ಖಾನಾಪೂರ ತಾಲೂಕಿನ ನಂದಗಡದ ಹಿಂದೂ ಧರ್ಮದ ಸ್ಮಶಾನ ಭೂಮಿಯು ರಾಯಾಪೂರದ ಮಾರ್ಕೆಟಿಂಗ್ ಸೊಸೈಟಿಗೆಯ ಪಕ್ಕದಲ್ಲಿ ಇದೆ ಈ ಪವಿತ್ರ ಸ್ಮಶಾನ ಭೂಮಿಯಲ್ಲಿ ನಮ್ಮನು ಅಗಲಿದವರನ್ನು ಅಂತ್ಯಕ್ರಿಯೆ ಮಾಡುತ್ತಿದ್ದಾರೆ ಧಾರ್ಮಿಕ ವಿಧಿ ವಿಧಾನಗಳನ್ನು ಅನುಸರಿಸುವ ಈ ಕಾರ್ಯವನ್ನು ಮಾಡುತ್ತಾರೆ ಆದರೆ ಕುಡುಕರರಿಗೆ ಇದರ ಗೌರವವೇ ಇಲ್ಲದಂತಾಗಿದ್ದು ಇಲ್ಲಿ ಸಾರಾಯಿ ಬಾಟಲಿಗಳ ದರ್ಬಾರ್ ಮಾಡಿ ಅಲ್ಲಿಯೇ ಹೇಗೆ ಬೇಕೋ ಹಾಗೆ ಎಸೆದು ಹೋದ ದೃಶ್ಯ ಕಾಣಲು ಸಿಗುತ್ತಿದೆ
ಇದರ ಕುರಿತು ನಂದಗಡದ ಸಾಮಾಜಿಕ ಕಾರ್ಯಕರ್ತ ವಾಹೀದ್ ಸಕಲಿ ಅವರು ಸಾಮಾಜಿಕ ಜಾಲತಾಣಗಳಲ್ಲಿ ಇದರ ಬಗ್ಗೆ ಗಮನ ಹರಿಸಿ ಈ ಸ್ಮಶಾನ ಭೂಮಿಯಲ್ಲಿ ನಡೆಯುತ್ತಿರುವ ಇಂತಹ ಪ್ರಕಾರಗಳನ್ನು ನಂದಗಡದ ಗ್ರಾಮ ಪಂಚಾಯಿತಿ ಸೇರಿದಂತೆ ಸದಸ್ಯರು ತಡೆಯಲು ಆಗ್ರಹಿಸಿದ್ದಾರೆ ಈ ಕುರಿತು ನಂದಗಡ ಗ್ರಾಮ ಪಂಚಾಯಿತಿ ಅಧ್ಯಕ್ಷ ಉಪಾಧ್ಯಕ್ಷರ ಸೇರಿದಂತೆ ಸದಸ್ಯರು ಯಾವ ರೀತಿ ಪರಿಗಣಿಸುತ್ತಾರೆಯೂ ಕಾದು ನೋಡಬೇಕಿದೆ.

ಅಲ್ತಾಫ್ ಎಂ ಬಸರೀಕಟ್ಟಿ
ಇನ್ ನ್ಯೂಸ್ ಖಾನಾಪೂರ