Belagavi

ಬೆಳ್ಳಂಬೆಳಿಗ್ಗೆ ಶಹಾಪೂರ್‍ದಲ್ಲಿ ಉದ್ಯಮಿ ಮನೆಗೆ ಕನ್ನ ಹಾಕಿದ ಖದೀಮರು: ಬೆಳೆಬಾಳುವ ವಸ್ತು ಕದ್ದು ಪರಾರಿ

Share

ಬೆಳಗಾವಿಯ ಶಹಾಪೂರ್‍ದಲ್ಲಿ ಬೆಳಿಗ್ಗೆ 8:30ರ ಸುಮಾರಿಗೆ ಉದ್ಯಮಿಯೊಬ್ಬರ ಮನೆಗೆ ಕನ್ನ ಹಾಕಿದ ಖದೀಮರು ಬೆಲೆಬಾಳುವ ವಸ್ತುಗಳನ್ನು ಕದ್ದು ಪರಾರಿಯಾಗಿದ್ದಾರೆ. ಇದರಿಂದ ಸಾರ್ವಜನಿಕರಲ್ಲಿ ಭಯದ ವಾತಾವರಣ ಉಂಟಾಗಿದೆ.

ನಗರದ ಶಹಾಪೂರ್‍ದಲ್ಲಿ ಬೆಳಿಗ್ಗೆ 8:30ರ ಸುಮಾರಿಗೆ ಸುನೀಲ್ ಬಿಜಾಪುರೆ ಎಂಬವರ ಮನೆಯಲ್ಲಿ ಕಳ್ಳತನವಾಗಿದೆ. ಸುನೀಲ್ ಬಿಜಾಪುರೆ ಪಂ. ರಾಂಭವ್ ಬಿಜಾಪುರೆ ರವರ ಸಹೋದರರಾಗಿದ್ದಾರೆ. ತಮ್ಮ ಸಂಬಂಧಿಗಳನ್ನು ಡ್ರಾಪ್ ಮಾಡಲು ಕೊಗನಳ್ಳಿಗೆ ಹೋಗಿದ್ದರು. ಈ ವೇಳೆ ಸ್ಥಳೀಯರು ಹೇಳುವಂತೆ ಇಬ್ಬರು ಕಳ್ಳರು ಮನೆಯ ಮುಖ್ಯ ಬಾಗಿಲನ್ನು ಮುರಿದು ಮನೆಯಲ್ಲಿದ್ದ ಟ್ರೆಸರಿ ಒಡೆದು ಬೆಲೆಬಾಳುವ ವಸ್ತುಗಳನ್ನು ಕಳ್ಳತನ ಮಾಡಿದ್ದರೆ. ಇನ್ನು ಈ ವಿಷಯವನ್ನು ಸ್ಥಳೀಯರು ಶಹಾಪೂರ್ ಪೊಲೀಸರಿಗೆ ಹಾಗೂ ಸುನೀಲ್ ಬಿಜಾಪುರೆ ರವರಿಗೆ ತಿಳಿಸಿದ್ದಾರೆ. ಇನ್ನು ಸಿನೀಲ್ ಬಿಜಾಪುರೆರವರು ಮಾಗ್ ಅರ್ಧಕ್ಕೇ ವಾಪಸ್ ಬರುತ್ತಿದ್ದಾರೆ ಎಂದು ಸ್ಥಳೀಯರು ತಿಳಿಸಿದ್ದಾರೆ.

Tags:

error: Content is protected !!