Belagavi

ಕುಡಿಯುವ ನೀರು, ನ್ಯೆರ್ಮಲ್ಯ ಕಾರ್ಯಾಗಾರಕ್ಕೆ ಜಿ.ಪಂ.ಉಪಾಧ್ಯಕ್ಷ ಕಟಾಂಬಳೆ ಚಾಲನೆ

Share

ಬೆಳಗಾವಿ ಜಿಲ್ಲಾ ಪಂಚಾಯತಿಯಲ್ಲಿ ಕುಡಿಯುವ ನೀರು ಮತ್ತು ನ್ಯೆರ್ಮಲ್ಯ ಕುರಿತು ವಿಶೇಷ ಕಾರ್ಯಾಗಾರವನ್ನು ಹಮ್ಮಿಕೊಳ್ಳಲಾಗಿತ್ತು.

ಶನಿವಾರ ಬೆಳಗಾವಿ ಜಿಲ್ಲಾ ಪಂಚಾಯತಿ ಸಭಾಗೃಹದಲ್ಲಿ ಗ್ರಾಮೀಣ ಕುಡಿಯುವ ನೀರು ಮತ್ತು ನ್ಯೆರ್ಮಲ್ಯ ಇಲಾಖೆ, ಅನುಷ್ಟಾನ ಬೆಂಬಲ ಸಂಸ್ಥೆ, ನಗರ ಮತ್ತು ಗ್ರಾಮೀಣ ಅಭ್ರಿವೃದ್ಧಿ ಸಂಸ್ಥೆ ಸಹಯೋಗದಲ್ಲಿ ಕುಡಿಯುವ ನೀರು ಮತ್ತು ನ್ಯರ್ಮಲ್ಯ ಕುರಿತು ಕಾರ್ಯಾಗಾರವನ್ನು ಹಮ್ಮಿಕೊಳ್ಳಲಾಗಿತ್ತು. ಈ ಕಾರ್ಯಾಗಾರಕ್ಕೆ ಜಿ.ಪಂ.ಉಪಾಧ್ಯಕ್ಷ ಅರುಣ ಕಟಾಂಬಳೆ ಸಸಿಗೆ ನೀರು ಎರೆಯುವ ಮೂಲಕ ಚಾಲನೆ ನೀಡಿದರು.
ಕಾರ್ಯಾಗಾರದಲ್ಲಿ ತಾ.ಪಂ.ಅಧ್ಯಕ್ಷ ಶಂಕರಗೌಡ ಪಾಟೀಲ್, ಉಪಕಾರ್ಯದರ್ಶಿ ಎಸ್.ಬಿ.ಮುಳ್ಳಳ್ಳಿ, ಡಿ.ಎಂ.ಜಕ್ಕಪ್ಪಗೋಳ, ನೀಲಮ್ಮ ಅಸುಟ್ಟಿ ಮುಂತಾದವರನ್ನು ಉಪಸ್ಥಿತರಿದ್ದರು.

Tags:

error: Content is protected !!