• ಮಕ್ಕಳಿಗಾಗಿ ವಿಶೇಷ ಶ್ಲೋಕ ಕಲಿಕಾ ಸ್ಪರ್ಧೆ
• ನೋಂದಣಿಗೆ ಮೇ 3 ಕೊನೆಯ ದಿನಾಂಕ
• ಉಚಿತ ಪ್ರವೇಶ ಹಾಗೂ ಸಾತ್ವಿಕ ಉಪಹಾರ
• ಜೀವನ ಮೌಲ್ಯಗಳ ಬೋಧನೆಗೆ ಭರ್ಜರಿ ತಯಾರಿ
ಇಂದಿನ ಆಧುನಿಕ ಯುಗದಲ್ಲಿ ಮಕ್ಕಳಿಗೆ ಸಂಸ್ಕಾರ ಮತ್ತು ಧೈರ್ಯದ ಪಾಠ ಅತಿ ಅವಶ್ಯಕ. ಇದೇ ಉದ್ದೇಶದೊಂದಿಗೆ ಬೆಳಗಾವಿಯ ಐತಿಹಾಸಿಕ ಕಪಿಲೇಶ್ವರ ದೇವಸ್ಥಾನದಲ್ಲಿ ಒಂದು ವಿಶಿಷ್ಟವಾದ ‘ಭಗವದ್ಗೀತೆ ಶ್ಲೋಕ ಸ್ಪರ್ಧೆ’ಯನ್ನು ಆಯೋಜಿಸಲಾಗಿದೆ
ಲಯನ್ಸ್ ಮತ್ತು ಲಿಯೋ ಕ್ಲಬ್ ಆಫ್ ಬೆಲಗಾಮ್, ಶ್ರೀ ಕಪಿಲೇಶ್ವರ ಮಹಾದೇವ ವಿಶ್ವಸ್ಥ ಮಂಡಳ ಮತ್ತು ಇಸ್ಕಾನ್ ಬೆಳಗಾವಿ ಇವರ ಸಂಯುಕ್ತ ಆಶ್ರಯದಲ್ಲಿ 6 ರಿಂದ 25 ವರ್ಷ ವಯಸ್ಸಿನವರಿಗಾಗಿ ವಿಶೇಷ ಭಗವದ್ಗೀತೆ ಶ್ಲೋಕ ಸ್ಪರ್ಧೆಯನ್ನು ಆಯೋಜಿಸಲಾಗಿದೆ. ಮೇ 3 ರಿಂದ ಜೂನ್ 7 ರವರೆಗೆ ಪ್ರತಿ ಭಾನುವಾರ ಬೆಳಿಗ್ಗೆ 6:30 ರಿಂದ 8:30 ರವರೆಗೆ ಕಪಿಲೇಶ್ವರ ದೇವಸ್ಥಾನದಲ್ಲಿ ಈ ತರಗತಿಗಳು ನಡೆಯಲಿವೆ. ಈ ಸ್ಪರ್ಧೆಯಲ್ಲಿ ಭಾಗವಹಿಸುವ ಮಕ್ಕಳಿಗೆ ಆತ್ಮವಿಶ್ವಾಸ, ಶಿಸ್ತು ಮತ್ತು ಏಕಾಗ್ರತೆಯನ್ನು ಹೆಚ್ಚಿಸುವ 10 ಆಯ್ದ ಶ್ಲೋಕಗಳನ್ನು ಅರ್ಥಸಹಿತ ಕಲಿಸಲಾಗುತ್ತದೆ. ಕಾರ್ಯಕ್ರಮಕ್ಕೆ ಯಾವುದೇ ಪ್ರವೇಶ ಶುಲ್ಕವಿಲ್ಲದಿದ್ದು, ಭಾಗವಹಿಸುವವರಿಗೆ ಸಾತ್ವಿಕ ಉಪಹಾರ ಮತ್ತು ಹಾಲಿನ ವ್ಯವಸ್ಥೆ ಮಾಡಲಾಗಿದೆ. ಆಸಕ್ತರು ಮೇ 3ರ ಒಳಗಾಗಿ ನೋಂದಾಯಿಸಿಕೊಳ್ಳಲು ಕೋರಲಾಗಿದೆ.

