ಇಂದು ಬೆಳಗಾವಿಯಲ್ಲಿ ಹಿಂದವಿ ಸ್ವರಾಜ್ಯದ ಸಂಸ್ಥಾಪಕ, ರೈತರ ರಾಜ, ಛತ್ರಪತಿ ಶಿವಾಜೀ ಮಹಾರಾಜರ 396ನೇ ಜಯಂತಿಯನ್ನು ಅತ್ಯಂತ ವಿಜೃಂಭಣೆಯಿಂದ ಆಚರಿಸಲಾಯಿತು.
ಮಹಾಪೌರ ಪ್ರೀತಿ ಕಾಮಕರ ಅವರು ಶಿವಜ್ಯೋತಿಯೊಂದಿಗೆ ಉದ್ಯಾನವನಕ್ಕೆ ಆಗಮಿಸಿ, ಛತ್ರಪತಿ ಶಿವಾಜೀ ಮಹಾರಾಜರ ಮೂರ್ತಿಗೆ ಮಾಲಾರ್ಪಣೆ ಮಾಡಿದರು. ಈ ವೇಳೆ ಉಪಮಹಾಪೌರ ಹಣುಮಂತ ಕೊಂಗಾಲಿ, ನಗರಸೇವಕ ಗಿರೀಶ್ ಧೋಂಗಡಿ, ಭರತ ಪಾಟೀಲ್, ನಿತೀಜ್ ಜಾಧವ್ ಸೇರಿದಂತೆ ಇನ್ನುಳಿದವರು ಭಾಗಿಯಾಗಿದ್ಧರು.

