State

ಸಿದ್ದರಾಮಯ್ಯ ವೋಟ್ ದುರಾಸೆಗೆ ತಾಲಿಬಾನ್‍ವಾದವನ್ನು ಕಾಲೇಜುಗಳಲ್ಲಿ ತರಲು ಪ್ರಯತ್ನಿಸುತ್ತಾರೆ:ಸಿ.ಟಿ ರವಿ ಆರೋಪ

Share

ಬುರ್ಖಾ ಧರಿಸುವುದು ಹಾಗೂ ಹಿಜಾಬ್ ಧರಿಸುವುದು ಈಗಲೂ ಇಸ್ಲಾಂಧರ್ಮದಲ್ಲಿ ಮಹಿಳೆಯರ ಮೇಲಿನ ಶೋಷಣೆಯನ್ನು ಪ್ರತಿಪಾದಿಸುವಂಥದ್ದು. ಸಿದ್ಧರಾಮಯ್ಯ ವೋಟ್ ದುರಾಸೆಗೆ ತಾಲಿಬಾನ್ ವಾದವನ್ನು ಕಾಲೇಜುಗಳಲ್ಲಿ ತರಲು ಪ್ರಯತ್ನ ಮಾಡುತ್ತಿದ್ದಾರೆ ಎಂದು ಬಿಜೆಪಿ ರಾಷ್ಟ್ರೀಯ ಕಾರ್ಯದರ್ಶಿ ಸಿ.ಟಿ ಕಿಡಿಕಾರಿದ್ದಾರೆ.

ಕಾರವಾರದಲ್ಲಿ ಮಾಧ್ಯಮಗಳೊಂದಿಗೆ ಮಾತನಾಡಿದ ಸಿ.ಟಿ.ರವಿ ರವರು, ಕಾಂಗ್ರೆಸ್ ಸುಧಾರಣೆಯ ವಿರೋಧಿ ಎಂಬುದು ಈ ಮೂಲಕ ತಿಳಿಯುತ್ತದೆ. ನಮ್ಮ ಹಿಂದೂ ಧರ್ಮದಲ್ಲಿಯೂ ಕೂಡ ಸತೀಸಹಗಮನ ಪದ್ಧತಿ, ಬಾಲ್ಯ ವಿವಾಹ, ಅಸ್ಪøಶ್ಯತೆಯಂಥ ಆಚರಣೆಗಳಿದ್ದವು. ಆದರೆ ನಾವಿನ್ನು ಅವುಗಳನ್ನು ಆಚರಿಸಿಕೊಂಡು ಬಂದಿದ್ದೀವಾ… ಇಲ್ಲ. ನಮ್ಮನ್ನು ನಾವು ಬದಲಾವಣೆಗೆ ತೆರೆದುಕೊಂಡೆವು. ಈಗ ಯಾರಾದರೂ ಇವುಗಳನ್ನು ಆಚರಣೆ ಮಾಡಿದರೆ ಅವರನ್ನು ತೆಗೆದು ಜೈಲಿಗೆ ಹಕುತ್ತೇವೆ. ಇದು ಸಮಾಜ ಬದಲಾವಣೆಯಗುವ ನಿಯಮವಾಗಿದೆ.

ಆದರೆ ಇಸ್ಲಾಂನಲ್ಲಿ ಯಾಕೆ ಪರಿವರ್ತನೆಯಾಗುತ್ತಿಲ್ಲ. ಬುರ್ಖಾ ಹಾಗೂ ಹಿಜಾಬ್ ಅದು ಶೋಷಣೆಯ ಅಭಿವ್ಯಕ್ತಿಯನ್ನು ತೋರಿಸುತ್ತದೆ. ಇಂಥಹ ಆಚರಟಿಣೆಗಳಿಂದ ಬದಲಾವಣೆಯಾಗದ ಇಸ್ಲಾಂನಲ್ಲಿ ಸುಧಾರಣೆ ಮಾಡುವ ಅವಶ್ಯಕತೆಯಿದೆ. ಇಸ್ಲಾಂ ಬಾಹುಳ್ಯದ ರಾಷ್ಟ್ರಗಳಲ್ಲಿಯೇ ಹಿಜಾಬ್ ಕಡ್ಡಾಯವಿಲ್ಲ. ಅವರೂ ಕೂಡ ಬದಲಾವಣೆಗೆ ಒಗ್ಗಿಕೊಂಡಿದ್ದಾರೆ. ಆದರೆ ಸಿದ್ಧರಾಮಯ್ಯ ಈ ವಿಚಾರದಲ್ಲಿ ಶಾಆ ಕಾಲೇಜುಗಳ ಮಕ್ಕಳಲ್ಲಿ ಧರ್ಮದ ಭೂತವನ್ನು ತುಂಬಲು ಪ್ರಯತ್ನಿಸುತ್ತಿದ್ದಾರೆ. ಈಂಥಹ ಸ್ಥಿತಿಯನ್ನು ನೋಡಿ ನಾನು ಸಿದ್ದರಾಮಯ್ಯನವರನ್ನು ಮಾಜಿ ಸಿಎಂ ಎನ್ನಬೇಕು, ವಕೀಲರೆನ್ನಬೇಕೋ, ಅಥವಾ ಮುತ್ಸದ್ದಿ ರಾಜಕಾರಣಿ ಎನ್ನಬೇಕೋ ತಿಳಿಯುತ್ತಿಲ್ಲ. ಸಿದ್ದರಾಮಯ್ಯನವರ ಈ ನಡೆ ಅವರಲ್ಲಿರುವ ಮತೀಯವಾದದ ಭೂತ ತುಂಬಿಕೊಂಡಿರುವುದಕ್ಕೆ ಕಾರಣವಾಗಿದೆ ಎಂದರು.

ಇನ್ನು ಮುಂದುವರೆದು ಶಾಲಾ ಸಮವಸ್ತ್ರ ಕುರಿತಂತೆ ಮಾತನಾಡಿದ ಅವರು, 1983ರ ಶಿಕ್ಷಣ ಕಾಯ್ದೆಯಂತೆ ಆಯಾ ಶಾಲೆಗಳಲ್ಲಿ ಏನೇನು ಸಮವಸ್ತ್ರವಿರಬೇಕು ಎಂಬುದನ್ನು ಆಯಾ ಶಾಲೆಗಳೇ ತೀರ್ಮಾನ ಮಾಡಬೇಕು. ಆ ಶಾಲಾ ನಿಯಮಗಳನ್ನು ಎಲ್ಲರೂ ಪಾಲಿಸಬೇಕೆಂದು ಹೇಳುತ್ತದೆ. ಹಾಗಾದರೆ ಸಿದ್ದರಾಮಯ್ಯನವರ ಮಸುಕಿನ ಬುದ್ಧಿಗೆ ಏನು ಹೇಳಬೇಕು.

ಈ ಮೂಲ ಎಲ್ಲವೂ ಸರಿಯಾಗ ಗೊತ್ತಾಗುತ್ತೆ. ಸಿದ್ಧರಾಮಯ್ಯನವರ ತಲೆಯಲ್ಲಿ ಮತೀಯವಾದದ ಪೆಡಂಭೂತ , ತಾಲಿಬಾನಿ ಪ್ರವೃತ್ತಿ ತುಂಬಿಕೊಂಡಿದೆ. ಅದನ್ನು ಶಾಲಾ ಕಾಲೆಜುಗಳಲ್ಲಿ ತರಲು ಪರಯತ್ನಿಸುತ್ತಿದ್ದೀರಿ. ಈ ಮೂಲಕ ಹಿಜಾಬ್ ಪರವಾಗಿ ವಕಾಲತು ಹಾಕಿ ಮತಗಳನ್ನು ಪಡೆಯಬಹುದೆಂದು ತಾಲಿಬಾನ್ ಸಂಸ್ಕøತಿಯನ್ನು ಕಾಲೇಜುಗಳಲ್ಲಿ ತರಲು ಪ್ರಯತ್ನಿಸುತ್ತಿದ್ದೀರಿ. ಇದರಿಂ ದೇಶ ಹಾಗೂ ಸಮಾಜಕ್ಕೆ ಒಳ್ಳೆಯದಾಗುವುದಿಲ್ಲ.

Tags:

error: Content is protected !!