ಹುನಗುಂದ ಮಾಜಿ ಶಾಸಕ ವಿಜಯಾನಂದ ಕಾಶಪ್ಪನವರ್ ಸಚಿವ ಗೋವಿಂದ ಕಾರಜೋಳ ವಿರುದ್ದ ವಾಗ್ದಾಳಿ ನಡೆಸಿದರು.

ಬಾಗಲಕೋಟೆಯಲ್ಲಿ ಪಂಚಮಸಾಲಿ ಸಮುದಾಯದ ಸಭೆಯ ಬಳಿಕ ಮಾಧ್ಯಮಗಳ ಜೊತೆಗೆ ಮಾತನಾಡಿದ ವಿಜಯಾನಂದ ಕಾಶಪ್ಪನವರ್ ಸಚಿವ ಕಾರಜೋಳ ಅವರೇನು ದೊಡ್ಡ ಮನುಷ್ಯರಾ..? ಈ ರಾಜ್ಯಕ್ಕೆ, ದೇಶಕ್ಕೆ ಏನಾದ್ರೂ ಹೋರಾಟ ಮಾಡಿ ತಂದುಕೊಟ್ಟಿದ್ದಾರಾ..? ಎಂ.ಬಿ.ಪಾಟೀಲರು ಸತ್ಯ ಹೇಳಿದ್ದಾರೆ, ಈ ಪುಣ್ಯಾತ್ಮ ಕಾರಜೋಳ ಏನ್ ಮಾಡಿದ್ದಾರೆ.
ಕಾರಜೋಳರು ಡಿಸಿಎಂ ಆಗಿ ಬಾಗಲಕೋಟೆ ಜಿಲ್ಲೆಗೆ ಏನ್ ಮಾಡಿದ್ದಾರೆ. ಕಾರಜೋಳ ಮಾಡಿದ್ದು ಬರೀ ದ್ವೇಷರಾಜಕಾರಣ. ನೀರಾವರಿ ಸಚಿವರಾಗಿ ಜಿಲ್ಲೆಗೆ ಏನ್ ಮಾಡಿದ್ದಿರಿ ಹೇಳ್ರೀ ಎಂದು ಪ್ರಶ್ನೆ ಮಾಡಿದರು. ಎಂ.ಬಿ.ಪಾಟೀಲ ಅವರು ಉತ್ತರ ಕರ್ನಾಟಕಕ್ಕೆ ಪ್ರತಿವರ್ಷ 10 ಸಾವಿರ ಕೋಟಿ ಕೊಡ್ತಿನಿ ಅಂದಿದ್ರು. ಸಿದ್ದರಾಮಯ್ಯನವರ ಸರ್ಕಾರ ಪ್ರತಿವರ್ಷ 10 ಸಾವಿರ ಕೋಟಿ ಅನುದಾನ ನೀಡಿದೆ ಎಂದು ಸಮರ್ಥಿಸಿಕೊಂಡರು.
