ರಾಜ್ಯದ ಶ್ರೇಷ್ಠ ನೀರಾವರಿ ತಜ್ಞರಾಗಿದ್ದ ದಿವಂಗತ ಎಸ್.ಜಿ. ಬಾಳೇಕುಂದ್ರಿಯವರ ಪುಣ್ಯಸ್ಮರಣೆಯನ್ನು ಆಚರಿಸಲಾಯಿತು.

ಬೆಳಗಾವಿ ಶಿವಬಸವನಗರದ ನಾಗನೂರು ರುದ್ರಾಕ್ಷಿಮಠದ ಎಸ್. ಜಿ. ಬಿ. ಐ. ಟಿ ಆವರಣದಲ್ಲಿ ನಡೆದ ಕಾರ್ಯಕ್ರಮದಲ್ಲಿ ಪೂಜ್ಯಶ್ರೀ ನಾಗನೂರ ಮಠದ ಡಾ. ಅಲ್ಲಮಪ್ರಭು ಸ್ವಾಮಿಜಿ ನೇತೃತ್ವದಲ್ಲಿ ದಿವಂಗತ ಎಸ್. ಜಿ. ಬಾಳೇಕುಂದ್ರಿಯವರ ಪುಣ್ಯಸ್ಮರಣೆಯನ್ನು ಆಚರಿಸಲಾಯಿತು. ಇದೇ ಸಂದರ್ಭದಲ್ಲಿ ಬರುವ ಮೇ ತಿಂಗಳಿನಲ್ಲಿ ಅವರ ಜನ್ಮಶತಮಾನೋತ್ಸವವನ್ನು ವಿದಾಯಕವಾಗಿ ಅರ್ಥಪೂರ್ಣವಾಗಿ ಆಚರಿಸಲಾಗುವದು ಎಂದು ಹೇಳಿದರು.
