animal

ಕುರಿಮಂದೆಯಿಂದ ಕುರಿಗಳ್ಳತನ… ಕ್ರಮಕೈಗೊಳ್ಳದ ಪೊಲೀಸರು, ಬೆಳಗಾವಿ ಜಿಲ್ಲಾಧಿಕಾರಿಗಳಿಗೆ ಮನವಿ ಸಲ್ಲಿಸಿದ ಕುರುಬರು…

Share

ಮನೆಗಳ್ಳತನ, ಸರಗಳ್ಳತನದ ಪ್ರಕರಣಗಳ ಬಳಿಕ ಈಗ ಬೆಳಗಾವಿಯಲ್ಲಿ ಕುರಿಗಳ್ಳತನ ಸದ್ದು ಮಾಡಿದೆ. ಬೆಳಗಾವಿ ತಾಲೂಕಿನ ವಿವಿಧೆಡೆ ಕುರಿಗಾಹಿಗಳ ಮಂದೆಯಿಂದ ಕುರಿಗಳನ್ನು ಕಳುವು ಮಾಡಲಾಗುತ್ತಿದ್ದು, ಕರ್ನಾಟಕ ಪೊಲೀಸರಿಂದ ಸ್ಪಂದನೆ ದೊರೆಯುತ್ತಿಲ್ಲವೆಂದು ಆರೋಪಿಸಿ ಕರ್ನಾಟಕ ಪ್ರದೇಶ ಕುರುಬರ ಸಂಘದ ನೇತೃತ್ವದಲ್ಲಿ ಕುರಿಗಾಹಿಗಳು ಪ್ರತಿಭಟನೆಯನ್ನು ನಡೆಸಿ, ಜಿಲ್ಲಾಧಿಕಾರಿಗಳಿಗೆ ಮನವಿಯನ್ನು ಸಲ್ಲಿಸಲಾಯಿತು.

ಮನೆಗಳ್ಳತನ, ಸರಗಳ್ಳತನದ ಪ್ರಕರಣಗಳ ಬಳಿಕ ಈಗ ಬೆಳಗಾವಿಯಲ್ಲಿ ಕುರಿಗಳ್ಳತನ ಸದ್ದು ಮಾಡಿದೆ. ಬೆಳಗಾವಿ ತಾಲೂಕಿನ ವಿವಿಧೆಡೆ ಕುರಿಗಾಹಿಗಳ ಮಂದೆಯಿಂದ ಕುರಿಗಳನ್ನು ಕಳುವು ಮಾಡಲಾಗುತ್ತಿದ್ದು, ಕರ್ನಾಟಕದ ಪೊಲೀಸರು ಕ್ರಮಕೈಗೊಳ್ಳುತ್ತಿಲ್ಲವೆಂಬ ಆರೋಪ ಕೇಳಿ ಬಂದಿದೆ. ಇಂದು ಬೆಳಗಾವಿಯ ಜಿಲ್ಲಾಧಿಕಾರಿಗಳ ಕಾರ್ಯಲಯದ ಎದುರು ಕರ್ನಾಟಕ ಪ್ರದೇಶ ಕುರುಬರ ಸಂಘದ ನೇತೃತ್ವದಲ್ಲಿ ಕುರಿಗಾಹಿಗಳು ಪ್ರತಿಭಟನೆಯನ್ನು ನಡೆಸಿ, ಜಿಲ್ಲಾಧಿಕಾರಿಗಳಿಗೆ ಮನವಿಯನ್ನು ಸಲ್ಲಿಸಿದರು.

 

ಬೆಳಗಾವಿ ಗ್ರಾಮೀಣ ಪ್ರದೇಶದಲ್ಲಿ ಇತ್ತಿಚೆಗೆ ಕುರಿಗಳ್ಳರ ಹಾವಳಿ ಹೆಚ್ಚಾಗಿದೆ. ಬೆಳಗಾವಿಯ ಗ್ರಾಮೀಣ ಮತ್ತು ಕಾಕತಿ ಪೊಲೀಸ ಠಾಣೆಯಲ್ಲಿ ದೂರು ದಾಖಲಿಸಲಾಗಿದೆ. ಕೊಲ್ಹಾಪುರದ ಪನ್ಹಾಳ ಪೊಲೀಸ್ ಠಾಣೆಯವರು ಕುರಿಗಳ್ಳರನ್ನು ಬಂಧಿಸಿದ್ದಾರೆ. ಆದರೇ ಕುರಿಗಾಹಿಗಳಿಗೆ ಕರ್ನಾಟಕದ ಪೊಲೀಸರು ಇದಕ್ಕೆ ಸ್ಪಂದಿಸದೇ, ದಿಕ್ಕು ತಪ್ಪಿಸುವ ಕೆಲಸ ಮಾಡುತ್ತಿದ್ದಾರೆ. ಕುರಿಗಾಹಿಗಳಿಗೆ ನ್ಯಾಯ ಮತ್ತು ಪರಿಹಾರವನ್ನು ನೀಡಬೇಕು. ಚಂದಗಢ ತಾಲೂಕಿನ ತುಡಯೇ ಗ್ರಾಮದ ಪರಶುರಾಮ ಮಾರುತಿ ಪವಾರ ಮಟನ್ ಶಾಪ್ ಇಟ್ಟುಕೊಂಡಿದ್ದು, ರಾತ್ರಿಯ ವೇಳೆ ಗುಂಪು ಕಟ್ಟಿಕೊಂಡು ಬಂದು ಕುರಿಗಳನ್ನು ಕಳುವು ಮಾಡುತ್ತಿದ್ದಾನೆ. ಇದರಿಂದಾಗಿ ಕುರಿಗಾಹಿಗಳು ಲಕ್ಷಾಂತರ ರೂಪಾಯಿಯ ನಷ್ಟವನ್ನು ಅನುಭವಿಸುತ್ತಿದ್ದಾರೆಂದು ಮಾಜಿ ಮಹಾಪೌರ ಯಲ್ಲಪ್ಪ ಕುರಬರ ಆಗ್ರಹಿಸಿದರು.

ಇನ್ನು ಕಳೆದ ಮೂರು ತಿಂಗಳಲ್ಲಿ ಸುಮಾರು 150 ಕ್ಕೂ ಹೆಚ್ಚು ಕುರಿಗಳನ್ನು ಕಳ್ಳತನ ಮಾಡಲಾಗಿದೆ. ಕುರಿಗಳ್ಳರ ಮಾಹಿತಿ ನೀಡಿ ನಾಲ್ಕು ಬಾರಿ ದೂರು ದಾಖಲಿಸಿದರೂ ಬೆಳಗಾವಿಯ ಪೊಲೀಸರು ಕ್ರಮಕೈಗೊಳ್ಳಲು ಮೀನಮೇಷ ಎಣಿಸುತ್ತಿದ್ದಾರೆ. ಇದರಿಂದಾಗಿ ಕಷ್ಟಪಟ್ಟು ಕುರಿಗಳನ್ನು ಕಾಯುವ ಕುರಿಗಾಹಿಗಳಿಗೆ ಲಕ್ಷಾಂತರ ರೂಪಾಯಿ ನಷ್ಟವಾಗುತ್ತಿದೆ. ಜಿಲ್ಲಾಧಿಕಾರಿಗಳು ಇತ್ತ ಗಮನಹರಿಸಿ, ಕುರಿಗಾಹಿಗಳಿಗೆ ನ್ಯಾಯ ಒದಗಿಸಬೇಕೆಂದು ನಾಗೇಶ ಗಡ್ಡೆ ಆಗ್ರಹಿಸಿದರು.

ಕುರಿಗಳ ಮಂದೆಯಲ್ಲಿ ಕೇವಲ ಒಬ್ಬರು-ಇಬ್ಬರು ಕುರಿಗಾಹಿಗಳಿರುತ್ತಾರೆ. ಹಗಲಲ್ಲಿ ಕುರಿ ಕಾಯ್ದು ರಾತ್ರಿ ಮಲಗಿರುವಾಗ ಬರುವ ಕಳ್ಳರು, ಆಯುಧಗಳನ್ನು ತೋರಿಸಿ ಕುರಿಗಾಹಿಗಳನ್ನು ಹೆದರಿಸಿ, ಕುರಿಗಳನ್ನು ಕಳುವು ಮಾಡುತ್ತಿದ್ದಾರೆ. ಹೀಗಾದರೇ ನಾವು ಜೀವನ ಮಾಡುವುದೇ ಹೇಗೆ? ಕರ್ನಾಟಕ ಪೊಲೀಸರು ನಮಗೆ ಯಾಕೆ ಸ್ಪಂದಿಸುತ್ತಿಲ್ಲವೇಕೆ? ಕೂಡಲೇ ಕಳ್ಳರನ್ನು ಬಂಧಿಸಿ ಕಠಿಣ ಶಿಕ್ಷೆ ನೀಡಬೇಕೆಂದು ಕುರಿಗಾಹಿ ಬಾಬು ಸಾಂಬ್ರೇಕರ ಹೇಳಿದರು.

ಇತ್ತಿಚೆಗೆ ಕುರಿಗಳ ಮಂದೆಯಿಂದ ಕುರಿಗಳನ್ನು ಕಳುವು ಮಾಡುವ ಪ್ರಕರಣ ಎಲ್ಲೆಡೆ ನಡೆಯುತ್ತಿವೆ. ಸಿಎಂ ಸಿದ್ಧರಾಮಯ್ಯನವರು ನಮಗೆ ನ್ಯಾಯ ಒದಗಿಸಬೇಕು. ನೀಡಿದ ಭರವಸೆಯಂತೆ ಲೈಸೆನ್ಸ್ ನೀಡಬೇಕು. ಕುರುಬರ ಸಮಾಜವನ್ನು ಉಳಿಸಲು ಈ ಸಮಸ್ಯೆಯನ್ನು ಗಂಭೀರವಾಗಿ ಪರಿಗಣಿಸಬೇಕೆಂದು ಪ್ರತಿಭಟನಾಕಾರರು ವಿನಂತಿಸಿದರು.

ಈ ಸಂದರ್ಭದಲ್ಲಿ ಶಿವಾಜೀರಾವ್ ಶಹಾಪೂರಕರ, ಕೃಷ್ಣಾ ಕುರಬರ, ಮಲ್ಲಪ್ಪ ಪಾಟೀಲ್, ರಾಮಾ ಹೊಳಕೇರಿ, ವಿಠ್ಠಲ ಸಾಂಬ್ರೇಕರ ಸೇರಿದಂತೆ ಇನ್ನುಳಿದ ಕುರಿಗಾಹಿಗಳು ಭಾಗಿಯಾಗಿದ್ಧರು.

Tags:

error: Content is protected !!