ವಿಜಯಪುರ ನಗರದಲ್ಲಿ ಜೆಸಿಬಿಗಳು ಬೆಳ್ಳಂಬೆಳಗೆ ಘರ್ಜಿಸಿವೆ. ಬೃಹತ್ ಪ್ರಮಾಣದ ಕಾರ್ಯಾಚರಣೆ ನಡೆಯಿತು. ಮಹಾನಗರ ಪಾಲಿಕೆಯಿಂದ ಅತಿಕ್ರಮಣ ತೆರವು ಕಾರ್ಯಾಚರಣೆ ಯೂ ವಿಜಯಪುರ ನಗರದ ಅಥಣಿ ರಸ್ತೆಯಲ್ಲಿನ ಶಾಸ್ತ್ರೀ ನಗರದಲ್ಲಿನ ರಸ್ತೆ ಅತಿಕ್ರಮಿಸಿದ 29 ಮನೆಗಳನ್ನು ತೆರವುಗೊಳಿಸಿ ಜೆಸಿಬಿಗಂಹ ಧರೆಗುಳಿಸಿದವು. ಮೂರು ಜೆಸಿಬಿಗಳಿಂದ ಕಾರ್ಯಾಚರಣೆ ನಡೆಯಿತು. ಕಾರ್ಯಾಚರಣೆಯಲ್ಲಿ ಮಹಾನಗರ ಪಾಲಿಕೆ ಆಯುಕ್ತ ವಿಜಯಕುಮಾರ ಮೆಕ್ಕಳಕಿ ನೇತೃತ್ವದಲ್ಲಿ ಕಾರ್ಯಾಚರಣೆ ನಡೆಯಿತು. ಒತ್ತುವರಿ ತೆರವು ಕಾರ್ಯಾಚರಣೆಗೆ ವಿವಿಧ ಇಲಾಖೆ ಅಧಿಕಾರಿಗಳ ಸಾಥ್ ನೀಡಿದ್ದು ಅತಿಕ್ರಮಣ ತೆರವು ಮಾಡುವಂತೆ ಪಾಲಿಕೆಯಿಂದ ನೋಟಿಸ್ ಜಾರಿ ಮಾಡಲಾಗಿತ್ತು. ಸರ್ವೆ ನಂ.672ಕ ದಲ್ಲಿ ಅತಿಕ್ರಮಣವಾಗಿ ಕಟ್ಟಿದ ಮನೆಗಳನ್ನು ತೆರವುಗೊಳಿಸಿಲಾಯಿತು. ಸ್ಥಳದಲ್ಲಿ ಮನೆ ಕಳೆದುಕೊಂಡವರ ಕಣ್ಣೀರು ಹಾಕುತ್ತಿದ್ದರು.ಸ್ಥಳದಲ್ಲಿ ಬಿಗುವಿನ ವಾತಾವರಣ ಉಂಟಾಗಿದ್ದರಿಂದ ಪೊಲೀಸ್ ಭದ್ರತೆ ಹಾಕಲಾಗಿತ್ತು. ಮನೆಯಲ್ಲಿ ಉಳಿದ ವಸ್ತುಗಳ ಸ್ಥಳಾಂತರಿಸುತ್ತಿರುವ ದೃಶ್ಯಗಳು ಕಂಡು ಬಂದವು.
