ಹಿಜಾಬ್, ಶಾಲು ಹಾಕೊಂಡ್ ಬಂದ್ರೆ ಕಾಲೇಜಿಗೆ ನೋ ಎಂಟ್ರಿ. ಮಕ್ಕಳು ಇಲ್ಲಿಯವರೆಗೆ ಯಾವ ಸಮವಸ್ತ್ರ ಧರಿಸಿ ಬರುತ್ತಿದ್ದರೋ ಅದೇ ಶಾಲಾ ಸಮವಸ್ತ್ರದಲ್ಲಿಯೇ ಬರಬೇಕು. ಇನ್ನು ಈ ಪ್ರಕರಣ ಹೈಕೋರ್ಟ್ನಲ್ಲಿ ತೀರ್ಪು ಬರುವವರೆಗೂ ಅದೇ ಸಮವಸ್ತ್ರವನ್ನು ಧರಿಸಿಕೊಂಡು ಬರಬೇಕು ಎಂದು ಶಿಕ್ಷಣ ಸಚಿವ ಬಿ.ಸಿ ನಾಗೇಶ್ ಸೂಚಿಸಿದ್ದಾರೆ.
ವಿ/ವೊ: ಸಿಎಂ ಗೃಹ ಕಚೇರಿ ಕೃμÁ್ಣದಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ಇಂದು ಮುಖ್ಯಮಂತ್ರಿಗಳಿಗೆ ಹಿಜಾಬ್ ವಿಚಾರದಲ್ಲಿ ಕಾನೂನು ಇಲಾಖೆ, ಶಿಕ್ಷಣ ಇಲಾಖೆ ಸಲಹೆ ನೀಡಿದೆ. ಅಡ್ವೋಕೇಟ್ ಜನರಲ್ ಅಭಿಪ್ರಾಯ ಪಡೆದು ನ್ಯಾಯಾಲಯಕ್ಕೆ ಸರ್ಕಾರದ ನಿಲುವು ಏನು ಎನ್ನುವುದನ್ನು ತಿಳಿಸಲಾಗುತ್ತದೆ. ನಮ್ಮ ಕಾನೂನು ಇಲಾಖೆ ಕಾಯ್ದೆ ಮತ್ತು ನಿಯಮ ಏನು ಹೇಳಲಿದೆ ಎನ್ನುವ ವಿಚಾರವನ್ನು ನಮ್ಮೆಲ್ಲರಿಗೂ ತಿಳಿಸುವ ಪ್ರಯತ್ನವನ್ನು ಇಂದಿನ ಸಭೆಯಲ್ಲಿ ಮಾಡಲಾಗಿದೆ ಎಂದರು.

ಹಿಜಾಬ್, ಶಾಲು ಹಾಕೊಂಡ್ ಬಂದ್ರೆ ನೋ ಕಾಲೇಜುಗಳಲ್ಲಿ ಪ್ರವೇಶವಿಲ್ಲ. ಕೋರ್ಟ್ ತೀರ್ಪು ಬರೋವರೆಗೂ ಈಗಿರುವ ಸಮವಸ್ತ್ರ ಧರಿಸಿಯೇ ಬರಬೇಕು. ಎಸ್ಡಿಎಂಸಿಗಳು ತಮ್ಮ ಶಾಲೆಯಲ್ಲಿ ಶೈಕ್ಷಣಿಕ ವರ್ಷಕ್ಕೂ ಮೊದಲೇ ಸಮವಸ್ತ್ರ ರೂಪಿಸಿದ್ದರೋ, ಮಕ್ಕಳು ಇಲ್ಲಿಯವರೆಗೆ ಯಾವ ಸಮವಸ್ತ್ರ ಧರಿಸಿ ಬರುತ್ತಿದ್ದರೋ ಅದೇ ಸಮವಸ್ತ್ರದಲ್ಲಿ ಬರಬೇಕು. ಈ ಕುರಿತು ಹೈಕೋರ್ಟ್ನಲ್ಲಿ ಪ್ರಕರಣದ ತೀರ್ಪು ಬರುವವರೆಗೂ ಅದೇ ಸಮವಸ್ತ್ರವನ್ನು ಧರಿಸಿಕೊಂಡು ಬರಬೇಕು ಎಂದು ಶಿಕ್ಷಣ ಸಚಿವ ಬಿ.ಸಿ ನಾಗೇಶ್ ಸೂಚಿಸಿದ್ದಾರೆ.

ಹೈಕೋರ್ಟ್ ತೀರ್ಪು ಬರುವವರೆಗೂ ಈಗ ಇರುವ ಸಮವಸ್ತ್ರ ನಿಯಮ ಪಾಲನೆ ಮಾಡಬೇಕು. ಹಿಜಾಬ್, ಕೇಸರಿ ಶಾಲು ಧರಿಸಿ ಶಾಲೆಗೆ ಬರಲು ಅವಕಾಶವಿಲ್ಲ, ಆ ರೀತಿ ಬಂದಲ್ಲಿ ಅವರನ್ನು ಶಾಲೆಗೆ ಸೇರಿಸದಂತೆ ಸೂಚನೆ ನೀಡಲಾಗಿದೆ ಎಂದು ಶಿಕ್ಷಣ ಸಚಿವ ಬಿ.ಸಿ ನಾಗೇಶ್ ಸ್ಪಷ್ಟಪಡಿಸಿದ್ದಾರೆ.