Belagavi

ಕಣ್ಮರೆಯ ಅಂಚಿನಲ್ಲಿರುವ ಕನ್ನಡ ಶಾಲೆಗಳ ಉಳಿವಿಗಾಗಿ ರಾಜ್ಯಾದ್ಯಂತ ಯುವಕನ ಸೈಕಲ್ ಯಾತ್ರೆ..!

Share

ಈತನೊಬ್ಬ ಅಪ್ಪಟ ಕನ್ನಡದ ಅಭಿಮಾನಿ. ಸಿರಿಗನ್ನಡಂ ಗೆಲ್ಗೆ, ಸಿರಿಗನ್ನಡಂ ಬಾಳ್ಗೆ ಎಂಬ ಮಾತಿನಂತೆ ಕನ್ನಡವನ್ನು ಉಳಿಸೋಕೆ ಕಂಕಣಬದ್ಧರಾಗಿದ್ದಾರೆ. ಸೈಕಲ್ ಮೇಲೆ ಇಡೀ ರಾಜ್ಯವನ್ನು ಸುತ್ತಿ ಎಲ್ಲಾ ಜಿಲ್ಲೆಗಳ ಜಿಲ್ಲಾಧಿಕಾರಿಗಳಿಗೆ ಕನ್ನಡ ಶಾಲೆಗಳನ್ನು ಉಳಿಸುವಂತೆ ಮನವಿ ಮಾಡುತ್ತಿದ್ದಾರೆ. ಕನ್ನಡಕ್ಕೆ ಕಂಕಣಬದ್ಧರಾಗಿ ಕೆಲಸ ಮಾಡುತ್ತಿರುವ ಈ ಅಪರೂಪ ಕನ್ನಡಿಗನ ಕುರಿತ ಒಂದು ವರದಿ ಇಲ್ಲಿದೆ ನೋಡಿ…

ಎಕ್ಕಡ ಎನ್ನಡ ಮಧ್ಯೆ ಸೊರಗುತಿದೆ ನಮ್ಮ ಕನ್ನಡ ಎನ್ನುವ ಮಾತಿಗೆ ಸೆಡ್ಡು ಹೊಡೆದು ಕರ್ನಾಟಕದಲ್ಲಿ ಕನ್ನಡವೇ ಎಲ್ಲಾ. ಕನ್ನಡಿಗನೇ ಇಲ್ಲಿ ಸಾರ್ವಭೌಮ. ಕನ್ನಡ ಕೇವಲ ಭಾಷೆಯಲ್ಲ. ಅದು ನಮ್ಮ ಬದುಕು. ಹಾಗಾಗಿ ನಮ್ಮ ಮುಂದಿನ ಪೀಳಿಗೆಗೆ ಕನ್ನಡ ಉಳಿಯಬೇಕೆಂಬ ನಿಟ್ಟಿನಲ್ಲಿ ರಾಜ್ಯದಲ್ಲಿ ಎಲ್ಲಾ ಕನ್ನಡ ಶಾಲೆಗಳು ಕಾರ್ಯ ನಿರ್ವಹಿಸಬೇಕು. ರಾಜ್ಯದ ಯಾವುದೇ ಜಿಲ್ಲೆಯಲ್ಲಿ ಒಂದೂ ಕನ್ನಡ ಶಾಲೆಗಳು ಮುಚ್ಚಬಾರದು. ಕೆಲ ಗಡಿಭಾಗಗಳಲ್ಲಿ ಮುಚ್ಚುವ ಸ್ಥಿತಿಯಲ್ಲಿರು ಕನ್ನಡ ಶಾಲೆಗಳನ್ನು ಯಾವುದೇ ಕಾರಣಕ್ಕೂ ಮುಚ್ಚದಂತೆ ತುಮಕೂರಿನ ರಾಹುಲ್ ಎಂಬವರು ಸೈಕಲ್ ಮೂಲಕ ಜಾಗೃತಿ ಜಾಥಾ ಕೈಗೊಂಡಿದ್ದಾರೆ. ಕಣ್ಮರೆಂiÀi ಅಂಚಿನಲ್ಲಿರುವ ಕನ್ನಡ ಶಾಲೆಗಳ ಉಳಿವಿಗಾಗ ಎಂಬ ಶೀರ್ಶಿಕೆಯಡಿ ತಮ್ಮ ಸೈಕಲ್ ಜಾಥಾ ಪ್ರಾರಂಭಿಸಿದ್ದಾರೆ. ಇನ್ನು ರಾಜ್ಯದ ಎಲ್ಲಾ ಜಿಲ್ಲೆಗಳ ಜಲ್ಲಾಧಿಕಾರಿಗಳಿಗೆ ಮನವಿ ಸಲ್ಲಿಸುತ್ತ ಸಾಗುತ್ತಿರುವ ರಾಹುಲ್‍ರವರು, ಡಿಸೆಂಬರ್ 27ರಂದು ತುಮಕೂರಿನಿಂದ ತಮ್ಮ ಯಾತ್ರೆಯನ್ನು ಪ್ರಾರಂಭಿಸಿದ್ದಾರೆ. 47ನೇ ದಿನವಾದ ಇಂದು ಬೆಳಗಾವಿಗೆ ತಲುಪಿದ್ದಾರೆ. ಇದು ಅವರು ಪ್ರವಾಸ ಮಾಡುತ್ತಿರುವ 15ನೇ ಜಿಲ್ಲೆಯಾಗಿದೆ. ಬೆಳಗಾವಿಗೆ ಆಗಮಿಸಿದ ರಾಹುಲ್ ಕಣ್ಮರೆಯ ಅಂಚಿನಲ್ಲಿರುವ ಕನ್ನಡ ಶಾಲೆಯನ್ನು ಉಳಿಸಲು ಜಿಲ್ಲಾಧಿಕಾರಿಗಳಿಗೆ ಮನವಿ ಮಾಡಿದ್ದಾರೆ

ಇನ್ನು ಕನ್ನಡ ಶಾಲೆಗಳ ಉಳಿವಿಗಾಗಿ ಪಣತೊಟ್ಟಿರಿವ ರಾಹಲ್, ತಮ್ಮ ಕಾರ್ಯದ ಮೂಲಕವೇ ತಮ್ಮ ತಾಯಿ ನುಡಿಯನ್ನು ಹಾಗೂ ತಾಯಿನುಡಿಯ ಶಾಲೆಗಳನ್ನು ಉಳಿಸುವ ಉದ್ದೇಶದಿಂದ ಈ ಕಾರ್ಯ ಕೈಗೊಂಡಿದ್ದಾರೆ. ಗಂಗೆಯನ್ನು ಭೂಮಿಗೆ ತಂದ ಭಗೀರಥನಂತೆ ಕನ್ನಡದ ಉಳಿವಿಗೆ ಸೈಕಲ್ ಹೊಡೆಯುತ್ತಿದ್ದಾರೆ.

ಇನ್ನು ತುಮಕೂರಿನವರಾದ ರಾಹುಲ್ ಪಕ್ಕಾ ಪವರ್ ಸ್ಟಾರ್ ಪುನೀತ್ ರಾಜ್‍ಕುಮಾರ್ ರವರ ಅಭಿಮಾನಿ. ಕನ್ನಡಕ್ಕಾಗಿ ಅವರ ಕಾರ್ಯ ಹಾಗೂ ಸಮಾಜ ಸೇವೆಗಳಿಂದಾಗಿ ಪ್ರಾಭಾವಿತರಾದವರು. ಮೊದಲಿನಿಂದಲೂ ಕನ್ನಡಕ್ಕಾಗಿ ಏನಾದರೂ ಮಾಡಬೇಕೆಂಬ ಹುಮ್ಮಸ್ಸಿತ್ತು. ಹಾಗಾಗಿ ಈ ಕಾರ್ಯಕ್ಕೆ ಕೈ ಹಾಕಿದ್ದಾಗಿ ಹೇಳಿದ್ದಾರೆ. ಇನ್ನು ಎಲ್ಲಾ ಜಿಲ್ಲೆಗಳಲ್ಲಿ ವಿವಿಧ ಕನ್ನಡ ಪರ ಸಂಘಟನೆಗಳು ಹಾಗೂ ಜನತೆ ರಾಹುಲ್‍ರವರಿಗೆ ಸಾಕಷ್ಟು ಸಹಾಯ ಮಾಡಿದ್ದಾರೆ. ಹಾಗಾಗಿ ಮುಂದೆ ಬಾಗಲಕೋಟೆ ಜಿಲ್ಲಾಧಿಕಾರಿಗಳಿಗೆ ಮನವಿ ಮಾಡಲು ಬಾಗಲಕೋಟೆಗೆ ಹೋಗುತ್ತಿರುವುದಾಗಿ ಹೇಳಿದರು

ಇನ್ನು ಕನ್ನಡದ ಉಳಿವಿಗಾವಿ, ಕನ್ನಡ ಶಾಲೆಗಳ ಉಳಿವಿಗಾಗಿ ರಾಹುಲ್‍ರವರು ಮಾಡುತ್ತಿರುವ ಈ ಕಾರ್ಯ ಮಾದರಿಯಾದುದು. ಇವರ ಮುಂದಿನ ದಾರಿ ಸುಖಮಯವಾಗಿರಲಿ. ಇವರ ಕಾರ್ಯ ಕೈಗೂಡಲಿ ಎಂದು ನಾವೂ ಹಾರೈಸುತ್ತೇವೆ.

Tags:

error: Content is protected !!