Belagavi

ಬೆಳಗಾವಿಯಲ್ಲಿ ಬೀದಿ ನಾಯಿ ಸಾಕುವ ವಿಚಾರಕ್ಕೆ ಜಗಳ: ನಗರ ಪೊಲೀಸ್ ಆಯುಕ್ತರ ಮೊರೆ ಹೋದ ಮಹಿಳೆ..!

Share

ನಾವು ಬೀದಿ ನಾಯಿಗಳಿಗೆ ಆಹಾರವಿಟ್ಟು ಆರೈಕೆ ಮಾಡಿದರೆ ಎದುರು ಮನೆಯವರು ಅವಕ್ಕೆ ಬಿಸಿನೀರು ಹಾಕಿ ತೊಂದರೆ ನೀಡುತ್ತಿದ್ದಾರೆ. ಈ ಕುರಿತು ಪೊಲೀಸರಗೆ ದೂರು ನೀಡಿದರೆ ನಮ್ಮ ಮೇಲೆಯೇ ಪೊಲೀಸರು ದಬಾಯಿಸುತ್ತಾರೆ ಎಂದು ಅನಿತಾ ಶಂಕರ್ ದೊಡಮನಿ ನಗರಪೊಲೀಸ್ ಆಯುಕ್ತರಿಗೆ ದೂರು ನೀಡಿದ್ದಾರೆ.

ಅನಿತಾ ಶಂಕರ್ ದೊಡಮನಿ ಬೆಳಗಾವಿ ಖಾಸಬಾಗ್‍ದ ಮಾರುತಿಗಲ್ಲಿಯ ವಾರ್ಡ್ ನಂ 21ರ ನಿವಾಸಿ. ಇವರು ರಸ್ತೆಯಲ್ಲಿ ಅಲೆದಾಡುವ ಬೀದಿ ನಾಯಿಗಳಿಗೆ ಅಲ್ಲಿ ಇಲ್ಲಿ ಅಲೆದು ಆಹಾರ ತಂದು ಸುಮಾರು 8 ನಾಯಿಗಳನ್ನು ಸಾಕಿದ್ದಾರೆ. ಇನ್ನು ಅನ್ನವನ್ನು ಆಶ್ರಯಿಸಿ ಆ ನಾಯಿಗಳು ಅಲ್ಲಿಯೇ ಅವರ ಮನೆಯ ಪಕ್ಕದಲ್ಲಿಯೇ ವಾಸ್ತವ್ಯ ಹೂಡಿವೆ. ಆದರೆ ಎದುರು ಮನೆಯ ವಿಜಯ ಮತ್ತು ವನಿತಾ ಭಸ್ಮೆ ಎಂಬ ದಂಪತಿ ಮಲಗಿರುವ ನಯಿಗಳ ಮೇಲೆ ಬಿಸಿನೀರನ್ನು ಎರಚಿ ಅವಕ್ಕೆ ನೋವನ್ನುಂಟುಮಾಡುತ್ತಿದ್ದಾರೆ. ಈ ಕುರಿತು ಹೇಳಿದ್ರೆ ನಾಯಿಗಳ ಬೀದಿಯಲ್ಲಿ ಹೊಲಸು ಮಾಡುತ್ತವೆ.

ನಮ್ಮ ಮನೆಯ ರಂಗೋಲಿಯನ್ನು ಹಾಳು ಮಾಡುತ್ತವೆ ಎಂದು ಕಾರಣಗಳನ್ನು ಹೇಳಿ ನಮ್ಮೊಂದಿಗೆ ಜಗಳಕ್ಕೆ ನಿಲ್ಲುತ್ತಾರೆ. ಈ ಕುರಿತಂತೆ ಶಹಾಪೂರ್ ಪೊಲೀಸ್ ಠಾಣೆಯ ಸಿಪಿಐ ವಿನಾಯಕ್ ಬಡಿಗೇರ್‍ರವರಿಗೆ ದೂರು ನೀಡಲು ಹೋದರೆ ಹೆಣ್ಣು ಮಕ್ಕಳು ಎನ್ನದೇ ನಮ್ಮನ್ನೇ ದಬಾಯಿಸಿ ಕಳಿಸಿದ್ದಾರೆ. ನಮ್ಮೊಂದಿಗೆ ಏಕವಚನದಲ್ಲಿಯೇ ಮಾತನಾಡಿದ್ದಾರೆ. ಹಾಗಾಗಿ ಈ ಕುರಿತಂತೆ ಸಿಪಿಐ ವಿನಾಯಕ ಬಡಿಗೇರ್ ಮೇಲೆ ಕ್ರಮ ಕೈಗೊಳ್ಳುವಂತೆ ನಗರ ಪೊಲೀಸ್ ಆಯುಕ್ತರಾದ ಡಾ.ಬೋರಲಿಂಗಯ್ಯ ರವರಿಗೆ ಮನವಿ ಮಾಡಿದ್ದಾರೆ.

ಇನ್ನು ತಮಗೆ ನ್ಯಾಯ ಕೊಡಿಸಿ ಸಿಪಿಐ ವನಾಯಕ ಬಡಿಗೇರ್ ಮೇಲೆ ಕ್ರಮ ಕೈಗೊಳ್ಳುವಂತೆ ಕಮಿಶನರ್‍ರವರಿಗೆ ಮನವಿ ಸಲ್ಲಿಸಿದ್ದಾರೆ.

Tags:

error: Content is protected !!