Hukkeri

ಹುಕ್ಕೇರಿ : ಕತ್ತಿ ಕೈಯಿಂದ ಕಳಚಿದ ಹುಕ್ಕೇರಿ ವಿದ್ಯುತ್ ಸಹಕಾರಿ ಸಂಘ

Share

ದೇಶದಲ್ಲಿ ಏಕೈಕ ಸಹಕಾರಿ ತತ್ವದಡಿ ವಿದ್ಯುತ್ ಸರಬರಾಜು ಮಾಡುವ ಹುಕ್ಕೇರಿ ಗ್ರಾಮಿಣ ವಿದ್ಯುತ್ ಸಹಕಾರಿ ಸಂಘದ ಆಡಳಿತ ಚುಕ್ಕಾಣಿಯು ಕತ್ತಿ ಕುಟುಂಬದಿಂದ ಕಳಚಿ ಜಾರಕಿಹೋಳಿ ಮತ್ತು ಜೋಲ್ಲೆ ಕೈ ವಶವಾಗುವ ಸಂದರ್ಭ ಕೂಡಿ ಬಂದಿದೆ ಎಂದು ಹೆಳಲಾಗುತ್ತಿದೆ. ಇಂದು ನಡೆದ ವಿದ್ಯುತ್ ಸಹಕಾರಿ ಸಂಘದ ಅಧ್ಯಕ್ಷ ರ ವಿರುದ್ದ ಮಂಡನೆ ಮಾಡಿದ್ದ ಅವಿಸ್ವಾಸ ಗೋತ್ತುವಳಿ ಸ್ವೀಕಾರ ವಾಗಿದೆ. ಸಂಘದ ಅದ್ಯಕ್ಷರ ವಿರುದ್ದ ಆಡಳಿತ ಮಂಡಳಿಯಲ್ಲಿ ಬೀನ್ನಾಭಿಪ್ರಾಯ ಮೂಡಿದ ಪ್ರಯುಕ್ತ ಇಂದು ನಡೆದ ಅವಿಸ್ವಾಸ ಗೋತ್ತುವಳಿಯಲ್ಲಿ ಅದ್ಯಕ್ಷರ ಪರವಾಗಿ ಐದು ಸದಸ್ಯರು ವಿರುದ್ದ 10 ಸದಸ್ಯರು ಮತ ಚಲಾಯಿಸಿದರು.

ಈ ಮೂಲಕ ಅವಿಸ್ವಾಸ ಗೋತ್ತುವಳಿ ಸ್ವೀಕಾರ ವಾಗಿದ್ದರಿಂದ ಕತ್ತಿ ಕುಟುಂಬದ ಆಡಳಿತ ಕೈತಪ್ಪಿದೆ, ಕಳೆದ ಹಲವಾರು ದಶಕಗಳಿಂದ ಕತ್ತಿ ಕುಟುಂಬದ ಬೆಂಬಲಿಗರು ಆಡಳಿತ ನಡೆಸುತ್ತಿದ್ದರು,ಈದಿಗ ಜಾರಕಿಹೋಳಿ ಮತ್ತು ಜೋಲ್ಲೆ ಒಂದಾಗಿ ಕತ್ತಿ ಕುಟುಂಬದ ಆಡಳಿತಕ್ಕೆ ಅಂತ್ಯ ಆಡಿದರು. ಅದ್ಯಕ್ಷ ಕಲಗೌಡ ಪಾಟೀಲ ಮಾತನಾಡಿ ಹದಿನೈದು ಜನರ ನಿರ್ದೆಶಕರು ಒಟ್ಟಾಗಿ ಇದ್ದು ಸಂಘದ ಸದಸ್ಯರ ಸೇವೆಯನ್ನು ಎಂದಿನಂತೆ ಕೈಕೋಳ್ಳುತ್ತೆವೆ ಕುಟುಂಬದಲ್ಲಿ ಬರುವ ಭಿನ್ನಾಭೀಪ್ರಾಯದಂತೆ ಇಲ್ಲಿಯು ಆಗಿದೆ ಆದರೆ ನಮ್ಮಲ್ಲಿ ಒಗ್ಗಟ್ಟು ಇದ್ದು 15 ಜನ ನಿರ್ದೆಶಕರು ಜನ ಸೇವೆಗೆ ಬದ್ದರಾಗಿದ್ದೆವೆ ಎಂದರು

ನಿರ್ದೆಶಕ ಪೃಥ್ವಿ ಕತ್ತಿ ಮಾತನಾಡಿ ಇನ್ನೆರಡು ತಿಂಗಳಲ್ಲಿ ಸಂಘದ ಚುನಾವಣೆ ಜರುಗಲಿದ್ದು ಅದನ್ನು ಎದುರಿಸಲು ಸನ್ನಧ್ಧರಾಗಿದ್ದೆವೆ ಎಂದರು  ನಿರ್ದೆಶಕ ಶಶಿರಾಜ ಪಾಟೀಲ ಮಾತನಾಡಿ ರೈತರ ಸಮಸ್ಯೆಗಳ ಸರಿಯಾಗಿ ಸ್ಪಂದಿಸಲು ಅಗದ್ದರಿಂದ ಅದ್ಯಕ್ಷ ರ ಮೇಲೆ ಅವಿಸ್ವಾಸ ಗೋತ್ತುವಳಿ ಮಂಡಿಸ ಬೇಕಾಯಿತು , ಶಿಘ್ರದಲ್ಲಿ ತೋಟ ಪಟ್ಟಿಗಳ ನಿವಾಸಿಗಳಿಗೆ ನಿರಂತರ ವಿದ್ಯುತ್ ವದಗಿಸುವದು ನಮ್ಮ ಮೊದಲ ಆದ್ಯತೆಯಾಗಿದೆ. ಎಂದರು  ಇನ್ನೊಬ್ಬ ನಿರ್ದೆಶಕ ರವಿ ಹಿಡಕಲ್ ಮಾತನಾಡಿ ರೈತರ ಮತ್ತು ಗ್ರಾಹಕರ ಸಮಸ್ಯೆಗಳನ್ನು ಆ ಭಾಗದ ನಿರ್ದೆಶಕರು ನೇರವಾಗಿ ಆಲಿಸಿ ಪರಿಹರಿಸುವ ಪದ್ದತಿ ಜಾರಿಗೆ ತರಲಾಗುವದು ಇನ್ನೂ ಮುಂದೆ ತಮ್ಮ ಸಮಸ್ಯಗಳಿಗಾಗಿ ಯಾರ ಮನೆ ಬಾಗಿಲಿಗೂ ಹೋಗಬಾರದು ಎಂದು ವಿನಂತಿಸಿಕೊಂಡರು.

ಸಹಕಾರಿ ಅಭಿವೃದ್ಧಿ ಅಧಿಕಾರಿ ಶಶಿಕಲಾ ಪಾಟೀಲ ಮಾತನಾಡಿ ಇಂದು ನಡೆದ ಅವಿಸ್ವಾಸ ಗೋತ್ತುವಳಿ ನಿರ್ಣಯದಲ್ಲಿ ಅವಿಸ್ವಾಸದ ಪರವಾಗಿ ಹತ್ತು ಸದಸ್ಯರು ಮತ್ತು ವಿರುದ್ದ ಐದು ಸದಸ್ಯರು ಮತ ಚಲಾಯಿಸಿದ್ದರಿಂದ ಹಾಲಿ ಅದ್ಯಕ್ಷರ ಅಧೀಕಾರ ತೆರವು ಗೋಂಡಿತು ಎಂದರು
ಈ ಸಂದರ್ಭದಲ್ಲಿ ಎಂ ಡಿ ರವೀಂದ್ರ ಪಾಟೀಲ ಸಂಘದ ಎಲ್ಲ ನಿರ್ದೆಶಕರು ಹಾಜರಿದ್ದರು.

ರಾಜು ಬಾಗಲಕೋಟಿ
ಇನ್ ನ್ಯೂಜ ಹುಕ್ಕೇರಿ.

Tags:

error: Content is protected !!