ಬೆಳಗಾವಿಯ ದೇಶಪಾಂಡೆ ಫೌಂಡೇಷನ್ ಸಣ್ಣ ಉದ್ಯಮಿಗಳ ಅಭಿವೃದ್ಧಿ ಕಾರ್ಯಕ್ರಮದ ಅಂಗವಾಗಿ ಜನವರಿ 8ರಿಂದ 11ರವರೆಗೆ ಬೆಳಗಾವಿ ನೆಹರೂ ನಗರದಲ್ಲಿ ಉದ್ಯಮಿ ಸಂತೆಯನ್ನು ಹಮ್ಮಿಕೊಂಡಿದೆ ಎಂದು ದೇಶಪಾಂಡೆ ಫೌಂಡೇಷನ್ನ ಪ್ರಾಜೆಕ್ಟ ಮ್ಯಾನೇಜರ್ ವೀರಯ್ಯ ಹಿರೇಮಠ ತಿಳಿಸಿದರು.
: ಬೆಳಗಾವಿಯಲ್ಲಿ ಸುದ್ದಿಗಾರರೊಂದಿಗೆ ದೇಶಪಾಂಡೆ ಫೌಂಡೇಷನ್ನ ಪ್ರಾಜೆಕ್ಟ ಮ್ಯಾನೇಜರ್ ವೀರಯ್ಯ ಹಿರೇಮಠ ಮಾತನಾಡಿ, ಬೆಳಗಾವಿಯ ಸಣ್ಣ ಉದ್ಯಮಿಗಳಿಗೆ ಅನುಕೂಲ ಕಲ್ಪಿಸುವ ಉದ್ದೇಶದಿಂದ ಬೆಳಗಾವಿ ಕಣಬರಗಿ ರಸ್ತೆಯ ಭಾರತ ಕಾಲೋನಿಯಲ್ಲಿ ಕಚೇರಿ ಹೊಂದಿರುವ ದೇಶಪಾಂಡೆ ಫೌಂಡೇಷನ್ ನೆಹರೂ ನಗರ ಎಪಿಎಂಸಿ ರಸ್ತೆಯ ಬಸವಣ್ಣ ಮಹಾದೇವ ಮಂದಿರದಲ್ಲಿ ಉದ್ಯಮಿ ಸಂತೆಯನ್ನು ಜನವರಿ 8ರಿಂದ 4 ದಿನಗಳ ಕಾಲ ಹಮ್ಮಿಕೊಂಡಿದೆ.
ಆಹಾರ ಪದಾರ್ಥ, ಸಾವಯವ ಪದಾರ್ಥ, ವಿವಿಧ ಬಗೆಯ ತಿಂಡಿಗಳು, ಸಿರಿಧಾನ್ಯಗಳು, ಕೈಮಗ್ಗದ ಸೀರೆಗಳು, ಉಡುಪು, ಕರಕುಶಲ ವಸ್ತುಗಳ ಮಾರುಕಟ್ಟೆ ಉದ್ಯಮ ಸಂತೆಯಲ್ಲಿ ಲಭ್ಯವಿರುತ್ತದೆ. ಜನರು ಸಂತೆಯ ಉಪಯೋಗ ಪಡೆಯಬೇಕು ಎಂದು ವಿನಂತಿಸಿದರು.
ಈ ಸಂದರ್ಭದಲ್ಲಿ ದೇಶಪಾಂಡೆ ಫೌಂಡೇಷನ್ನ ಕಾರ್ಯಕ್ರಮ ಸಂಯೋಜಕ ಪರಮೇಶ್ವರ ಗಡಾದ ಇದ್ದರು.