Belagavi

ಬೆಳಗಾವಿಯಲ್ಲಿ ದೇಶಪಾಂಡೆ ಇಂಡಸ್ಟ್ರೀಸ್’ನ ನೂತನ ಕಾರ್ಖಾನೆ ಹಾಗೂ ಕಚೇರಿ ಉದ್ಘಾಟನೆ

Share

ಬೆಳಗಾವಿ ಉದ್ಯಮಭಾಗದ ಬಿಇಎಂಸಿಐಎಲ್ ಕೈಗಾರಿಕಾ ವಲಯದಲ್ಲಿ ‘ದೇಶಪಾಂಡೆ ಇಂಡಸ್ಟ್ರೀಸ್’ ಸಂಸ್ಥೆಯ ನೂತನ ಕಾರ್ಖಾನೆ ಹಾಗೂ ಕಚೇರಿ ಕಟ್ಟಡದ ವಾಸ್ತುಶಾಂತಿ ಮತ್ತು ಉದ್ಘಾಟನಾ ಸಮಾರಂಭವು ಅತ್ಯಂತ ವಿಜೃಂಭಣೆಯಿಂದ ನೆರವೇರಿದೆ. ಐದು ದಶಕಗಳ ಹೆಮ್ಮೆಯ ಇತಿಹಾಸ ಹೊಂದಿರುವ ಈ ಸಂಸ್ಥೆಯ ಹೊಸ ಕಾರ್ಯಾಲಯವನ್ನು ಶಾಸಕರು ಹಾಗೂ ಗಣ್ಯರು ಉದ್ಘಾಟಿಸಿ, ಸಂಸ್ಥೆಯ ಮುಂದಿನ ಪಯಣಕ್ಕೆ ಶುಭ ಹಾರೈಸಿದ್ದಾರೆ.

ಬೆಳಗಾವಿ ಉದ್ಯಮಭಾಗದ ಬಿಇಎಂಸಿಐಎಲ್ ಕೈಗಾರಿಕಾ ವಲಯದಲ್ಲಿರುವ ‘ದೇಶಪಾಂಡೆ ಇಂಡಸ್ಟ್ರೀಸ್’ ನೂತನ ಕಾರ್ಖಾನೆ ಮತ್ತು ಕಚೇರಿ ಕಟ್ಟಡದ ವಾಸ್ತುಶಾಂತಿ ಹಾಗೂ ಉದ್ಘಾಟನಾ ಸಮಾರಂಭವು ಯಶಸ್ವಿಯಾಗಿ ನೆರವೇರಿತು.ಬೆಳಗಾವಿ ದಕ್ಷಿಣ ಕ್ಷೇತ್ರದ ಶಾಸಕರಾದ ಅಭಯ್ ಪಾಟೀಲ್ ಹಾಗೂ ಪ್ರೀತಿ ಪಾಟೀಲ್ ಅವರು ಈ ನೂತನ ಕಾರ್ಖಾನೆ ಮತ್ತು ಕಚೇರಿ ಆವರಣವನ್ನು ಉದ್ಘಾಟಿಸಿದರು.
ಈ ಶುಭ ಸಮಾರಂಭದಲ್ಲಿ ಗಣ್ಯರಾದ ಪ್ರಮುಖ ಉದ್ಯಮಿ ಹಾಗೂ ಚಲನಚಿತ್ರ ನಿರ್ಮಾಪಕರಾದ ಶ್ರೀಕಾಂತ್ ದೇಸಾಯಿ, ಗ್ರೀವ್ಸ್ ಕಾಟನ್ ಲಿಮಿಟೆಡ್‌ನ ಮಾರಾಟ ಮತ್ತು ಸೇವಾ ವಿಭಾಗದ ಜಿ.ಎಂ. ಆದ ವಿಜಯ್ ಛತ್ತಾನಿ ಹಾಗೂ ಅದೇ ಸಂಸ್ಥೆಯ ಎಜಿಎಂ ಆದ ನರಸಿಂಹರಾವ್ ಕುಲಕರ್ಣಿ ಅವರು ಉಪಸ್ಥಿತರಿದ್ದರು.

ದೇಶಪಾಂಡೆ ಇಂಡಸ್ಟ್ರೀಸ್‌ನ ಹೊಸ ಕಾರ್ಯಾಲಯವನ್ನು ಉದ್ಘಾಟಿಸಿ ಮಾತನಾಡಿದ ದಕ್ಷಿಣ ಶಾಸಕ ಅಭಯ್ ಪಾಟೀಲ್ ಈ ಸಂಸ್ಥೆಯ ಮಾಲೀಕರು ಮತ್ತು ತಮ್ಮ ಆತ್ಮೀಯ ಮಿತ್ರರಾದ ಭರತ್ ದೇಶಪಾಂಡೆ ಹಾಗೂ ಅವರ ಕುಟುಂಬದ ಎಲ್ಲ ಸದಸ್ಯರಿಗೆ ವಿಶೇಷ ಅಭಿನಂದನೆಗಳು ಮತ್ತು ಧನ್ಯವಾದಗಳನ್ನು ತಿಳಿಸಿದರು.ಈ ಹೊಸ ವಾಸ್ತುವಿನ ಸೇವೆಯ ಮುಖಾಂತರ ದೇಶಪಾಂಡೆ ಇಂಡಸ್ಟ್ರೀಸ್ ಸಂಸ್ಥೆಯು ಜನರ ಮುಟ್ಟುವಂತಹ ವ್ಯವಸ್ಥೆಯನ್ನು ಇನ್ನಷ್ಟು ವಿಸ್ತರಿಸಲಿ ಹಾಗೂ ಜನರ ಸಮಸ್ಯೆಗಳ ನಿವಾರಣೆಗೆ ಅವರು ಮತ್ತು ಅವರ ಮಗಳು ಶ್ರಿಯಾ ಇಬ್ಬರೂ ನಿರಂತರವಾಗಿ ಸೇವೆ ಸಲ್ಲಿಸಲಿ ಎಂದು ಹಾರೈಸಿದರು. ಅಲ್ಲದೆ, ಬರುವ ದಿನಗಳಲ್ಲಿ ಈ ವಾಸ್ತುವಿನ ಮುಖಾಂತರ ಇನ್ನೂ ಅನೇಕ ಹೊಸ ಕಾರ್ಯಗಳು ಮೂಡಿಬರಲಿ ಎಂದು ಆಶಿಸಿದರು.
ಗ್ರೀವ್ಸ್ ಕಾಟನ್ ಲಿಮಿಟೆಡ್‌ನ ವಲಯ ಮುಖ್ಯಸ್ಥ ವಿಜಯ್ ಛತ್ತಾನಿ ಮಾತನಾಡುತ್ತಾ, ಕಳೆದ 50ಕ್ಕೂ ಹೆಚ್ಚು ವರ್ಷಗಳಿಂದ ಈ ಪ್ರದೇಶದಲ್ಲಿ ಜನರೇಟರ್‌ಗಳ ಮಾರಾಟ ಹಾಗೂ ಅತ್ಯುತ್ತಮ ಸೇವೆ ಒದಗಿಸುತ್ತಿರುವ ದೇಶಪಾಂಡೆ ಇಂಡಸ್ಟ್ರೀಸ್ ಸಂಸ್ಥೆಯು ಗ್ರೀವ್ಸ್ ಜನರೇಟರ್‌ಗಳ ಅಧಿಕೃತ ವಿತರಕರಾಗಿ ಪಯೋನಿಯರ್ ಆಗಿ ಉತ್ತಮ ಕೆಲಸ ಮಾಡುತ್ತಿದೆ ಎಂದು ತಿಳಿಸಿ, ಹೊಸ ಕಚೇರಿಗೆ ಶುಭ ಹಾರೈಸಿದರು.
ಭರತ್ ದೇಶಪಾಂಡೆ ಅವರ ಸಹೋದರ ಶ್ರೀಕಾಂತ್ ದೇಶಪಾಂಡೆ ಮಾತನಾಡುತ್ತಾ, ಶ್ರಿಯಾ ಅವರು ಗ್ರೀವ್ಸ್ ಜನರೇಟರ್‌ಗಳ ಮಾರಾಟ, ಸೇವೆ ಮತ್ತು ಮಾರ್ಕೆಟಿಂಗ್ ಜವಾಬ್ದಾರಿಯನ್ನು ಅತ್ಯಂತ ಯಶಸ್ವಿಯಾಗಿ ಮುನ್ನಡೆಸುತ್ತಿದ್ದಾರೆ ಎಂದು ಹರ್ಷ ವ್ಯಕ್ತಪಡಿಸಿ, ದೇಶಪಾಂಡೆ ಕುಟುಂಬಕ್ಕೆ ಹಾಗೂ ಹೊಸ ಉದ್ಯಮಕ್ಕೆ ಶುಭ ಹಾರೈಸಿದರು.

ಶ್ರಿಯಾ ಭರತ್ ದೇಶಪಾಂಡೆ ಅವರು ಮಾತನಾಡಿ, ತಮ್ಮ ಸಂಸ್ಥೆಗೆ 50 ವರ್ಷಗಳು ಪೂರ್ಣಗೊಂಡಿರುವುದು ಹಾಗೂ ಇದನ್ನು ತಮ್ಮ ಅಜ್ಜಂದಿರಾದ ಕುಸುಮ್ ದೇಶಪಾಂಡೆ ಮತ್ತು ದೇವರಾಜ್ ದೇಶಪಾಂಡೆ ಅವರು ಸ್ಥಾಪಿಸಿರುವುದು ಅತ್ಯಂತ ಭಾವನಾತ್ಮಕ ಕ್ಷಣ ಎಂದು ತಿಳಿಸಿದರು. ತಮ್ಮ ಗ್ರಾಹಕರು ಕೇವಲ ಗ್ರಾಹಕರಷ್ಟೇ ಅಲ್ಲದೆ, ಜನರೇಟರ್ ಸೆಟ್‌ಗಳ ಮಾರಾಟ ಮತ್ತು ಮಾರುಕಟ್ಟೆಯಲ್ಲಿ ತಮಗೆ ಅತಿ ದೊಡ್ಡ ಬೆಂಬಲವಾಗಿ ನಿಂತಿದ್ದಾರೆ. ಕಳೆದ ಮೂರು ದಶಕಗಳಿಂದ ಜೊತೆಯಲ್ಲಿ ಕೆಲಸ ಮಾಡುತ್ತಿರುವ ಸಿಬ್ಬಂದಿ ವರ್ಗದವರಿಗೂ, ತಮ್ಮ ಕನಸಿಗೆ ನಿರಂತರ ಬೆಂಬಲ ನೀಡಿದ ಪತಿ ಹಾಗೂ ಮಗಳಿಗೂ ಧನ್ಯವಾದ ಅರ್ಪಿಸಿದ ಅವರು, ಮುಂದಿನ 50 ವರ್ಷಗಳೂ ಕೂಡ ಗ್ರಾಹಕರ ಎಲ್ಲಾ ಅವಶ್ಯಕತೆಗಳಿಗೆ ತಕ್ಕಂತೆ ಅತ್ಯುತ್ತಮ ಸೇವೆಯನ್ನು ಮುಂದುವರಿಸುವುದಾಗಿ ಭರವಸೆ ನೀಡಿದರು.

ಕಾರ್ಯಕ್ರಮದ ಯಶಸ್ಸಿಗೆ ಮೇಧಾ, ಭಾರತ್, ಶ್ರಿಯಾ, ಯೋಗೇಶ್ ಮತ್ತು ಸಾನ್ವಿಕಾ ಇನ್ನುಳಿದವರು ಶ್ರಮಿಸಿದರು.

Tags:

error: Content is protected !!