ಬೆಳಗಾವಿ ತಾಲೂಕಿನ ಉಚಗಾವಯಲ್ಲಿ ಕಾರ್ ಜಖಂಗೊಳಿಸಿದ್ದ ಆನೆ ಮತ್ತೆ ಪ್ರತ್ಯಕ್ಷಗೊಂಡು ಜನರಲ್ಲಿ ಆತಂಕ ಸೃಷ್ಟಿಸಿದೆ.
ಕಳೆದೊಂದು ವಾರದ ಹಿಂದೆ ಉಚಗಾವನ ಜಮೀನಿನಲ್ಲಿ ನಿಲ್ಲಿಸಿದ್ದ ಕಾರ್ ಮೇಲೆ ದಾಳಿ ಮಾಡಿದ್ದ ಕಾಡಾನೆ ಇಂದು ಅದೇ ಗ್ರಾಮದಲ್ಲಿ ಪ್ರತ್ಯೇಕ್ಷವಾಗಿದ್ದು ಜನರಲ್ಲಿ ಆತಂಕ ಸೃಷ್ಟಿ ಮಾಡುವಂತೆ ಮಾಡಿದೆ. ಹಲವಾರು ಬಾರಿ ಇಲ್ಲಿನ ಗ್ರಾಮಸ್ಥರು ಆನೆ ಸೆರೆ ಹಿಡಿಯುವಂತೆ ಅರಣ್ಯ ಇಲಾಖೆಯ ಅಧಿಕಾರಿಗಳಿಗೆ ಮನವಿ ಮಾಡಿದರೂ ಅದನ್ನು ಹಿಡಿಯುವಲ್ಲಿ ವಿಫಲರಾಗಿದ್ದಾರೆ. ಕೂಡಲೇ ಅದನ್ನು ಸೆರೆ ಹಿಡಿಯಬೇಕೆಂದು ಉಚಗಾವ ಗ್ರಾಮಸ್ಥರು ಆಗ್ರಹಿಸಿದ್ದಾರೆ.

ಸದ್ಯ ಉಚಗಾವಗೆ ಬಂದಿರುವ ಕಾಡಾನೆ ಸಿನೋಳ್ಳಿಯ ಕಡೆಗೆ ಹೋಗಿರುವ ಶಂಕೆ ಇದ್ದು ತಕ್ಷಣ ಅದನ್ನು ಸೆರೆ ಹಿಡಿಯಬೇಕು ಎನ್ನುವುದು ಜನರ ಆಗ್ರಹವಾಗಿದೆ.