Belagavi

ಅಂಡಮಾನ್-ನಿಕೋಬಾರ್‍ನಲ್ಲಿ ನಾವಿದ್ದೇವೆ: ದೇವರಾಜ್ ಅರಸ್ ಕಾಲೋನಿ ನಿವಾಸಿಗಳು ಹೀಗ್ಯಾಕೆ ಅಂದ್ರು..?

Share

ಅಭಿವೃದ್ಧಿಯಿಂದ ವಂಚಿತವಾಗಿರುವ ಬೆಳಗಾವಿಯ ದೇವರಾಜ್ ಅರಸ್ ಕಾಲೋನಿಯಲ್ಲಿ ಮೂಲಸೌಕರ್ಯ ವ್ಯವಸ್ಥೆ ಕಲ್ಪಿಸಿಕೊಡುವಂತೆ ಇಲ್ಲಿನ ನಾಗರಿಕರು ಜಿಲ್ಲಾಧಿಕಾರಿಗಳಿಗೆ ಆಗ್ರಹಿಸಿದ್ದಾರೆ.

ಹೌದು ದೇವರಾಜ್ ಅರಸ್ ಕಾಲೋನಿ ಬೆಳಗಾವಿ ನಗರಾಭಿವೃದ್ಧಿ ಪ್ರಾಧಿಕಾರದ ಯೋಜನೆ 11ರಲ್ಲಿ 1980ರಲ್ಲಿ ನಿರ್ಮಾಣವಾದ ಬಡಾವಣೆ. ಬಡವಾಣೆಯನ್ನು ಏನು ಬುಡಾ ಅಧಿಕಾರಿಗಳು ಮಾಡಿದ್ದಾರೆ. ಆದರೆ ಇಲ್ಲಿನ ನಿವಾಸಿಗಳಿಗೆ ಕನಿಷ್ಠ ಮೂಲಸೌಕರ್ಯ ವ್ಯವಸ್ಥೆ ಮಾಡಿಕೊಡಬೇಕು ಎಂಬುದನ್ನೆ ಮರೆತು ಬಿಟ್ಟಿದ್ದಾರೆ. ಬಡಾವಣೆ ನಿರ್ಮಾಣವಾಗಿ 40 ವರ್ಷ ಕಳೆದರೂ ಕೂಡ ಇಲ್ಲಿನ ಕೆಲ ಬೀದಿಗಳಲ್ಲಿ ರಸ್ತೆ, ಚರಂಡಿ, ಕುಡಿಯುವ ನೀರಿನ ವ್ಯವಸ್ಥೆಯನ್ನು ಮಾಡಿಲ್ಲ. ಇದು ಸಧ್ಯ ಇಲ್ಲಿನ ಜನರ ಆಕ್ರೋಶಕ್ಕೆ ಕಾರಣವಾಗಿದೆ. ಹೀಗಾಗಿ ಸೋಮವಾರ ಡಿಸಿ ಕಚೇರಿಗೆ ಆಗಮಿಸಿದ ಇಲ್ಲಿನ ನಿವಾಸಿಗಳು ತಮ್ಮ ಬೇಡಿಕೆ ಈಡೇರಿಸುವಂತೆ ಜಿಲ್ಲಾಧಿಕಾರಿಗಳಿಗೆ ಮನವಿ ಸಲ್ಲಿಸಿದರು.

ಈ ವೇಳೆ ಮಾತನಾಡಿ ವ್ಹಿ.ಬಿ.ಮಡಿವಾಳರ ದೇವರಾಜ್ ಅರಸ್ ಕಾಲೋನಿ ವಾರ್ಡ ನಂಬರ್ 48ರಲ್ಲಿ ಬರುತ್ತದೆ. 1980ರಲ್ಲಿ ಬುಡಾದ ಯೋಜನೆ 11ರಲ್ಲಿ ದೇವರಾಜ್ ಅರಸ್ ಬಡಾವಣೆ ನಿರ್ಮಾಣವಾಗಿದೆ. ಅಲ್ಲಿಂದ ಇಲ್ಲಿಯವರೆಗೂ ಕೆಲವು ಕಡೆ ಮಾತ್ರ ರಸ್ತೆ, ಚರಂಡಿ, ಕುಡಿಯುವ ನೀರಿನ ವ್ಯವಸ್ಥೆ ಆಗಿದೆ. ಬಹುತೇಕ ಕಡೆ ಯಾವುದೇ ರೀತಿ ಅಭಿವೃದ್ಧಿ ಆಗಿಲ್ಲ. ಅಂಡಮಾನ್, ನಿಕೋಬಾರ್‍ನಲ್ಲಿ ನಾವು ಇದ್ದಂಗೆ ಆಗಿದೆ. ಹೊರಗಡೆ ಹೋಗಲು ಯಾವುದೇ ಬೈಪಾಸ್ ರಸ್ತೆ ಇಲ್ಲ. ಬೆಳಗಾವಿ ಸಾಂಬ್ರಾದಿಂದ ಬೈಪಾಸ್ ರಸ್ತೆ ಮಾಡಿ ಕೊಡಬೇಕು.

ಅಧಿಕಾರಿಗಳು ಏನು ಮಾಡುತ್ತಿದ್ದಾರೆ ಎಂಬುದೇ ನಮಗೆ ಗೊತ್ತಾಗುತ್ತಿಲ್ಲ ಎಂದು ತಮ್ಮ ಅಸಮಾಧಾನ ಹೊರ ಹಾಕಿದರು.
ಈ ಸಂದರ್ಭದಲ್ಲಿ ಕೆ.ಬಿ.ರೇಳೇಕರ್, ಎಮ್.ಎ.ಬೋರಣ್ಣವರ, ಬಿ.ಸಿ.ಮೂಲಿಮನಿ, ಬಿ.ಸಿ.ಕುಲಕರ್ಣಿ, ಜೆ.ಜೆ.ಚೌಗುಲೆ, ಎಸ್.ವಾಯ್.ರಂಗನ್ನವರ, ಅಶೋಕ ಭೀರಡಿ ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು.

Tags:

error: Content is protected !!