Dharwad

ಧಾರವಾಡ ಎಸಿ ಶಾಲಂ ಹುಸೇನ್ ವರ್ಗಾವಣೆ..ನೂತನ ಪ್ರಭಾವತಿ ಧಾರವಾಡದ ನೂತನ ಉಪವಿಭಾಗಾಧಿಕಾರಿ ನಿಯೋಜನೆ.

Share

ಧಾರವಾಡದ ಉಪವಿಭಾಗಾಧಿಕಾರಿಯಾಗಿದ್ದ ಶಾಲಂ ಹುಸೇನ್‌ ಅವರನ್ನು ವರ್ಗಾವಣೆ ಮಾಡಿ ಆ ಸ್ಥಾನಕ್ಕೆ ಪ್ರಭಾವತಿ ಫಕೀರಪುರ ಎಂಬುವವರನ್ನು ಸರ್ಕಾರ ನೇಮಕ ಮಾಡಿದೆ.

ಶಾಲಂ ಹುಸೇನ್‌ ಅವರನ್ನು ಉತ್ತರ ಕನ್ನಡ ಜಿಲ್ಲೆಗೆ ವರ್ಗಾಯಿಸಲಾಗಿದ್ದು, ಅವರ ಸ್ಥಾನಕ್ಕೆ ಅಂದರೆ ಧಾರವಾಡದ ನೂತನ ಉಪವಿಭಾಗಾಧಿಕಾರಿಯನ್ನಾಗಿ 2011ರ ಬ್ಯಾಚಿನ ಕೆಎಎಸ್ ಅಧಿಕಾರಿ ಪ್ರಭಾವತಿ ಅವರನ್ನು ಸರ್ಕಾರ ನೇಮಕ ಮಾಡಿದೆ. ಪ್ರಭಾವತಿ ಅವರು ಈ ಹಿಂದೆ ರೇಣುಕಾ ಯಲ್ಲಮ್ಮದೇವಿ ದೇವಸ್ಥಾನ ಅಭಿವೃದ್ಧಿ ಪ್ರಾಧಿಕಾರದ ಕಾರ್ಯದರ್ಶಿ ಹಾಗೂ ಕಿತ್ತೂರು ಅಭಿವೃದ್ಧಿ ಪ್ರಾಧಿಕಾರದ ಆಯುಕ್ತರಾಗಿದ್ದರು.

Tags:

error: Content is protected !!