತ್ತಾರೆ. ಹಾಗಾದ್ರೆ ಯಾಕೆ ನಮ್ಮ ಶಾಸಕರು ಸಿಎಂ ಹತ್ತಿರ ಹೋಗಿ ರೈತರ ಸಮಸ್ಯೆ ಪರಿಹರಿಸುತ್ತಿಲ್ಲ ಎಂದು ಶಾಸಕಿ ಲಕ್ಷ್ಮೀ ಹೆಬ್ಬಾಳಕರಗೆ ಮಾಜಿ ಶಾಸಕ ಸಂಜಯ್ ಪಾಟೀಲ್ ಟಾಂಗ್ ಕೊಟ್ಟಿದ್ದಾರೆ.

ಬೆಳಗಾವಿಯ ಖಾಸಗಿ ಭಾಜಿ ಮಾರ್ಕೆಟ್ ಬಂದ್ ಮಾಡುವಂತೆ ಆಗ್ರಹಿಸಿ ಎಪಿಎಂಸಿ ಆವರಣದಲ್ಲಿ ರೈತರು, ವರ್ತಕರ ಹೋರಾಟಕ್ಕೆ ಬೆಂಬಲ ಸೂಚಿಸಿದ ಬಳಿಕ ಮಾಧ್ಯಮಗಳ ಜೊತೆಗೆ ಮಾತನಾಡಿದ ಮಾಜಿ ಶಾಸಕ ಸಂಜಯ್ ಪಾಟೀಲ್ ಬೆಳಗಾವಿ ಎಪಿಎಂಸಿ ಯಮಕನಮರಡಿ ಮತ್ತು ಬೆಳಗಾವಿ ಗ್ರಾಮೀಣ ಮತಕ್ಷೇತ್ರದ ಶಾಸಕರಿಗೂ ಬರುತ್ತದೆ. ಖಾಸಗಿ ಮಾರುಕಟ್ಟೆ ಅಕ್ರಮ ಆಗಿದ್ದರೇ ಈ ಶಾಸಕರು ಯಾಕೇ ಸುಮ್ಮನೆ ಇದ್ದರು. ನಾನಿಗ ಶಾಸಕನಲ್ಲ ಆದ್ರೆ ನಾನು ರೈತನ ಮಗ ಆಗಿರುವೆ. ಹೀಗಾಗಿ ರೈತರು ತೊಂದರೆ ಅನುಭವಿಸಬಾರದು. ಅದಕ್ಕಾಗಿ ಸಿಎಂ ಬೊಮ್ಮಾಯಿ ಅವರ ಗಮನಕ್ಕೆ ತರುವೆ ಎಂದರು.

ನಾನು ಮಾಜಿ ಶಾಸಕ ಇರುವೆ ಆದ್ರು ಬಿಜೆಪಿ ಜಿಲ್ಲಾಧ್ಯಕ್ಷೆ ಇರುವೆ ಹೀಗಾಗಿ ನಾನು ಮುಖ್ಯಮಂತ್ರಿ ಬೊಮ್ಮಾಯಿ ಅವರ ಗಮನಕ್ಕೆ ತರುವೆ. ಇದರೊಂದಿಗೆ ಸಹಕಾರ ಸಚಿವರು, ಕೃಷಿ ಮಂತ್ರಿಗಳ ಗಮನಕ್ಕೂ ತರುವೆ. ಖಾಸಗಿ ಮಾರುಕಟ್ಟೆ ಅಕ್ರಮವಾಗಿದ್ದರೇ ಅದನ್ನ ಬಂದ್ ಮಾಡಬೇಕು. ಇದರಲ್ಲಿ ಎರಡು ಮಾತು ಇಲ್ಲ. ಅದು ಕಾನೂನು ಪ್ರಕಾರ ಇದ್ದರೇ ಇರುವ ಸಮಸ್ಯೆ ಬಗೆಹರಿಸುವೆ. ನಮ್ಮ ಚುನಾಯಿತ ಜನಪ್ರತಿನಿಧಿಗಳು ಕೂಡಾ ಮುಂದೆ ಬರಬೇಕು. ಇನ್ನು ಇದು ಕಾಂಗ್ರೆಸ್ ಬಿಜೆಪಿ ಅಂತಾ ರಾಜಕೀಯ ಮಾಡುವುದು ಬೇಡಾ. ರೈತರಿಗೆ ಒಳ್ಳೆಯದಾಗಬೇಕು, ಸಮಸ್ಯೆ ಇತ್ಯರ್ಥ ಆಗಬೇಕು ಆ ನಿಟ್ಟಿನಲ್ಲಿ ನಾನು ಪ್ರಯತ್ನ ಮಾಡುತ್ತೇನೆ ಎಂದರು.

ಕೆಪಿಸಿಸಿ ಕಾರ್ಯಾಧ್ಯಕ್ಷ ಸತೀಶ್ ಜಾರಕಿಹೊಳಿ ಮೂರನೇ ಎಪಿಎಂಸಿ ಮಾಡುವುದಾಗಿ ನೀಡಿದ ಹೇಳಿಕೆ ವಿಚಾರಕ್ಕೆ ಈಗಾಗಲೇ ಎರಡು ಮಾರುಕಟ್ಟೆ ಆಗಿದೆ. ಹೀಗಿರುವಾಗ ಮೂರನೇ ಮಾರುಕಟ್ಟೆ ಮಾತು ಯಾಕೆ..? ಅವರು ಸಹ ಸಮಸ್ಯೆ ಪರಿಹಾರಕ್ಕೆ ಶ್ರಮಿಸಬೇಕು. ಸತೀಶ್ ಜಾರಕಿಹೊಳಿ ಅವರು ದೊಡ್ಡವರು ಅವರನ್ನ ನಾನು ಗೌರವಿಸುವೆ ಎಂದರು.

 

Tags:

error: Content is protected !!