Belagavi

ಉ.ಕ ಪ್ರತಿಭಾವಂತರಿಗೆ ಚಿತ್ರ ರಂಗದಲ್ಲಿ ಅವಕಾಶ ದೊರಕಲಿ: ಯುವ ನಾಯಕ ರಾಹುಲ್‌ ಜಾರಕಿಹೊಳಿ

Share

ಉತ್ತರ ಕನ್ನಡ ಭಾಗದ ಪ್ರತಿಭಾವಂತರಿಗೆ ಕನ್ನಡ ಚಲನಚಿತ್ರ ರಂಗದಲ್ಲಿ ಅವಕಾಶ ದೊರಕಲಿ ಎಂದು ಯುವ ನಾಯಕ ರಾಹುಲ್‌ ಜಾರಕಿಹೊಳಿ ಹೇಳಿದರು.

ನಗರದ ಕನ್ನಡ ಸಾಹಿತ್ಯ ಭವನದಲ್ಲಿ ಪೋಸ್ಟ್‌ ಮ್ಯಾನ್‌ VS ಮೊಬೈಲ್‌ ಮ್ಯಾನ್‌ ನೂತನ ಕೀರು ಚಿತ್ರದ ಟೀಜರ್‌ ಬಿಡುಗಡೆ ನೆರವೇರಿಸಿ ಅವರು ಮಾತನಾಡಿದರು.

ದುರ್ಗಾ ಕಂಬೈನ್ಸ್‌ ಬ್ಯಾನರ್‌ನಲ್ಲಿ ನಿರ್ಮಾಣವಾಗುತ್ತಿರುವ ಪೋಸ್ಟ್‌ ಮ್ಯಾನ್‌ VS ಮೊಬೈಲ್‌ ಮ್ಯಾನ್‌ ನೂತನ ಕೀರು ಚಿತ್ರದ ಟೀಜರ್‌ ನಲ್ಲಿ ಒಳ್ಳೆಯ ಸಂದೇಶಗಳಿದ್ದು, ಈ ಚಿತ್ರ ಯಶಸ್ಸು ಕಾಣಲೆಂದು ಆಶೀಸಿದರು.

ಕರೆಪ್ಪ ಮಲ್ಲೂರ ಕಥೆ, ಚಿತ್ರಕಥೆ ನಿರ್ದೇಶನ ಮಾಡುತ್ತಿದ್ದು, ಮಂಜುನಾಥ ಸಂಭಾಷನೆ, ಕಾರ್ತಿಕ ಟೀಮ್ ಛಾಯಾಗ್ರಹಣ, ಅರುಣ್ ಗೌಡ ಪ್ರಚಾರಕಲೆ ಕಾರ್ಯ ನಿರ್ವಹಿಸುತ್ತಿದ್ದು, ಈ ಎಲ್ಲಾ ತಂಡದ ಸದಸ್ಯರಿಗೆ ಅಭಿನಂದನೆ ಸಲ್ಲಿಸಿದರು.

ಈ ಸಂದರ್ಭದಲ್ಲಿ ಗೌತಮ ದ್ಯಾಮನಗೌಡರ, ಸುರೇಶ ಗುರನ್ನವರ, ಡಿ.ಎಸ್.ಎಸ್. ಜಿಲ್ಲಾಧ್ಯಕ್ಷ ಪ್ರಕಾಶ ಶಿವನೂರ ಸೇರಿದಂತೆ ಪೋಸ್ಟ್‌ ಮ್ಯಾನ್‌ VS ಮೊಬೈಲ್‌ ಮ್ಯಾನ್‌ ಚಲನಚಿತ್ರದ ನಟ, ನಟಿ ಇದ್ದರು.

Tags:

error: Content is protected !!