Belagavi

ಕೆಎಸ್‌ಆರ್‌ಪಿ ಕಮಾಂಡೆಂಟ್ ಹಂಝಾ ಹುಸೇನ್‌ಗೆ ಸತ್ಕಾರ

Share

ಪೊಲೀಸ್ ಇಲಾಖೆಯಲ್ಲಿ ಅತ್ಯುನ್ನತ ಸೇವೆ ಸಲ್ಲಿಸಿದ ಹಿನ್ನೆಲೆ ಕೆಎಸ್‍ಆರ್‍ಪಿ 2ನೇ ಪಡೆಯ ಕಮಾಂಡೆಂಟ್ ಹಂಝಾ ಹುಸೇನ್ ಅವರಿಗೆ ರಾಷ್ಟ್ರಪ್ರಶಸ್ತಿ ಚಿನ್ನದ ಪದಕ ಸಿಕ್ಕಿರುವ ಹಿನ್ನೆಲೆ ಸಿಎಂಎ ಐಎಎಸ್ ಅಕಾಡೆಮಿ ವತಿಯಿಂದ ಸತ್ಕರಿಸಲಾಯಿತು.

ಬುಧವಾರ ಬೆಳಗಾವಿಯ ಸಿಎಂಎ ಐಎಎಸ್ ಅಕಾಡೆಮಿ ಸೆಂಟರ್‍ನಲ್ಲಿ ಕಮಾಂಡೆಂಟ್ ಹಂಝಾ ಹುಸೇನ್ ಹಾಗೂ ಕೆಎಸ್‍ಆರ್‍ಪಿ ಪಿಎಸ್‍ಐ ಜ್ಯೋತಿ ಅವರಿಗೂ ಸತ್ಕಾರ ಸಮಾರಂಭ ಹಮ್ಮಿಕೊಳ್ಳಲಾಗಿತ್ತು. ಈ ವೇಳೆ ನಿವೃತ್ತ ಐಎಎಸ್ ಅಧಿಕಾರಿ ಎಂ.ಬಿ.ಬಡಬಡೆ ಅವರು ಕಮಾಂಡೆಂಟ್ ಹಂಝಾ ಹುಸೇನ್ ಅವರಿಗೆ ಶಾಲು ಹೊದಿಸಿ ಸತ್ಕರಿಸಿ ಗೌರವಿಸಿದರು.

ಸನ್ಮಾನ ಸ್ವೀಕರಿಸಿ ಕಮಾಂಡೆಂಟ್ ಹಂಝಾ ಹುಸೇನ್ ಅವರು ಪಿಎಸ್‍ಐ ಹುದ್ದೆ ತರಬೇತಿ ಪಡೆಯುತ್ತಿರುವ ವಿದ್ಯಾರ್ಥಿಗಳನ್ನು ಉದ್ದೇಶಿಸಿ ಮಾತನಾಡಿ ಭಾಷೆ, ಧರ್ಮ, ಗಡಿ, ಜಾತಿಗಳಿಂದ ಸಂಕೋಲೆಯಿಂದ ಹೊರಗೆ ಬರಬೇಕು. ಸಂಕುಚಿತ ಮನೋಭಾವನೆಯಿಂದ ತಾವೆಲ್ಲಾ ಹೊರ ಬರಬೇಕು. ನಾವೆಲ್ಲಾ ಮನುಷ್ಯ ಜಾತಿ ಎಂಬುದನ್ನು ಮರೆಯಬಾರದು. ಒಳ್ಳೆಯ ರೀತಿ ಅಧ್ಯಯನ ಮಾಡಿಕೊಂಡು ಉನ್ನತ ಹುದ್ದೆಗಳನ್ನು ತಾವು ಪಡೆದುಕೊಂಡು ಸಮಾಜಮುಖಿ ಕೆಲಸ ಮಾಡುವಂತೆ ಆಗಲಿ ಎಂದು ಶುಭ ಹಾರೈಸಿದರು.

ಈ ಸಂದರ್ಭದಲ್ಲಿ ಹಲವು ಅಧಿಕಾರಿಗಳು, ಅಕಾಡೆಮಿಯಲ್ಲಿ ತರಬೇತಿ ಪಡೆಯುತ್ತಿರುವ ವಿದ್ಯಾರ್ಥಿಗಳು ಉಪಸ್ಥಿತರಿದ್ದರು.

Tags:

error: Content is protected !!