ಬೈಕ್ ನಿಯಂತ್ರಣ ತಪ್ಪಿ ಬಿದ್ದು ವ್ಯಕ್ತಿಯೋರ್ವ ಸಾವನ್ನಪ್ಪಿದ ಘಟನೆ ಖಾನಾಪೂರ ತಾಲೂಕಿನಲ್ಲಿ ನಡೆದಿದೆ.
ಖಾನಾಪೂರ ತಾಲೂಕಿನ ನಂದಗಡದ ಕುಂಬಾರಗಲ್ಲಿಯ ನಿವಾಸಿ ಪರಶುರಾಮ ಗೋವಿಂದ ಬೆಳಗಾಂವಕರ (42) ಎಂಬಾತ ಬೆಳಗಾವಿಯಿಂದ ನಂದಗಡದ ಕಡೆ ಬರುತ್ತಿದ್ದ ಸಂದರ್ಭದಲ್ಲಿ ಹೊಸ ಹೆದ್ದಾರಿಯ ಮಲಪ್ರಭಾ ನದಿ ಬ್ರಿಜ್ ಮೇಲೆ ನಿಯಂತ್ರಣ ತಪ್ಪಿ ಅಪಘಾತ ಸಂಭವಿಸಿ ಸ್ಥಳದಲ್ಲೇ ಸಾವನ್ನಪ್ಪಿದ ಘಟನೆ ನಡೆದಿದೆ . ಹಿಂಬದಿ ಸವಾರ ಕೂಡ ಗಾಯಗೊಂಡಿದ್ದು, ಆತನ ಹೆಸರು ತಿಳಿದು ಬಂದಿಲ್ಲ . ಸ್ಥಳಕ್ಕೆ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಖಾನಾಪೂರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಈ ಘಟನೆ ನಡೆದಿದೆ.