Belagavi

ಬಿಜೆಪಿ-ಜೆಡಿಎಸ್ ಮೈತ್ರಿಕೂಟಕ್ಕೆ ಬಿಗ್ ಶಾಕ್: ಎರಡು ದಿನಗಳಲ್ಲಿ ಹೈಕಮಾಂಡ್‌ಗೆ ಸತ್ಯಶೋಧನಾ ವರದಿ ಎಂದ ಸಿ.ಟಿ. ರವಿ!

Share

ಇತ್ತೀಚೆಗೆ ನಡೆದ ವಿಧಾನ ಪರಿಷತ್ ಚುನಾವಣೆಯಲ್ಲಿ ಬಿಜೆಪಿ ಮತ್ತು ಜೆಡಿಎಸ್ ಮೈತ್ರಿಕೂಟದ ಮತಗಳು ಸಾರಾಸಗಟಾಗಿ ಕೈತಪ್ಪಿರುವ ಹಿನ್ನೆಲೆಯಲ್ಲಿ ಬೆಳಗಾವಿಯಲ್ಲಿಂದು ಮಾಜಿ ಸಚಿವ, ಪರಿಷತ್ ಸದಸ್ಯ ಸಿ.ಟಿ. ರವಿ ಅವರು ಬಿಗ್ ಸ್ಟೇಟ್‌ಮೆಂಟ್ ನೀಡಿದ್ದಾರೆ. ಉಭಯ ಪಕ್ಷಗಳಿಂದ ಒಟ್ಟು 12 ಮತಗಳ ವ್ಯತ್ಯಾಸವಾಗಿದ್ದು, ಈ ಕುರಿತು ಎರಡು ದಿನಗಳಲ್ಲಿ ಹೈಕಮಾಂಡ್‌ಗೆ ಪ್ರಾಥಮಿಕ ವರದಿ ಸಲ್ಲಿಸುವುದಾಗಿ ತಿಳಿಸಿದ್ದಾರೆ. ಈ ಕುರಿತಾದ ಸವಿಸ್ತಾರ ವರದಿ ಇಲ್ಲಿದೆ.

ವಿಧಾನ ಪರಿಷತ್ ಚುನಾವಣೆಯಲ್ಲಿ ಬಿಜೆಪಿ ಹಾಗೂ ಜೆಡಿಎಸ್ ಮೈತ್ರಿಕೂಟದಿಂದ ಒಟ್ಟು 12 ಮತಗಳು ಕೈತಪ್ಪಿರುವ ಹಿನ್ನೆಲೆಯಲ್ಲಿ ಬೆಳಗಾವಿಯಲ್ಲಿಂದು ಪ್ರತಿಕ್ರಿಯಿಸಿದ ಸತ್ಯಶೋಧನಾ ಸಮಿತಿಯ ಪ್ರಮುಖರು ಹಾಗೂ ಪರಿಷತ್ ಸದಸ್ಯರಾದ ಸಿ.ಟಿ. ರವಿ, “ಯಾವ ಪಕ್ಷದಿಂದ ಎಷ್ಟು ಮತಗಳು ವ್ಯತ್ಯಾಸವಾಗಿವೆ ಹಾಗೂ ಯಾರಿಂದ ಈ ಧ್ರುವೀಕರಣ ನಡೆದಿದೆ ಎನ್ನುವ ಬಗ್ಗೆ ಸಾಂದರ್ಭಿಕ ಸಾಕ್ಷ್ಯಗಳು ಮತ್ತು ಮಾಹಿತಿಗಳನ್ನು ಕಲೆಹಾಕಲಾಗುತ್ತಿದ್ದು, ಎರಡು ದಿನಗಳಲ್ಲಿ ಹೈಕಮಾಂಡ್‌ಗೆ ಪ್ರಾಥಮಿಕ ಮಧ್ಯಂತರ ವರದಿಯನ್ನು ಒಪ್ಪಿಸಲಾಗುವುದು” ಎಂದು ತಿಳಿಸಿದರು.

ಗೌಪ್ಯ ಮತದಾನ ನಡೆದ ಕಾರಣ ಮತಗಳ ಕೊರತೆಯಾಗಿದ್ದು, ಒಂದು ಮತ ಕುಲಗೆಟ್ಟಿದೆ ಹಾಗೂ ತಲಾ 30 ವೋಟುಗಳಂತೆ ಪ್ರತ್ಯೇಕವಾಗಿ ಹಂಚಿಕೆ ಮಾಡಿ ಅವಲೋಕನ ಮಾಡಿಕೊಳ್ಳುವ ಕೆಲಸ ಪ್ರಸ್ತುತ ಪ್ರಗತಿಯಲ್ಲಿದೆ ಎಂದ ಅವರು, ಸದ್ಯಕ್ಕೆ ಯಾರ ಮೇಲೂ ನೇರ ಆರೋಪ ಮಾಡದೆ ಕೇವಲ ಅನುಮಾನದ ಆಧಾರದ ಮೇಲೆ ಸತ್ಯಶೋಧನೆ ನಡೆಸಲಾಗುತ್ತಿದೆ ಮತ್ತು ವರದಿ ಸಲ್ಲಿಕೆಯಾದ ಬಳಿಕ ಪಕ್ಷದ ಶಿಸ್ತು ಸಮಿತಿಯು ತಪ್ಪಿತಸ್ಥರ ವಿರುದ್ಧ ಕೈಗೊಳ್ಳಬೇಕಾದ ಕಠಿಣ ಕ್ರಮಗಳ ಬಗ್ಗೆ ಗಂಭೀರವಾಗಿ ಆಲೋಚಿಸಲಿದೆ ಎಂದು ಕಟು ಎಚ್ಚರಿಕೆ ನೀಡಿದರು.

Tags:

error: Content is protected !!