Belagavi

ಅಟಲ್‍ಜೀ ಜನಸ್ನೇಹೀ ಕೇಂದ್ರಗಳನ್ನು ಮುಚ್ಚದಂತೆ ಜಿಲ್ಲಾಧಿಕಾರಿಗಳಿಗೆ ಮನವಿ

Share

ಇತ್ತೀಚೆಗೆ ಸರಕಾರದ ಆದೇಶದಂತೆ ಎಲ್ಲಾ ಗ್ರಾಮಗಳಲ್ಲಿ ಗ್ರಾಮ್ ಒನ್ ಸೇವಾ ಕೇಂದ್ರಗಳು ಪ್ರಾರಂಭವಾಗಿವೆ. ಹಾಗಾಗಿ ಸರಕಾರ ತಮ್ಮ ಸೇವೆಯನ್ನು ಮರೆಯದೇ ತಮ್ಮ ಕಾರ್ಯವನ್ನು ಕೂಡ ಮುಂದುವರೆಸಬೇಕೆಂದು ಬೆಳಗಾವಿ ಜಿಲ್ಲಾ ಅಟಲ್‍ಜಿ ಜನಸ್ನೇಹಿ ಕೇಂದ್ರದ ಆಪರೇಟರ್‍ಗಳು ಜಿಲ್ಲಾಧಿಕಾರಿಗಳಿಗೆ ಮನವಿ ಮಾಡಿದ್ದಾರೆ.

ರಾಜ್ಯಾದ್ಯಂತ ಎಲ್ಲಾ ನಾಡ ಕಚೇರಿಗಳಲ್ಲಿ ಈ ಮೊದಲು ಅಟಲ್ ಜಿ ಜನಸ್ನೇಹಿ ಹೇಂದ್ರಗಳು ಕಾರ್ಯ ಮಾಡುತ್ತಿದ್ದವು. ಆದರೆ ಇತ್ತೀಚೆಗೆ ರಾಜ್ಯ ಸರಕಾರ ಎಲ್ಲಾ ಗ್ರಾಮಗಳಲ್ಲಿ ಗ್ರಾಮ್ ಒನ್ ಸೇವಾ ಕೆಂದ್ರಗಳನ್ನು ಪ್ರಾರಂಭಿಸಿದೆ. ಇದರಿಂದ ನಾಡಕಛೇರಿಯ ಎಲ್ಲಾ ಅಟಲ್‍ಜಿ ಜನಸ್ನೇಹಿ ಕೇಂದ್ರಗಳ ಆಪರೇಟರ್‍ಗಳು ತಮ್ಮ ಸೇವೆಯನ್ನೂ ಕೂಡ ಸರಕಾರ ಪರಿಗಣಿಸಬೇಕು. ಟಲ್‍ಜಿ ಜನಸ್ನೇಹಿ ಕೇಂದ್ರಗಳನ್ನು ಕೂಡ ಕೈ ಬಿಡಬಾರದೆಂದು ಜಿಲ್ಲಾಧಿಕಾರಿಗಳಿಗೆ ಮನವಿ ಮಾಡಿದರು.

ಈ ವೇಳೆ ಮಾತನಾಡಿದ ಹಾರುನ್ ರಶೀದ್ ಶಿಲ್ಲೇದಾರ್, ರಾಜ್ಯದಲ್ಲಿ ಎಲ್ಲಾ ಹೋಬಳಿ ಮ್ಟದಲ್ಲಿ ನಾಡಕಚೇರಿಗಳು ಈಗಾಗಲೇ ಕಾರ್ಯ ಮಾಡುತ್ತಿವೆ. ಇನ್ನು ಈಗಾಗಲೇ ಸರಕಾರ ಎಲ್ಲಾ ಗ್ರಾಮಗಳಲ್ಲಿ ಗ್ರಾಮ್ ಒನ್ ಸೇವಾ ಕೇಂದ್ರಗಳನ್ನು ಪ್ರಾರಂಭ ಮಾಡಿದೆ. ಹಾಗಾಗಿ ನಾಡ ಕಚೇರಿಗಳಲ್ಲಿ ಕೆಲಸ ಮಾಡುವ ನಮ್ಮ ಸೇವೆಯನ್ನೂ ಕೂಡ ಸರಕಾರ ಪರಿಗಣಿಸಬೇಕು. ನಾವೂ ಕೂಡ ಸರಕಾರಕ್ಕಾಗಿ ಚುನಾವಣೆ, ಕೊವಿಡ್ ಹಾಗೂ ಇನ್ನಿತರ ಸಂದರ್ಭಗಳಲ್ಲಿ ಹಗಲು ರಾತ್ರಿ ಎನ್ನದೇ ಸತತ 10 ವರ್ಷಗಳಿಂದ ಕಾರ್ಯ ನಿರ್ವಹಿಸಿದ್ದೇವೆ. ಹಾಗಾಗಿ ಸರಕಾರ ಹೋಬಳಿ ಮಟ್ಟದಲ್ಲಿ ಇರುವ ನಾಡ ಕಚೇರಿಗಳನ್ನು ಹಾಗೂ ನಮ್ಮ ಕಾರ್ಯವನ್ನು ಕೂಡ ಮುಂದುವರೆಸಬೇಕೆಂದು ಜಿಲ್ಲಾಧಿಕಾರಿಗಳಿಗೆ ಮನವಿ ಮಾಡಿದರು.

ಇನ್ನು ಇದೇ ಸಂದರ್ಭದಲ್ಲಿ ಮಾತನಾಡಿದ ಅಟಲ್‍ಜಿ ಜನಸ್ನೇಹಿ ಕೇಂದ್ರದ ನೌಕರರು, ಸರಕಾರ ಈಗಾಗಲೇ ಗ್ರಾಮಮಟ್ಟದಲ್ಲಿಯೇ ಗ್ರಾಮ್ ಒನ್ ಕೇಂದ್ರಗಳ ಮೂಲಕ ಎಲ್ಲಾ ಸೌಲಭ್ಯಗಳನ್ನು ನೀಡುತ್ತಿದೆ. ಇದರಿಂದ ಹೋಬಳಿ ಮಟ್ಟದಲ್ಲಿರುವ ಅಟಲ್‍ಜಿ ಜನಸ್ನೇಹಿ ಕೇಂದ್ರಗಳ ಪ್ರಾಮುಖ್ಯತೆ ಕಡಿಮೆಯಾಗಿ ಮುಂದೊಂದು ದಿನ ಮುಚ್ಚುವ ಸಂದರ್ಭ ಬರಬಹುದು. ನಾವು ಈಗಾಗಲೇ 10 ವರ್ಷಗಳಿಂದ ಈ ಕೇಂದ್ರಗಳಲ್ಲಿಯೇ ಕಾರ್ಯ ಹಾಗಾಗಿ ನಮ್ಮ ಸೇವೆಯನ್ನೂ ಕೂಡ ಮುಂದುವರೆಸಬೇಕೆಂದು ಹಾಗೂ ಅಟಲ್‍ಜಿ ಜನಸ್ನೇಹಿ ಕೇಂದ್ರಗಳನ್ನು ಬಂದ್ ಮಾಡಬಾರದೆಂದು ಮನವಿ ಮಾಡಿದರು.

ಇನ್ನು ಇದೇ ಸಂದರ್ಭದಲ್ಲಿ ಮಾತನಾಡಿದ ಇನ್ನೋರ್ವ ನೌಕರರು, ಸರಕಾರದ ಅದೇಶದಂತೆ ಈ ಹಿಂದೆ ಅಟಲ್‍ಜಿ ಜನಸ್ನೇಹಿ ಕೇಂದ್ರಗಳ ಮೂಲಕ ಕನರಿಗೆ ಸರಕಾರಿ ವಿವಿಧ ಸೌಲಭ್ಯಗಳನ್ನು ನೀಡುವ ಕಾರ್ಯಕ್ರಮವನ್ನು ಹಮ್ಮಿಕೊಂಡಿತ್ತು. ಆದರೆ ಈಗ ಗ್ರಾಮ್ ಒನ್ ಆಗಿದ್ದರಿಂದ ಎಲ್ಲ ನಮ್ಮ ಅಟಲ್‍ಜಿ ಜನಸ್ನೇಹಿ ಕೇಂದ್ರಗಳು ಮುಚ್ಚುತ್ತವೆಯೋ ಎಂದು ಆತಂಕಕ್ಕೆ ಒಳಗಾಗಿದ್ದೇವೆ. ಗಾಗಾಗಿ ನಮ್ಮ ಕುಂದುಕೊರತೆಗಳನ್ನು ಕೇಳಿ ನಮ್ಮ ಸಮಸ್ಯೆಗಳನ್ನು ಪರಿಹಾರ ಮಾಡುವಂತೆ ಜಿಲ್ಲಾಧಿಕಾಗಳಿಗೆ
ಮನವಿ

 

 

Tags:

error: Content is protected !!