KITTUR

“ಕಿತ್ತೂರು ಕ್ಷೇತ್ರದ ರಸ್ತೆಗಳಿಗೆ ಅಭಿವೃದ್ಧಿಯ ಸ್ಪರ್ಶ” “ಕ್ಷೇತ್ರದ ರಸ್ತೆಗಳಿಗೆ ಕೋಟಿ ಕೋಟಿ ಅನುದಾನದ ಸ್ಪರ್ಶ”

Share

ಬೆಳಗಾವಿ ಜಿಲ್ಲೆಯ ಕಿತ್ತೂರು ಕ್ಷೇತ್ರದ ಶಾಸಕರಾದ ಬಾಬಾಸಾಹೇಬ್ ಪಾಟೀಲ ಅವರು ಪರಿಶ್ರಮದಿಂದ ತಮ್ಮ ಕ್ಷೇತ್ರದಲ್ಲಿ ಶಿಕ್ಷಣಕ್ಕೆ ಮಾತ್ರವಲ್ಲದೆ, ಸಾರ್ವಜನಿಕರ ಸುಗಮ ಸಂಚಾರಕ್ಕೂ ಹೆಚ್ಚಿನ ಆದ್ಯತೆ ನೀಡುತ್ತಿದ್ದು, ಸಾಕಷ್ಟು ಅನುದಾನ ತಂದು
“ಜನರ ಕನಸಿನ ರಸ್ತೆಗೆ ಚಾಲನೆ ನೀಡಿದ ಶಾಸಕರು” ಮತ್ತು
ವಿವಿಧ ಗ್ರಾಮಗಳ ರಸ್ತೆ ಅಭಿವೃದ್ಧಿ ಕಾಮಗಾರಿಗಳನ್ನು ಕೈಗೆತ್ತಿಕೊಂಡಿದ್ದಾರೆ.

ಇಂದು ಕಿತ್ತೂರು ಕ್ಷೇತ್ರದ ಮಾರ್ಗನಕೊಪ್ಪ ಗ್ರಾಮದ ಪ್ರಮುಖ ರಸ್ತೆಗೆ ಲೋಕೋಪಯೋಗಿ ಇಲಾಖೆ ವತಿಯಿಂದ ಸುಮಾರು 110 ಲಕ್ಷ ರೂಪಾಯಿ ವೆಚ್ಚದಲ್ಲಿ ಕಾಮಗಾರಿಗೆ ಚಾಲನೆ ನೀಡಲಾಯಿತು.
ಜೊತೆಗೆ ಅದೇ ಗ್ರಾಮದ ಹೊಲಗಳಿಗೆ ಸಂಪರ್ಕ ಕಲ್ಪಿಸುವ ರಸ್ತೆಯನ್ನು 10 ಲಕ್ಷ ರೂಪಾಯಿ ವೆಚ್ಚದಲ್ಲಿ ಅಭಿವೃದ್ಧಿಪಡಿಸುವ ಕಾಮಗಾರಿಗೂ ಭೂಮಿ ಪೂಜೆ ನೆರವೇರಿಸಲಾಯಿತು.

ಪ್ರತಿಯೊಂದು ಗ್ರಾಮಗಳಿಗೂ ಒಂದೊಂದು ಕೊಡುಗೆ ನೀಡುತ್ತಿರುವ ಶಾಸಕರು

ಈಗಾಗಲೇ ಕ್ಷೇತ್ರದ ಹಲವು ರಸ್ತೆ ಕಾಮಗಾರಿಗಳು ಪೂರ್ಣಗೊಂಡಿದ್ದು, ಸಾರ್ವಜನಿಕರಿಗೆ ಸುಗಮ ಸಂಚಾರಕ್ಕೆ ಅನುಕೂಲ ಕಲ್ಪಿಸಲಾಗಿದೆ.

“ಗ್ರಾಮಗಳ ಸಂಪರ್ಕಕ್ಕೆ ಕಿತ್ತೂರು ಕ್ಷೇತ್ರದಲ್ಲಿ ರಸ್ತೆ ಅಭಿವೃದ್ಧಿ ಮಹಾಪೂರ”

ಗ್ರಾಮೀಣ ರಸ್ತೆಗಳಿಗೆ ಹೊಸ ರೂಪ ನೀಡಿದ ಕಿತ್ತೂರು ಕ್ಷೇತ್ರ ಶಾಸಕರಾದ ಬಾಬಾ ಸಾಹೇಬ್ ಪಾಟೀಲ್

ಕೋಟಿಗಟ್ಟಲೆ ಹಣವನ್ನು ತಂದು ತಮ್ಮ ಕ್ಷೇತ್ರದಲ್ಲಿ ಅಭಿವೃದ್ಧಿ ಕಾಮಗಾರಿಗೆ ಚಾಲನೆ ನೀಡುತ್ತಿರುವ ಶಾಸಕರು

ಇವತ್ತಿನ
ಈ ಭೂಮಿ ಪೂಜಾ ಕಾರ್ಯಕ್ರಮದಲ್ಲಿ ಕಿತ್ತೂರಿನ ಶಾಸಕರಾದ ಬಾಬಾಸಾಹೇಬ್ ಪಾಟೀಲ, ಶಿವಯೋಗಿ ದೊಡ್ಡಮನಿ, ಸುರೇಶ್ ಕಾಕತಿ, ದೇಸಾಯಿ ಲಕ್ಷ್ಮಣ ಪಾಟೀಲ, ಸಂಗಣ್ಣಗೌಡ ಪಾಟೀಲ, ಮುದ್ದಕಪ್ಪ ಮರಡಿ, ಬಸನಗೌಡ ಪಾಟೀಲ,

 

ಬಸವರಾಜ ಬಸರಕೊಂಡ, ಶಿವು ಪಾಟೀಲ ಸೇರಿದಂತೆ ಗ್ರಾಮದ ಗುರುಹಿರಿಯರು ಹಾಗೂ ಕಾಂಗ್ರೆಸ್ ಮುಖಂಡರು ಭಾಗವಹಿಸಿದ್ದರು.

ವರದಿಗಾರ :
ಶಾನೂಲ ಮ
ಕಿತ್ತೂರು

Tags:

error: Content is protected !!