ಬೆಳಗಾವಿಯ ಕರಡಿಗುಡ್ಡ ಕುಟುಂಬವು ಸಾಲ ತೀರಿಸಿದೆ ಬಡ್ಡಿ ಹಾವಳಿಗೆ ಬೆಂದು ಸಾಲ ಮರುಪಾವತಿ ಮಾಡದಿದ್ದಕ್ಕೆ ಮನೆಯಲ್ಲಿರುವ ಸಾಮಾನುಗಳನ್ನು ಕುಟುಂಬ ಸಮೇತ ಹೊರಗೆ ಹಾಕಿದ ಕಿರಾತಕ.

ಬೆಳಗಾವಿ ಜಿಲ್ಲೆಯ ರಾಮದುರ್ಗ ತಾಲೂಕಿನ ಕರಡಿಗುಡ್ಡ ಕುಟುಂಬವು 2017 ರಲ್ಲಿ ಮೌಲಾ ಅಲ್ತಪ್ಪ ಸುರಕೋಡ ಎಂಬುವವರ ಹತ್ತಿರ 9 ಲಕ್ಷ ಸಾಲ ತೆಗೆದುಕೊಂಡಿದ್ದು. ಈಗ ಸಾಲ ತೀರಿಸಲು ಆಗದೇ ಇರುವ ಕಾರಣ ಕರಡಿಗುಡ್ಡ ಕುಟುಂಬವನ್ನು ಮನೆಯಿಂದ ಹೊರಗೆ ಹಾಕಿರುವ ಘಟಣೆ ನಡೆದಿದೆ.

: ಮೌಲಾ ಅಲ್ತಪ್ಪ ಸುರಕೋಡ ಎಂಬುವರ ಸಾಲ ತೀರಿಸಲು, ರಕ್ತ ಸಂಬಂಧಿ ವಿಠ್ಠಲ ಕರಡಿಗುಡ್ಡ ಬಳಿ 2018 ರಲ್ಲಿ 15 ಲಕ್ಷ ಸಾಲ ಮಾಡಿದ್ದಾರೆ. ಸುಮಾರು 15ಲಕ್ಷದ ವರೆಗೆ ಸಾಲ ಪಡೆದಿದ್ದ ಕುಟುಂಬವು ಎರಡು ವರ್ಷ ಮನೆ ಅಡಾ ಇಟ್ಟು ಸಾಲ ತೆಗೆದುಕೊಂಡಿದ್ದಾರೆ. ಕೇವಲ ಎರಡೇ ತಿಂಗಳಲ್ಲಿ ವಿಠ್ಠಲ ಕರಡಿಗುಡ್ಡ ಪುಂಡಲಿಕ ಮೇಟಿ ಎಂಬುವರಿಗೆ ಮನೆ ಮಾರಿದ್ದಾನೆ ಎಂದು ಅರೋಪವಿದೆ. ಸದ್ಯ ಮೇಟಿ ಕುಟುಂಬದ ಸದಸ್ಯರು ಹಾಗೂ ವಿಠ್ಠಲ ಕರಡಿಗುಡ್ಡ ಕುಟುಂಬ ಸದಸ್ಯರಿದಂದ ಮನೆಗೆ ನುಗ್ಗಿ ದಾಳಿ ಮಾಡಲಾಗಿದೆ. ಸಾಲ ನೀಡುವಂತೆ ಮನೆಯಲ್ಲಿರುವ ವಸ್ತುಗಳನ್ನು ಹೊರಗೆ ಹಾಕಿ ದಬ್ಬಾಳಿಕೆ ಮಾಡಿದರು ಕೂಡ ಕಣ್ಣು ಮುಚ್ಚಿ ಕುಳಿತ ಪೆÇಲೀಸ್ ಇಲಾಖೆಯ ಸಿಬ್ಬಂದಿಗಳು.