ಇಂದಿನಿಂದ ರಾಜ್ಯದಲ್ಲಿ ವೀಕೆಂಡ್ ಕಫ್ರ್ಯೂ ಜಾರಿ ಹಿನ್ನೆಲೆ ಸರ್ಕಾರದ ನಿಯಮವನ್ನು ಸಾರ್ವಜನಿಕರು ಕಟ್ಟು ನಿಟ್ಟಾಗಿ ಪಾಲಿಸಬೇಕು. ಒಂದು ವೇಳೆ ನಿಯಮ ಉಲ್ಲಂಘಿಸಿದ್ರೆ ಕಾನೂನು ಕ್ರಮ ಖಚಿತ ಎಂದು ನಗರ ಪೊಲೀಸ್ ಆಯುಕ್ತ ಡಾ.ಎಂ.ಬಿ.ಬೋರಲಿಂಗಯ್ಯ ಖಡಕ್ ಎಚ್ಚರಿಕೆ ನೀಡಿದ್ದಾರೆ.

ಶುಕ್ರವಾರ ಬೆಳಗಾವಿಯ ತಮ್ಮ ಕಚೇರಿಯಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಡಾ.ಎಂ.ಬಿ.ಬೋರಲಿಂಗಯ್ಯ ಅತಿ ಅವಶ್ಯಕತೆ ಇಲ್ಲ ಅಂದ್ರೆ ಹೊರಗೆ ಬರೋದು ಬೇಡ. ಇಂದು ಸಂಜೆ 8 ಗಂಟೆಯಿಂದ ಸೋಮವಾರ ಬೆಳಿಗ್ಗೆ 5 ಗಂಟೆಯವರೆಗೆ ಕಪ್ರ್ಯೂ ಜಾರಿಯಲ್ಲಿ ಇರುತ್ತದೆ. ಅತಿ ಅವಶ್ಯಕತೆ ಇಲ್ಲವೆಂದರೆ ಹೊರಗಡೆ ಬರಲೇಬೇಡಿ ಬಹಳ ಅನಿವಾರ್ಯವಿದ್ದರೆ ಮಾತ್ರ ಹೊರಗಡೆ ಬನ್ನಿ ದಿನಸಿ ಸಾಮಗ್ರಿ, ವೈದ್ಯಕೀಯ ತುರ್ತು ಪರಿಸ್ಥಿತಿ ಇದ್ದರೆ ಮಾತ್ರ ಬನ್ನಿ. ಕೋವಿಡ್ ಪ್ರಮಾಣ ಕಡಿಮೆಯಾಗಿದೆ ಎಂದು ಯಾರೂ ನಿರ್ಲಕ್ಷ್ಯ ಮಾಡಬೇಡಿ. ಕೋವಿಡ್ ಮಹತ್ವವನ್ನು ಜನರಿಗೆ ತಿಳಿಸಿಲು ತಂಡಗಳನ್ನು ರಚಿಸಿ ಮಾರ್ಕೆಟ್, ಮಾಲ್ ಮತ್ತು ಜನರು ಸೇರುವಂತಹ ಜಾಗದಲ್ಲಿ ಕೋವಿಡ್ ಜಾಗೃತಿ ಮೂಡಿಸುತ್ತೇವೆ ಎಂದರು.

ಇನ್ನು ಯಾರಿಗೆ ನಿಜವಾಗಿಯೂ ಅವಶ್ಯಕತೆ ಇದೆ ಅಂತವರಿಗೆ ಹೋಗಲು ಬಿಡಲಾಗುತ್ತದೆ. ದಿನಸಿ ಅಂಗಡಿ, ಡೈರಿ ಸೇರಿದಂತೆ ದಿನನಿತ್ಯದ ಅಗತ್ಯ ಸಾಮಗ್ರಿಗಳ ಅಂಗಡಿಗಳನ್ನು ತೆರೆಯಬಹುದು. ಜನರ ಸಹಕಾರ ಬೇಕೆ ಬೇಕು. ಹತ್ತಿರದ ಆಸ್ಪತ್ರೆ ಬಿಟ್ಟು 4ರಿಂದ 5 ಕಿ.ಮಿ ಬಂದರೆ ಅಂತವರ ವಿರುದ್ಧ ಕ್ರಮ ಕೈಗೊಳ್ಳಲಾಗುವುದು. ಯಾವುದೇ ಅಗತ್ಯ ವಸ್ತುಗಳನ್ನು ಖರೀದಿಸಲು 1ಕಿ.ಮೀ ಅಂತರದಲ್ಲಿ ಖರೀದಿಸಬೇಕು ಎಂದು ಸಾರ್ವಜನಿಕರಲ್ಲಿ ಡಾ.ಬೋರಲಿಂಗಯ್ಯ ಅವರು ಮನವಿ ಮಾಡಿಕೊಂಡರು.
ಸುದ್ದಿಗೋಷ್ಠಿಯಲ್ಲಿ ಡಿಸಿಪಿಗಳಾದ ಡಾ.ವಿಕ್ರಮ್ ಆಮ್ಟೆ, ಪಿ.ವ್ಹಿ.ಸ್ನೇಹಾ ಉಪಸ್ಥಿತರಿದ್ದರು. ಒಟ್ಟಿನಲ್ಲಿ ಇಂದು ರಾತ್ರಿ 8 ಗಂಟೆಯಿಂದಲೇ ವೀಕೆಂಡ್ ಕಫ್ರ್ಯೂ ಜಾರಿಯಾಗುತ್ತಿದ್ದು. ವಿನಾಕಾರಣ ಹೊರಗಡೆ ಬಂದ್ರೆ ಪೊಲೀಸರು ಕಾನೂನು ಕ್ರಮ ಕೈಗೊಳ್ಳಲಿದ್ದಾರೆ. ನಮ್ಮ ಆರೋಗ್ಯದ ಜೊತೆಗೆ ಕುಟುಂಬದ ಆರೋಗ್ಯ, ಸಮಾಜದ ಆರೋಗ್ಯ ಕಾಪಾಡುವುದು ನಮ್ಮೆಲ್ಲರ ಕರ್ತವ್ಯ ಎಂಬುದನ್ನು ಯಾರೂ ಮರೆಯಬೇಡಿ.